ಸಿಡಿಲು ಬಡಿದು ಮನೆಗೆ ಹಾನಿ; ವೃದ್ಧೆಗೆ ಗಾಯ
Team Udayavani, Oct 16, 2022, 11:45 PM IST
ಪುಂಜಾಲಕಟ್ಟೆ: ಮನೆಯೊಂದಕ್ಕೆ ಸಿಡಿಲು ಬಡಿದುಸಂಪೂರ್ಣ ಹಾನಿಯಾಗಿದ್ದು, ವೃದ್ಧೆ ಗಾಯಗೊಂಡ ಘಟನೆ ಶನಿವಾರ ರಾತ್ರಿ ಬಂಟ್ವಾಳ ತಾಲೂಕಿನ ವಾಮದಪದವಿನ ಪಾಲೆದಮರ ಎಂಬಲ್ಲಿ ಸಂಭವಿಸಿದೆ.
ಸತೀಶ್ ಶೇರಿಗಾರ್ ಅವರ ಮನೆಗೆ ಸಿಡಿಲು ಬಡಿದಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಸುಟ್ಟು ಹೋಗಿದೆ. ಗೋಡೆ ಬಿರುಕು ಬಿಟ್ಟಿದೆ.
ಮನೆಯಲ್ಲಿದ್ದ ಐವರಲ್ಲಿ ಸತೀಶ್ ಅವರ ತಾಯಿ ಬೇಬಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತೀಶ್ ಅವರ ಅಕ್ಕ ಶೋಭಾ, ತಮ್ಮ ಕಿಶೋರ್, ಸತೀಶ್ ಅವರ ಪತ್ನಿ ಜಲಜಾಕ್ಷಿ, ಪುತ್ರಿ ಋಷಿಕಾ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.