ಕೋವಿಡ್ ನಿಯಂತ್ರಣ: ದ.ಕ. ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಕಾಣಿಸುತ್ತಿಲ್ಲ !
Team Udayavani, Apr 25, 2020, 8:03 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕೋವಿಡ್ ಸೋಂಕಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ ಹೆಚ್ಚಳದ ಆತಂಕ ಎದುರಾಗಿದ್ದರೂ ಕೋವಿಡ್ ನಿಯಂತ್ರಣ ಸಂಬಂಧ ಸರಕಾರದಿಂದ ನಿನಿಯೋಜನೆಗೊಂಡಿರುವ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ಮಾತ್ರ ಈಗ ಜಿಲ್ಲೆಯಲ್ಲಿ ಕಾಣಿಸುತ್ತಿಲ್ಲ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿದ್ದಂತೆ ಬೆಂಗಳೂರಿನಿಂದ ದೌಡಾಯಿಸಿ ರೋಗ ವ್ಯಾಪಕವಾಗದಂತೆ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ಪ್ರಶಂಸೆಗೆ ಪಾತ್ರರಾದವರು ಪೊನ್ನುರಾಜ್. ಆದ್ದರಿಂದ ಈಗ ಅವರು ಕಾಣಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಮುತುವರ್ಜಿ ವಹಿಸಿದ್ದ ಅವರು ಕಾಸರಗೋಡಿನಿಂದ ಜಿಲ್ಲೆಗೆ ವಾಹನಗಳ ಪ್ರವೇಶಕ್ಕೆ ಕೇರಳ ತೀವ್ರ ಲಾಬಿ ಮಾಡಿದಾಗ ಅದನ್ನು ದಿಟ್ಟವಾಗಿ ಎದುರಿಸುವ ಜತೆಗೆ ಸೆಂಟ್ರಲ್ ಮಾರ್ಕೆಟ್ ಸ್ಥಳಾಂತರ ಮತ್ತಿತರ ವಿವಾದಗಳನ್ನು ಸಮರ್ಥವಾಗಿ ನಿಭಾಯಿಸಿ ಬಗೆಹರಿಸಿದ್ದರು.
ಪ್ರಸ್ತುತ ಸೋಂಕಿಗೆ ಇಬ್ಬರು ಬಲಿಯಾಗಿರುವಾಗ ಅವರ ಅಂತ್ಯಸಂಸ್ಕಾರ ಇತ್ಯಾದಿ ಪ್ರಕ್ರಿಯೆಗಳು ವಿವಾದಕ್ಕೆಡೆಯಾಗಿದ್ದು, ಪರಿಸ್ಥಿತಿ ಗಂಭೀರವಾಗುತ್ತಿರುವಾಗ ಅವನ್ನೆಲ್ಲ ನಿಭಾಯಿಸಲು ಜಿಲ್ಲಾಡಳಿತ ಹೆಣಗಾಡಬೇಕಾಗಿ ಬಂದಿದೆ. ಒಂದುವೇಳೆ ಪೊನ್ನುರಾಜ್ ಅವರಂಥ ಅನುಭವಿ ಅಧಿಕಾರಿ ಜಿಲ್ಲೆಯಲ್ಲಿ ಇರುತ್ತಿದ್ದರೆ ಇಂತಹ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿಭಾaಯಿಸುತ್ತಿದ್ದರು ಹಾಗೂ ಇಂಥಹ ಸಮಸ್ಯೆಗಳೇ ಎದುರಾಗು ತ್ತಿರಲಿಲ್ಲ ಎನ್ನುವುದು ಜನರ ಅಭಿಮತ.
ಪ್ರಸ್ತುತ ಅವರು ಬೆಂಗಳೂರಿನಲ್ಲಿಯೇ ಇದ್ದು, ದಕ್ಷಿಣ ಕನ್ನಡದ ಆಗುಹೋಗುಗಳ ಮೇಲೆ ನಿಗಾ ವಹಿಸಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ