ಚಿಂಚೋಳಿಯಲ್ಲಿ ಕಳುವಾಗಿದ್ದ ಕೆಎಸ್ ಆರ್ ಟಿಸಿ ಬಸ್ ಭೂಕೈಲಾಸದಲ್ಲಿ ಪತ್ತೆ!
ಬೆಳಗಿನ ಜಾವ 3:37 ನಿಮಿಷಕ್ಕೆ ಬಸ್ ಕಳ್ಳತನವಾಗಿರುವುದು ಗೊತ್ತಾಯಿತು.
Team Udayavani, Feb 22, 2023, 5:20 PM IST
Representative Image
ಚಿಂಚೋಳಿ: ಬೀದರ್ ನಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಬಂದಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಕಳುವಾಗಿ ನೆರೆಯ ತೆಲಂಗಾಣ ರಾಜ್ಯದಲ್ಲಿ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.
ಬೀದರ ಡಿಪೋಗೆ ಸೇರಿದ ಈ ವಸತಿ ಬಸ್ ಸೋಮವಾರ ರಾತ್ರಿ 9ಗಂಟೆಗೆ ಚಿಂಚೋಳಿ ತಲುಪಿತ್ತು. ಬಸ್ ನಿಲ್ದಾಣದ ಪ್ಲಾಟ್ಫಾರಂ-3ರಲ್ಲಿ ಬಸ್ ನಿಲ್ಲಿಸಿದ ಚಾಲಕ ಮಹ್ಮದ್ ಅಯೂಬ್ ಹಾಗೂ ನಿರ್ವಾಹಕ ಈರಪ್ಪ ಬಸ್ನಲ್ಲಿಯೇ ಎಂದಿನಂತೆ ಊಟ ಮಾಡಿ, ಬಳಿಕ ವಿಶ್ರಾಂತಿ ಕೋಣೆಗೆ ಹೋಗಿ ಮಲಗಿದ್ದರು.
ಮರುದಿನ ಬೆಳಿಗ್ಗೆಯ ಟ್ರಿಪ್ಗೆ ಹೊರಡಲು ಚಾಲಕ ಮಹ್ಮದ್ ಅಯೂಬ್ ನಸುಕಿನ ಜಾವ ಐದು ಗಂಟೆಗೆ ಬಂದಾಗ ನಿಲ್ದಾಣದಲ್ಲಿ ಬಸ್ ಕಾಣಿಸಲಿಲ್ಲ. ಹೀಗಾಗಿ ಡಿಪೋ ವ್ಯವಸ್ಥಾಪಕ ಅಶೋಕ ಪಾಟೀಲ ಅವರ ಗಮನಕ್ಕೆ ತಂದರು.
ಅವರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಬೆಳಗಿನ ಜಾವ 3:37 ನಿಮಿಷಕ್ಕೆ ಬಸ್ ಕಳ್ಳತನವಾಗಿರುವುದು ಗೊತ್ತಾಯಿತು. ಚಿಂಚೋಳಿ ಪಿಎಸ್ಐ ಮಹೆಬೂಬ್ ಅಲಿ
ನಿಲ್ದಾಣದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಸ್ ಚಲಾಯಿಸಿಕೊಂಡು ಮಿರಿಯಾಣ ಮಾರ್ಗವಾಗಿ ಹೋಗಿರುವುದು ಗೊತ್ತಾಯಿತು. ತೆಲಂಗಾಣದತ್ತ ಹೋಗಿರಬಹುದೆಂದು ಶಂಕಿಸಿ ಕಾರ್ಯಾಚರಣೆ ನಡೆಸಿದಾಗ ಸಂಜೆ ಹೊತ್ತಿಗೆ ತೆಲಂಗಾಣದ ತಾಂಡೂರ ಬಳಿಯ ತಾಂಡಾದ ಭೂಕೈಲಾಸ ದೇಗುಲದ ಬಳಿ ಚರಂಡಿಯಲ್ಲಿ ಸಿಕ್ಕಿ ಹಾಕಿದ ರೀತಿಯಲ್ಲಿ ಬಸ್ ಪತ್ತೆಯಾಯಿತು.
ಬಸ್ ಕಳವು ಕುರಿತು ವಿಚಾರಣೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಎಂ.ರಾಚಪ್ಪ , ವ್ಯವಸ್ಥಾಪಕ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್