ಪಾಕ್ ಡ್ರೋನ್ನಲ್ಲಿ ಆರ್ಡಿಎಕ್ಸ್;ಗುರುದಾಸ್ಪುರ ಬಳಿಯ ಗಡಿಯಲ್ಲಿ ಬಿಎಸ್ಎಫ್ ಕಾರ್ಯಾಚರಣೆ
Team Udayavani, Feb 10, 2022, 6:55 AM IST
ಸಾಂದರ್ಭಿಕ ಚಿತ್ರ.
ನವದೆಹಲಿ/ಅಮೃತಸರ: ಪಂಜಾಬ್ಗ ಹೊಂದಿಕೊಂಡಂತೆ ಇರುವ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ಬಿಎಸ್ಎಫ್ ಯೋಧರು ಬುಧವಾರ ಹೊಡೆದು ಉರುಳಿಸಿದ್ದಾರೆ. ಕೆಳಕ್ಕೆ ಉರುಳಿದ ಡ್ರೋನ್ನಿಂದ 4 ಕೆಜಿ ಆರ್ಡಿಎಕ್ಸ್, ಒಂದು ಪಿಸ್ತೂಲು, ಬಾಂಬ್ ತಯಾರಿಕಾ ಸಾಮಗ್ರಿಗಳನ್ನು ಪಶಪಡಿಸಿಕೊಳ್ಳಲಾಗಿದೆ. ಭಾರತ-ಪಾಕಿಸ್ತಾನ ಗಡಿಯಿಂದ ಸುಮಾರು 2.7 ಕಿ.ಮೀ.ವರೆಗೂ ಸಾಗಿಬಂದಿತ್ತೆಂದು ಅಧಿಕಾರಿಗಳು ಹೇಳಿದ್ದಾರೆ.
ರಾತ್ರಿ ಹೊತ್ತು ಕೇಳಿಬಂದ ಶಬ್ದ
ಮಂಗಳವಾರ ತಡರಾತ್ರಿ 1 ಗಂಟೆಗೆ ಪಾಕಿಸ್ತಾನದ ಗಡಿಯಾಚೆಯಿಂದ ವಿಮಾನದಂಥ ವಸ್ತುವೊಂದು ಹಾರಾಡುವ ಧ್ವನಿ ಕೇಳಿ ಬಂತು. ಶಬ್ದ ಬಂದ ಕಡೆಗೆ ದೃಷ್ಟಿ ಹಾಯಿಸಿದಾಗ ಅದು ಡ್ರೋನ್ ಎಂದು ಖಚಿತವಾಯಿತು. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಬಿಎಸ್ಎಫ್ ಯೋಧರು, ಗುಂಡು ಹಾರಿಸುವ ಮೂಲಕ ಅದನ್ನು ಹೊಡೆದುರುಳಿಸಿದರು.
ಹುಡುಕಾಟ
ಡ್ರೋನ್ ಹೊಡೆದುರುಳಿಸಿದ ಕೂಡಲೇ ಅದರ ಅವಶೇಷಗಳನ್ನು ಹುಡುಕಲು, ಆ ಪ್ರಾಂತ್ಯದ ಘಗ್ಗರ್ ಹಾಗೂ ಸಿಂಘೋಕೆ ಹಳ್ಳಿಗಳ ಹೊರವಲಯದಲ್ಲಿರುವ ಹೊಲಗದ್ದೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿದ್ದು. ಆ ಸಂದರ್ಭದಲ್ಲಿ, ಎರಡು ಹಳದಿ ಬಣ್ಣದ ಚೀಲಗಳು ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗೆ ಬೇಕಾದ ಸಾಮಗ್ರಿಗಳು
“ಮೊದಲಿಗೆ ಅವುಗಳಲ್ಲಿ ಮಾದಕ ವಸ್ತುಗಳಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಚೀಲಗಳನ್ನು ತೆರೆದು ನೋಡಿದಾಗ ಒಂದರಲ್ಲಿ 4.7 ಕೆಜಿ ಆರ್ಡಿಎಕ್ಸ್, ಚೀನಾ ನಿರ್ಮಿತ ಪಿಸ್ತೂಲು, 22 ಬುಲೆಟ್ಗಳುಳ್ಳ ಎರಡು ಮ್ಯಾಗಜಿನ್, ಮೂರು ಇಲೆಕ್ಟ್ರಾನಿಕ್ ಡಿಟೋನೇಟರ್ಗಳು, ಟೈಮರ್ ಯಂತ್ರ, ಡಿಟೋನೇಟಿಂಗ್ ವೈರ್, ಸ್ಲಿಂಟರ್ಸ್, ಸೆಲ್ಗಳು, ಸ್ಟೀಲ್ ಕಂಟೈನರ್, ನೈಲಾನ್ ದಾರ, ಪ್ಲಾಸ್ಟಿಕ್ ಪೈಪ್, ಪ್ಯಾಕಿಂಗ್ ಸಾಮಗ್ರಿಗಳು ಹಾಗೂ 1 ಲಕ್ಷ ರೂ. ಹಣ ಇತ್ತು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಸಿಕ್ಕಿರುವ ಆರ್ಡಿಎಕ್ಸ್ ಸಾಮಗ್ರಿಯು ಮಿಲಿಟರಿ ಗ್ರೇಡ್ನದ್ದು ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ