Crash: ಸ್ಕೂಟರ್ ಸವಾರ ಸಾವು
Team Udayavani, Dec 7, 2023, 11:57 PM IST
ಮೂಡುಬಿದಿರೆ: ಕಲ್ಲಬೆಟ್ಟು ಗ್ರಾಮದ ಎಂ.ಕೆ. ಶೆಟ್ಟಿ ಸ್ಕೂಲ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದ ಸ್ಕೂಟರ್-ಕಾರು ಢಿಕ್ಕಿ ಪ್ರಕರಣದಲ್ಲಿ ಸ್ಕೂಟರ್ ಸವಾರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರಕರಣದ ದೂರುದಾರ ಕಿನ್ನಿಗೋಳಿ ಮೂರುಕಾವೇರಿಯ ರೋಶನ್ ಮಾನ್ವೆಲ್ ಡಿ’ಸೋಜಾ ಅವರು ಕಿನ್ನಿಗೋಳಿಯಿಂದ ಕಾರಿನಲ್ಲಿ ಬಾಡಿಗೆಗಾಗಿ ಮೂಡುಬಿದಿರೆ ಗಂಟಾಲ್ಕಟ್ಟೆ ಚರ್ಚ್ ಬಳಿಯ ಮನೆಯೊಂದಕ್ಕೆ ಪ್ರಯಾಣಿಕರನ್ನು ತಲುಪಿಸಿ ವಾಪಸು ಬರುವಾಗ ಸುಮಾರು 10.10ರ ಹೊತ್ತಿಗೆ ಈ ಘಟನೆ ನಡೆದಿದೆ. ಅವರಿಗೆದುರಾಗಿ, ಮೂಡುಬಿದಿರೆಯಿಂದ ಕಲ್ಲಬೆಟ್ಟು ಕಡೆಗೆ ಸಾಗುತ್ತಿದ್ದ ಸ್ಕೂಟರ್ ಸವಾರ ಪ್ರದೀಪ್ ಶೆಟ್ಟಿ (38) ತನ್ನ ವಾಹನ ಚಲಾಯಿಸಿಕೊಂಡು ಬರುತ್ತಾ ಮುಂಭಾಗದಲ್ಲಿದ್ದ ಬೆಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸನ್ನು ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲಕ್ಕೆ ಬಂದು ರೋಶನ್ ಚಲಾಯಿಸುತ್ತಿದ್ದ ಕಾರಿನ ಬಲಭಾಗಕ್ಕೆ ಢಿಕ್ಕಿ ಹೊಡೆದಿದ್ದರು. ಪರಿಣಾಮ ಪ್ರದೀಪ್ ಕೆಳಗೆ ಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ಪರೀಕ್ಷಿಸುವಾಗ ಮೃತಪಟ್ಟಿರುವುದಾಗಿ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಪ್ರದೀಪ್ ಶೆಟ್ಟಿ ಅವರು ಕರಿಂಜೆ ಗ್ರಾಮದ ಜಯ ಶೆಟ್ಟಿ ಅವರ ಪುತ್ರ, ಅವಿವಾಹಿತರಾಗಿದ್ದು ಮೂರು ದಿನಗಳ ಹಿಂದಷ್ಟೇ ವಿದೇಶದಿಂದ ಬಂದಿದ್ದರೆಂದೂ ಗುರುವಾರ ತನ್ನ ಹುಟ್ಟುಹಬ್ಬವನ್ನು ಆಚರಿಸುವರಿದ್ದರು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ