ಮಕ್ಕಳನ್ನು ಕಾಡುತ್ತಿದೆ ಕೋವಿಡ್ ಗೃಹಬಂಧನ !
Team Udayavani, May 30, 2021, 7:10 AM IST
ಧಾರವಾಡ: ಆಟವಾಡಲು ಬಯಲು ಸಿಗದ ಮುಗ್ಧ ಮನಸ್ಸುಗಳು, ಗೆಳೆಯರನ್ನು ಕಾಣಲು ಹಂಬಲಿಸುತ್ತಿರುವ ಚಿಣ್ಣರು, ಮನೆ ಬಿಟ್ಟು ಹೊರಗೆ ಇಳಿದರೆ ಕೆಕ್ಕರಿಸಿ ನೋಡುವ ಪೋಷಕರು…
ಕೊರೊನಾ, ಲಾಕ್ಡೌನ್ ಹೆತ್ತವರಿಗೆ ಮಕ್ಕಳನ್ನು ಸಂಭಾಳಿಸುವ ಸವಾಲು ಸೃಷ್ಟಿಸಿದರೆ ಮಕ್ಕಳಿಗೆ ಗೃಹ ಬಂಧನದಂಥ ಕಿರಿಕಿರಿ. ತಜ್ಞರು ಹೇಳುವ ಪ್ರಕಾರ ಮಕ್ಕಳು ದಿನಕ್ಕೆ ಕನಿಷ್ಠ 3-4 ತಾಸು ಆಟವಾಡಿಕೊಂಡು ಇರಬೇಕು. ಆದರೆ ಲಾಕ್ ಡೌನ್ ನಿಂದಾಗಿ ಇದು ಆಗುತ್ತಿಲ್ಲ. 14 ವರ್ಷದೊಳಗಿನ ಮಕ್ಕಳಿಗೆ ಲಾಕ್ ಡೌನ್ ಅತೀವ ಒತ್ತಡವನ್ನು ಉಂಟು ಮಾಡುತ್ತಿದೆ.
ಮೋಜು ಇಲ್ಲವೇ ಇಲ್ಲ
ಮಕ್ಕಳು ಹೊರಗೆ ಆಟವಾಡುವುದು ಸಾಮಾನ್ಯ. ಜತೆಗೆ ಕೌಟುಂಬಿಕ ಪ್ರವಾಸ, ಸಿನೆಮಾ ಇತ್ಯಾದಿಗಳಿಂದ ಸಂತಸ ಪಡೆಯುತ್ತಿದ್ದರು. ಆದರೆ ಲಾಕ್ಡೌನ್ ಇವೆಲ್ಲದಕ್ಕೂ ಕತ್ತರಿ ಹಾಕಿದೆ. ಹಳ್ಳಿ ಮಕ್ಕಳಿಗೆ ಓಣಿಗಳಲ್ಲಾದರೂ ಆಡುವ ಅವಕಾಶವಿದೆ. ನಗರದ ಮಕ್ಕಳು ಮನೆಯೊಳಗೇ ಇದ್ದಾರೆ.
ಮೂರನೇ ಅಲೆ ಆತಂಕ
ಕೊರೊನಾ 3ನೇ ಅಲೆ ಮಕ್ಕಳನ್ನು ಗುರಿ ಮಾಡುತ್ತದೆ ಎನ್ನುವ ಸುದ್ದಿ ಹೊರಬಿದ್ದ ಮೇಲಂತೂ ಹೆತ್ತವರು ಇನ್ನಷ್ಟು ಆತಂಕಗೊಂಡು ಮಕ್ಕಳನ್ನು ಕಟ್ಟಿ ಹಾಕುತ್ತಿದ್ದಾರೆ.
ಮನೆಯೇ ಪಾಠಶಾಲೆಯಾಗಲಿ
ಮಕ್ಕಳು ಸದಾ ಚಿತ್ರಕಲೆ, ಶಿಲ್ಪಗಳ ರಚನೆ, ಮಣ್ಣಿನ ಆಟಿಕೆಗಳ ನಿರ್ಮಾಣ, ಕಥೆ ಹೇಳುವುದು, ಒಳಾಂಗಣ ಕ್ರೀಡೆಗಳು, ಹಾಡುಗಾರಿಕೆ, ಸಂಗೀತದಂಥ ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು. ಹಳ್ಳಿ ಮಕ್ಕಳು ಕೃಷಿಯಲ್ಲಿ ತೊಡಗುವಂತೆ ಮಾಡಬೇಕು. ಒಳಾಂಗಣ ಆಟಗಳಲ್ಲಿ ತೊಡಗಬೇಕು. ಈ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವುದೊಂದೇ ದಾರಿ ಎನ್ನುತ್ತಾರೆ ಮಕ್ಕಳ ತಜ್ಞರು.
ಮಕ್ಕಳು ಆರೋಗ್ಯವಾಗಿರಲು ದೈಹಿಕ, ಮಾನಸಿಕ ಚಟುವಟಿಕೆ ಅಗತ್ಯ. ಲಾಕ್ಡೌನ್ನಂತಹ ದಿನಗಳಲ್ಲಿ ಹೆಚ್ಚಿನ ಮಕ್ಕಳ ತೂಕ ಅಧಿಕವಾಗಿರುವುದು ಕಂಡುಬರುತ್ತಿದೆ. ಹಾಗಾಗಿ ಸರಿಯಾದ, ಮಿತವಾದ ಆಹಾರ ಸೇವನೆ ಅತೀ ಅಗತ್ಯ. ಬೆಳಗ್ಗೆ ತಡವಾಗಿ ಏಳುವುದರಿಂದಲೂ ಆರೋಗ್ಯಕ್ಕೆ ತೊಂದರೆ. ಸಣ್ಣ ಕತೆ, ಪ್ರಬಂಧ ಮೊದಲಾದವುಗಳನ್ನು ಬರೆಯುವ ಹವ್ಯಾಸ ಬೆಳೆಸಬೇಕು. ಯೋಗ, ಸಂಗೀತ, ನೃತ್ಯ, ಒಳಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು.
– ಡಾ| ಅನಂತ ಪೈ ಪಿ., ಮಕ್ಕಳ ತಜ್ಞರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ