ಕಟ್ಟಡ ನಿರ್ಮಾಣಕ್ಕೆ ಅನುಮತಿ ಕಡ್ಡಾಯ : ಪುರಸಭೆ ಮುಖ್ಯಾಧಿಕಾರಿ ಕಟ್ಟಪ್ಪಣೆ
Team Udayavani, Jan 9, 2021, 2:32 PM IST
ಮುದ್ದೇಬಿಹಾಳ: ಪಟ್ಟಣದಲ್ಲಿ ಪುರಸಭೆ ಅನುಮತಿ ಇಲ್ಲದೆ ನಡೆಯುತ್ತಿರುವ ಕಟ್ಟಡ ಕಾಮಗಾರಿ ತಡೆಯುವುದಕ್ಕಾಗಿ ನೀಡಿದ್ದ ನೋಟಿಸ್ ತೀವ್ರ ವಾಗ್ವಾದ, ಮಾತಿನ ಚಕಮಕಿಗೆ ಅವಕಾಶ ಮಾಡಿಕೊಟ್ಟಿದ್ದೂ ಅಲ್ಲದೆ ದೂರು ನೀಡಿದವರನ್ನೇ ನಿಂದಿಸಿದ, ಪೊಲೀಸರ ಮಧ್ಯಪ್ರವೇಶವನ್ನೇ ಪ್ರಶ್ನಿಸಿದ ಘಟನೆ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ನಡೆದಿದೆ.
ಎಂಜಿವಿಸಿ, ವಿಬಿಸಿ, ಅಂಜುಮನ್ ಸಂಸ್ಥೆಯವರು ತಮ್ಮ ಆಸ್ತಿಯಲ್ಲಿ ನಡೆಸುತ್ತಿರುವ ಕಟ್ಟಡ ಕಾಮಗಾರಿಗಳಿಗೆ ಪುರಸಭೆ ಅನುಮತಿ
ನೀಡಿಲ್ಲ. ಅನುಮತಿ ಇಲ್ಲದೆ ಕಟ್ಟಡ ಕಾಮಗಾರಿ ಕಾನೂನು ಬಾಹಿರ. ಇದಕ್ಕೆ ಅವಕಾಶ ಕೊಡಬಾರದು. ಕಾಮಗಾರಿ ತಡೆಯಬೇಕು
ಎಂದು ದಲಿತ ಯುವ ಸೇನೆ ಅಧ್ಯಕ್ಷ ಪರಶುರಾಮ ಮುರಾಳ, ಮಹಾಂತೇಶ ದಡ್ಡಿ ಅವರು ಪುರಸಭೆಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಳ್ಳದಿದ್ದರೆ ಪುರಸಭೆ ಎದುರು ಪ್ರತಿಭಟಿಸುವ ಎಚ್ಚರಿಕೆಯನ್ನೂ
ಮುರಾಳ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಾಧಿಕಾರಿ ಗೋಪಾಲ ಕಾಸೆಯವರು ಸಂಬಂಧಿಸಿದವರಿಗೆ ನೋಟಿಸ್ ನೀಡಿ ಅನುಮತಿ ಪಡೆದುಕೊಂಡ ನಂತರವೇ ಕಟ್ಟಡ ಕೆಲಸ ಪ್ರಾರಂಭಿಸುವಂತೆ ಸೂಚಿಸಿದ್ದರು.
ಕಾವೇರಿದ ಚರ್ಚೆ, ವಾಗ್ವಾದ: ನೋಟಿಸ್ ವಿಷಯಕ್ಕೆ ಸಂಬಂಧಿಸಿದಂತೆ ಎಂಜಿವಿಸಿ, ವಿಬಿಸಿ ಆಡಳಿತ ಮಂಡಳಿಯವರು ಅನುಮತಿ ಪಡೆದುಕೊಂಡೇ ಕಟ್ಟಡ ಕಾಮಗಾರಿ ನಡೆಸಲು ಒಪ್ಪಿದ್ದರು. ಆದರೆ ಅಂಜುಮನ್ ಸಂಸ್ಥೆಯವರು ನೋಟಿಸ್ ನೀಡಿದ್ದಕ್ಕೆ ತಕರಾರು ಮಾಡಿ ನೋಟಿಸ್ ನೀಡಿದ್ದ ಔಚಿತ್ಯವನ್ನೇ ಪ್ರಶ್ನಿಸಿದ್ದರು. ಪೊಲೀಸರಿಗೆ ದೂರು ನೀಡಿದ್ದಕ್ಕೆ ಕೋಪಗೊಂಡು ಮುಖ್ಯಾಧಿಕಾರಿ ಜೊತೆ ಸಂಘರ್ಷಕ್ಕೆ ಮುಂದಾಗಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಭಾ ಭವನದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಮತ್ತು ಕೆಲ ಸದಸ್ಯರ ಎದುರೇ ಮಾತಿನ ಜಟಾಪಟಿ ನಡೆಯಿತು. ಅಂಜುಮನ್ ಸಂಸ್ಥೆ ಅಧ್ಯಕ್ಷ ಅಲ್ಲಾಭಕ್ಷ ನಾಯೊRàಡಿ, ಉಪಾಧ್ಯಕ್ಷ ಜಬ್ಟಾರ್ ಗೋಲಂದಾಜ್, ಪುರಸಭೆ ಮಾಜಿ
ಅಧ್ಯಕ್ಷ ಬಸನಗೌಡ ಪಾಟೀಲ, ಪಿಂಟು ಸಾಲಿಮನಿ ಅವರು ಪೊಲೀಸರ ಮಧ್ಯಪ್ರವೇಶವನ್ನೇ ಪ್ರಶ್ನಿಸಿ ಪಿಎಸೈ ಜೊತೆ ವಾಗ್ವಾದಕ್ಕಿಳಿದರು.
ಇದನ್ನೂ ಓದಿ: ಬೈಕ್ ಗೆ ಜೆಸಿಬಿ ಢಿಕ್ಕಿಯಾಗಿ ಕಾರ್ಮಿಕ ಸಾವು: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ನಾವು ಜನಪ್ರತಿನಿಧಿಗಳು, ಚುನಾಯಿತ ಪ್ರತಿನಿಧಿ. ನಾವು ನಮ್ಮ ಸಮಾಜಕ್ಕೆ ಉತ್ತರ ಕೊಡಬೇಕಾಗುತ್ತದೆ. ನಮ್ಮ ಸಮಾಜದಲ್ಲಿ ನಾವು ಪ್ರಥಮ ಪ್ರಜೆ ಎನ್ನುವ ಗೌರವ ಇದೆ. ಸಣ್ಣ ವಿಷಯಕ್ಕೆ ಒಬ್ಬ ಮನುಷ್ಯ ಅರ್ಜಿ ಕೊಟ್ಟಿದ್ದರ ಸಲುವಾಗಿ ಸಮಾಜದ ಅಧ್ಯಕ್ಷನನ್ನು ಪೊಲೀಸ್ ಠಾಣೆಗೆ ಕರೆಸುವುದು ಎಷ್ಟು ಸರಿ ಎಂದರು. ಇದರಿಂದ ಗರಂ ಆದ ಪಿಎಸೈ ತಕರಾರು ಅರ್ಜಿ ಕೊಡಲು ಪ್ರತಿಯೊಬ್ಬರಿಗೂ ಅಧಿಕಾರ ಇದೆ. ಯಾರನ್ನೂ ಹಿಯಾಳಿಸಿ ಮಾತಾಡುವಂತಿಲ್ಲ ಎಂದು ಆಕ್ಷೇಪಿಸಿದರು.
ದೂರು ಅರ್ಜಿ ಕೊಟ್ಟವರ ಮೇಲೆ ಗುಂಡಾ ಆ್ಯಕ್ಟ್ ಅದಾವು, ರೌಡಿ ಶೀಟ್ ಅದಾವು ಎಂದು ಅಂಜುಮನ್ ಸಂಸ್ಥೆಯವರು ಮತ್ತೇ ಕೆಣಕಿದ್ದು ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು. ಅರ್ಜಿ ಕೊಟ್ಟವರ ರಕ್ಷಣೆಗೆ ಪುರಸಭೆ ಸದಸ್ಯ ಶಿವು ಶಿವಪುರ ಸೇರಿದಂತೆ ಕೆಲವರು ಧಾವಿಸಿ ಬಂದರು.
ಪರಿಸ್ಥಿತಿ ಅರಿತ ಉಪಾಧ್ಯಕ್ಷ ಗೋಲಂದಾಜ್ ಎದ್ದು ನಿಂತು ನೋಟಿಸ್ ಕೊಟ್ಟು 7 ದಿನ ಉತ್ತರ ನೀಡಲು ಅವಕಾಶ ಇದ್ದರೂ ನೋಟಿಸ್ ಕೊಟ್ಟ ಕೂಡಲೇ ಪೊಲೀಸ್ ಠಾಣೆಗೆ ಕರೆದದ್ದೇಕೆ ಎಂದು ಪ್ರಶ್ನಿಸಿ ವಿಷಯಾಂತರಕ್ಕೆ ಯತ್ನಿಸಿದರು. ಈ ವೇಳೆ
ಗೊಂದಲ ಸೃಷ್ಟಿಯಾಗಿ ಯಾರ ಮಾತೂ ಸರಿಯಾಗಿ ಕೇಳದಂತಾಯಿತು.
ನೋಟಿಸ್ಗೆ ಉತ್ತರ: ಬಹು ಹೊತ್ತಿನವರೆಗೂ ಇದೇ ವಿಷಯದ ಮೇಲೆ ಚರ್ಚೆ ನಡೆದರೂ ಕಾನೂನು ಬಿಟ್ಟು ಏನೂ ಮಾಡುವಂತಿಲ್ಲ ಎನ್ನುವ ತೀರ್ಮಾನಕ್ಕೆ ಬಂದ ಮುಖ್ಯಾಧಿಕಾರಿ ಯಾವುದೇ ಆಸ್ತಿ ಇದ್ದರೂ ಕಟ್ಟಡ ಕಾಮಗಾರಿ ನಡೆಸಲು
ಪುರಸಭೆ ಅನುಮತಿ ಪಡೆದುಕೊಳ್ಳಲೇಬೇಕು. ಎಂಜಿವಿಸಿಯವರು, ವಿಬಿಸಿಯವರು ಒಪ್ಪಿದ್ದಾರೆ. ನಿಮ್ಮದ್ಯಾಕೆ ತಕರಾರು. ಕಾನೂನು ಎಲ್ಲರಿಗೂ ಒಂದೇ ಎಂದು ಗಟ್ಟಿಯಾಗಿ ಹೇಳಿದರು. ಕೊನೆಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರು ಸಿಟಿಎಸ್ ನಂಬರ್ 2552 ವಕ್ಫ್ ಆಸ್ತಿಯಾಗಿದ್ದು ಪರವಾನಗಿ ಪಡೆಯುವುದು ಅವಶ್ಯವಿರುವುದಿಲ್ಲ. ಇದಕ್ಕೆ ಸಂಬಂಧಿಸಿದ ಕಾಗದ ಪತ್ರ ಪುರಸಭೆ ಕಚೇರಿಗೆ ತಲುಪಿಸಲಾಗುತ್ತದೆ ಎಂದು 30-12-2020ರಂದು ನೀಡಿದ ನೋಟಿಸ್ಗೆ ಉತ್ತರ ನೀಡುವುದಾಗಿ ಲಿಖೀತ
ಮನವಿ ಪತ್ರವನ್ನು ಮುಖ್ಯಾಧಿಕಾರಿಗೆ ಸಲ್ಲಿಸಿ ಕಾಲಾವಕಾಶ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ