Deepavali:ಸುಜ್ಞಾನದ ಬೆಳಕನ್ನು ಮೂಡಿಸೋಣ : ದೀಪದಿಂದ ದೀಪ ಹಚ್ಚುವ ಹಬ್ಬ


Team Udayavani, Nov 11, 2023, 2:59 PM IST

Mud-JSS

ದೀಪಾವಳಿ ಎಂದರೆ ದೀಪಗಳ ಹಬ್ಬ. ದೀಪಾವಳಿ ಎಂದರೆ ದೀಪದಿಂದ ದೀಪವನ್ನು ಹಚ್ಚುವ ಹಬ್ಬ. ದೀಪ ಎಂದರೆ ಬೆಳಕು. ಕತ್ತಲೆ ಎಂಬುದು ಯಾವುದೂ ಇಲ್ಲ. ಕತ್ತಲೆ ಎಂದರೆ ದೀಪವಿಲ್ಲದ್ದು ಅಂತಷ್ಟೇ. ಇಂಥಾ ದೀಪವಿಲ್ಲದ ಪ್ರದೇಶಗಳಿಗೂ ದೀಪ ಹರಡಿಸುವ ಹಬ್ಬವಾಗಲಿ ಈ ದೀಪಾವಳಿ ಎಂಬುದೇ ಪ್ರತೀ ವರ್ಷದ ಆಶಯ ಮತ್ತು ಹಾರೈಕೆ.

ಬನ್ನಿ, ದೀಪಾವಳಿಯ ಬಗ್ಗೆ ಕೊಂಚ ಭಿನ್ನವಾಗಿ ಮತ್ತು ನಾನಾ ವಿಷಯಗಳನ್ನು ಮಾತನಾಡುವ. ದೀಪಾವಳಿ ಹಬ್ಬ ಎಂಬುದು ಕೇವಲ ಒಂದು ಪ್ರಾಂತ, ರಾಜ್ಯ ಮತ್ತು ದೇಶಕ್ಕೆ ಸಂಬಂಧಿಸದೇ ಇಂದು ಲೋಕಾದ್ಯಂತ ಆಚರಿಸುವ ಹಬ್ಬವಾಗಿದೆ. ದೀಪಾವಳಿಯ ಹಬ್ಬಕ್ಕೂ ಈ ಕೆಳಗಿನ ಶಾಂತಿ ಮಂತ್ರಕ್ಕೂ ಬಹಳಾ ನಂಟಿದೆ.
“ಓಂ ಅಸತೋಮಾ ಸದ್ಗಮಯ |
ತಮಸೋಮಾ ಜ್ಯೋರ್ತಿಗಮಯಾ |
ಮೃತ್ಯೋರ್ಮಾಮೃತಂಗಮಯ ||
ಓಂ ಶಾಂತಿ ಶಾಂತಿ ಶಾಂತಿಃ ”

ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದಂತೆ “ತಮಸೋಮಾ ಜ್ಯೋರ್ತಿಗಮಯಾ’ ಎಂಬುದು ಬಹಳ ಅರ್ಥಪೂರ್ಣವಾಗಿದೆ. ಅಜ್ಞಾನವೇ ಅಂಧಕಾರ. ಜ್ಞಾನವೇ ಬೆಳಕು. ಅಜ್ಞಾನವೆಂಬ ಅಂಧಕಾರವನ್ನು ಅಳಿಸಿ, ಜ್ಞಾನ ಅಥವಾ ಸುಜ್ಞಾನವೆಂಬ ಬೆಳಕು ಮೂಡಿಸುವುದೇ ದೀಪಾವಳಿ. ಹರುಷದ ಹೊನಲನ್ನು ಹರಿಸುವ ಹಬ್ಬವೇ ದೀಪಾವಳಿ.

Deepavali:ಸುಜ್ಞಾನದ ಬೆಳಕನ್ನು ಮೂಡಿಸೋಣ : ದೀಪದಿಂದ ದೀಪ ಹಚ್ಚುವ ಹಬ್ಬ

ಸಾಮಾಜಿಕ ಜಾಲತಾಣದಲ್ಲಿ ದೀಪಾವಳಿಯ ಹಬ್ಬಕ್ಕೂ ಮುನ್ನ ಮತ್ತು ಹಬ್ಬದ ಸಮಯದಲ್ಲಿ ಶುಭಾಶಯಗಳನ್ನು ತಿಳಿಸುವ, ಸಂತಸವನ್ನು ಹಂಚುವ, ತಿನ್ನಲು ಇಷ್ಟವಾದರೂ ತಿನ್ನಲಾಗದ ಎಲೆಕ್ಟ್ರಾನಿಕ್‌ ಸಿಹಿಗಳ ಚಿತ್ರಗಳನ್ನು ಹಂಚಿ ಸಂತಸವನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ ಬಳಕೆಯಾಗುವ ಹಬ್ಬದ ಹೆಸರಿನ ಸಂಬಂಧೀ ಪದಗಳು ಎಂದರೆ “ದೀಪಾವಳಿ’, “Deepavali”, “Diwali’ ಎಂಬುದು ಸಾಮಾನ್ಯ. ಮೊದಲೆರಡು ಪದಗಳು ನಮಗೆ ಅಂದರೆ ದಕ್ಷಿಣ ಭಾರತೀಯರಿಗೆ ಚಿರಪರಿಚಿತ, ಹಾಗಂತ “Diwali” ಪರಿಚಿತ ಪದವಲ್ಲ ಅಂತಲ್ಲ. ಬದಲಿಗೆ ಈ ಪದವನ್ನು ಓದುವ ಪರಿಯಲ್ಲಿರುವ ಹಿಂಸೆ. ಕನ್ನಡದ “ಲ’ ಕಾರಕ್ಕೂ, “ಳ’ ಕಾರಕ್ಕೂ ಆಂಗ್ಲದಲ್ಲಿ ಬರೆಯುವಾಗ ಸಮಾನಾಂತರವಾಗಿ ಬಳಸುವ ಅಕ್ಷರವೆಂದರೆ “ಎಲ್‌’ ಅರ್ಥಾತ್‌ L. ಹೀಗಾಗಿ ಕನ್ನಡಿಗರ ಮನಸ್ಸು “Diwali’ ಎಂಬ ಪದವನ್ನು “ದಿವಾಳಿ’ ಎಂದೇ ಓದಿ ಮನಸ್ಸಿಗೆ ಇರುಸುಮುರುಸು ಮಾಡಿಕೊಳ್ಳುತ್ತದೆ.

“Diwali’ ಎಂಬುದು ದಿವಾಲಿ ಎಂದು ಓದಿಕೊಂಡಾಗ ತೊಂದರೆಯಾಗುವುದಿಲ್ಲ. ಅಂದ ಹಾಗೆ “Diwali’ ಎಂದು ಬರೆಯುವವರು ಉತ್ತರ ಭಾರತೀಯರು ಅಲ್ಲವೇ? ಹಿಂದಿಯಲ್ಲೂ “ಳ’ಕಾರವಿಲ್ಲ. ಈ ದೀಪಾವಳಿಯಿಂದಲಾದರೂ Diwali’ ಎಂಬುದನ್ನು ದಿವಾಳಿ ಎಂದು ಅರ್ಥೈಸಿಕೊಳ್ಳದೇ “ದಿವಾಲಿ’ ಎಂದು ಅರ್ಥೈಸಿಕೊಂಡು ಮನವನ್ನು ಶಾಂತವಾಗಿ ಇರಿಸಿಕೊಳ್ಳಿ. ಲಕ್ಷ್ಮೀ ದೇವಿಯ ಪೂಜೆಯ ಈ ಶುಭದಿನದಲ್ಲಿ ಯಾರೂ ಯಾರಿಗೂ ದಿವಾಳಿಯಾಗು ಎಂದು ಹಾರೈಸುವುದಿಲ್ಲ ಅಲ್ಲವೇ? ಹೀಗಾಗಬಹುದು ಅನ್ನಿಸಿದರೆ ಧಾರಾವಾಹಿ ನೋಡುವುದನ್ನು ಕಡಿಮೆ ಮಾಡಿ, ಆಯ್ತಾ?

ಬಹಳ ವರ್ಷಗಳ ಹಿಂದೆ, ನಮ್ಮ ಪಕ್ಕದ ಮನೆಯಲ್ಲಿ ಸ್ಕಾಟ್ಲ್ಯಾಂಡ್ ದೇಶದ ಹಿರಿಯ ದಂಪತಿಗಳು ಇದ್ದರು. ನವೆಂಬರ್‌ ತಿಂಗಳ ಸಮಯದಲ್ಲಿ ಹಲವಾರು ಮನೆಯ ಮುಂದೆ ದೀಪಾಲಂಕಾರ ಕಂಡು “ಕ್ರಿಸ್ಮಸ್‌ ಹಬ್ಬ ಇನ್ನೂ ದೂರವಿದೆ. ಬಹುಶ: ನೀವುಗಳು ಅದಕ್ಕಾಗಿ ದೀಪಗಳನ್ನು ಇರಿಸಿಲ್ಲ ಅನ್ನಿಸುತ್ತೆ. ನಿಮ್ಮ ಮನೆಗಳಲ್ಲಿ ಯಾವ ಹಬ್ಬ ನಡೆಯುತ್ತಿದೆ?’ ಎಂದು ವಿಚಾರಿಸಿದಾಗ ನಾನು ದೀಪಾವಳಿ ಹಬ್ಬದ ವೈಶಿಷ್ಟ್ಯವನ್ನು ತಕ್ಕಮಟ್ಟಿಗೆ ವಿವರಿಸಿದ್ದೆ. ಅದನ್ನು ನೆನಪಿನಲ್ಲಿ ಇರಿಸಿಕೊಂಡವರು, ಮುಂದಿನ ಕೆಲವು ವರ್ಷಗಳ ಕಾಲ, ಪ್ರತೀ ವರ್ಷವೂ ದೀಪಾವಳಿಯ ಶುಭಾಶಯಗಳನ್ನು ತಿಳಿಸುತ್ತಿದ್ದರು. ಆಸಕ್ತ ಮನಗಳಿಗೆ ಸೂಕ್ತವಾಗಿ ವಿವರಿಸಿದಾಗ ಅವರಲ್ಲೂ ನಮ್ಮ ಹಬ್ಬದ ಅರಿವು ಮೂಡುತ್ತದೆ. ನಮ್ಮೆಲ್ಲ ಹಬ್ಬದ ಮೂಲವೇ ವಿಶ್ವಶಾಂತಿ. ಯಾರಿಗೆ ಆಗಲಿ, ನಮ್ಮ ಹಬ್ಬದ ವೈಶಿಷ್ಟ್ಯ ತಿಳಿಸುವಾಗ ಶಾಂತಿ ಸಂದೇಶ ಅರುಹುವುದನ್ನು ಮರೆಯಬಾರದು, ಅಲ್ಲವೇ ?

ಇಲ್ಲಿನ ಹಲವಾರು ಐಟಿ ಕ್ಷೇತ್ರದ ಸಂಬಂಧಿ ಕಂಪೆನಿಗಳಲ್ಲಿ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ ಎಂಬುದು ಗುಟ್ಟಿನ ಮಾತೇನಲ್ಲ. ನಮ್ಮೂರಿನ ದೊಡ್ಡ ಕಂಪೆನಿಗಳಲ್ಲಿ ಸಾಕಷ್ಟು ದೇಸೀ ಮಂದಿ ಇರುವುದರಿಂದ, ದೀಪಾವಳಿಯ ಹಬ್ಬದ ಬಗೆಗಿನ ಅರಿವು ಸಹೋದ್ಯೋಗಿಗಳಲ್ಲಿ ಮೂಡಿದೆ. ನಾನಿದ್ದ ಒಂದು ಕಂಪೆನಿಯಲ್ಲಿ, ದೀಪಾವಳಿಯ ದಿನದ ಕೆಲವು ಗಂಟೆಗಳು ಹಬ್ಬಕ್ಕಾಗಿ ಮೀಸಲಿಡಲಾಗಿದೆ. ಆ ಸಮಯದಲ್ಲಿ ಭಾರತೀಯರಲ್ಲದ ಗಂಡುಪಾಳ್ಯ ಬಣ್ಣಬಣ್ಣದ ಕುರ್ತಾ-ಪೈಜಾಮ ಧರಿಸಿಕೊಂಡು ಸಂತೋಷಿಸುತ್ತಾರೆ. ಹೆಚ್ಚಿನ ವೇಳೆ ತಮ್ಮದೇ ಸಹೋದ್ಯೋಗಿಗಳಿಂದ ಎರವಲು ಪಡೆದಿರುತ್ತಾರೆ. ಇದರಂತೆಯೇ ಮಹಿಳೆಯರು ಭಾರತೀಯ ಉಡುಪು ಧರಿಸುವುದರಲ್ಲಿ ಆಸಕ್ತಿ ತೋರುತ್ತಾರೆ. ಕೆಲವರು ಚೂಡಿದಾರ್‌ ಧರಿಸಿದರೆ, ಕೆಲವರು ಸೀರೆಯಲ್ಲಿ ಮಿಂಚುತ್ತಾರೆ. ಆ ಒಂದು ದಿನವಂತೂ ಹಣೆಗೆ ಕುಂಕುಮ ಧರಿಸಿಕೊಂಡು ಸಂಭ್ರಮಿಸುತ್ತಾರೆ. ಹಾಡುಗಾರಿಕೆ, ನೃತ್ಯ, ವಾದ್ಯಸಂಗೀತಗಳೇ ಮೊದಲಾದ ಕಾರ್ಯಕ್ರಮಗಳನ್ನು, ಊಟ ಮಾಡುತ್ತಾ, ನೋಡಿಕೊಂಡು ಆನಂದಿಸುತ್ತಾರೆ. ಬಾಂಗ್ರಾ ರೀತಿಯ ನೃತ್ಯಗಳಲ್ಲಿ ಭಾಗವಹಿಸುತ್ತಾರೆ ಕೂಡ.

ವಿದೇಶಿಯರಿಗೆ ನಮ್ಮ ಖಾರದ ಖಾದ್ಯಗಳು, ಮತ್ತು ಸಿಹಿತಿಂಡಿಗಳು ಬಲುಪ್ರಿಯ. ಹನ್ನೊಂದೂವರೆಗೆ ಊಟ ಎಂದು ಕಾರ್ಯಕ್ರಮದ ಪಟ್ಟಿಯಲ್ಲಿ ತಿಳಿಸಿರುವುದರಿಂದ ಕಾಲುಗಂಟೆ ಮುಂಚೆಯೇ ಸಾಲಿನಲ್ಲಿ ನಿಂತಿರುತ್ತಾರೆ. ನಾವೂ ಸಹ, ಮೊದಲು ಅವರಿಗೆ ಆದ್ಯತೆ ನೀಡಿ ಅನಂತರ ನಾವು ಊಟ ಮಾಡುವುದನ್ನು ಪಾಲಿಸಿಕೊಂಡೇ ಬಂದಿದ್ದೇವೆ. ದೀಪಾವಳಿಯ ಹಬ್ಬವು ದೇಶ, ಭಾಷೆ, ಗಂಡು-ಹೆಣ್ಣು ಎಂಬುದನ್ನೆಲ್ಲ ಬದಿಗೊತ್ತಿ ಸೌಹಾರ್ದತೆಯನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಇನ್ನೇನು ನಿದರ್ಶನ ಬೇಕು? ಯಾವುದೇ ಒಂದು ಹಬ್ಬದ ಮೂಲ ಉದ್ದೇಶವೇ ಅಲ್ಲವೇ?

ದೀಪಾವಳಿ ಎಂದರೆ ಬೆಳಕು, ಪಟಾಕಿ, ಮತ್ತು ಸಿಹಿತಿಂಡಿಗಳು. ಈ ಹಬ್ಬದ ಸಂದರ್ಭದಲ್ಲಿ ಪ್ರತೀ ವರ್ಷವೂ ನಮ್ಮದೇ ಸ್ನೇಹವರ್ಗಗಳಲ್ಲಿ ಹಬ್ಬದಲ್ಲಿ ಪಾಲ್ಗೊಳ್ಳುತ್ತೇವೆ. ಕನ್ನಡ ಸ್ನೇಹಿತರು ಮತ್ತು ಕನ್ನಡೇತರ ಸ್ನೇಹಿತರ ವಲಯದಲ್ಲಿ ಹಬ್ಬಗಳನ್ನು ಮಾಡುವುದರಿಂದ ನಮ್ಮದೇ ದೇಶದ ಹಲವಾರು ರಾಜ್ಯಗಳ ಸಂಸ್ಕೃತಿ, ರೀತಿ, ರಿವಾಜು, ಊಟ ತಿಂಡಿಗಳ ಪರಿಚಯವಾಗಿದೆ. ಪ್ರಮುಖವಾಗಿ ದೀಪಾವಳಿಯ ಹಬ್ಬವು ಪಟಾಕಿ ಸಿಡಿಸುವ ಮತ್ತು ಸಿಹಿತಿಂಡಿಗಳನ್ನು ಹಂಚಿಕೊಂಡು ತಿನ್ನುವ ಸಂಭ್ರಮ ವರ್ಣಿಸಲಾಗದ್ದು.

ನಿಮ್ಮಲ್ಲೂ ಪಟಾಕಿ ಹೊಡೆಯುವಿರಾ? ಎಂಬುದು ನಮಗೆ ಕೇಳಿ ಬರುವ ಸಾಮಾನ್ಯ ಪ್ರಶ್ನೆ. ಹೌದು, ಹಲವಾರು ವರ್ಷಗಳ ಹಿಂದೆ, ಸಲೀಸಾಗಿ ಪಟಾಕಿಗಳು ದೊರೆಯುತ್ತಿರಲಿಲ್ಲ ಮತ್ತು ಕೌಂಟಿಯವರ ಅನುಮತಿಯೂ ಇರುತ್ತಿರಲಿಲ್ಲ. ಇಂದಿನ ಸನ್ನಿವೇಶವೇ ಬೇರೆ. ಭಾರತೀಯರ ಸಂಖ್ಯೆ ಹೆಚ್ಚಿದೆ. ರಾಜಕೀಯದಿಂದ ಹಿಡಿದು ಹಲವಾರು ಕ್ಷೇತ್ರದಲ್ಲಿ ಭಾರತೀಯರು ಹೆಸರು ಮಾಡುತ್ತಿದ್ದಾರೆ ಹಾಗಾಗಿ ನಮ್ಮದೂ ಒಂದು ಐಡೆಂಟಿಟಿ ಹೆಚ್ಚಿದೆ. ಹಾಗಂತ ಈ ದೇಶ ನಮ್ಮದೇ ಎಂಬ ಉದ್ಧಟತನ ತೋರಿಲ್ಲ ಬಿಡಿ. ನೀತಿ-ನಿಯಮಾನುಸಾರವೇ ಹಬ್ಬಗಳ ಆಚರಣೆ ನಡೆಸಿಕೊಂಡು ಬಂದಿದ್ದೇವೆ.

ಬೆಳಕೆ ಪ್ರಧಾನವಾಗಿರುವ ಪಟಾಕಿಗಳನ್ನೇ ನಾವು ಹಚ್ಚುವುದು, ಸದ್ದು ಮಾಡುವ ಪಟಾಕಿಗಳು ದೊರೆಯುವುದೂ ಕಡಿಮೆಯೇ. ನಮ್ಮ ಮನೆಯ ಮುಂದೆಯೇ ಪಟಾಕಿಗಳನ್ನು ಸಿಡಿಸಿದರೂ ರಾತ್ರಿ ಹತ್ತು ಘಂಟೆಯ ಅನಂತರ ಯಾವ ಪಟಾಕಿಯನ್ನೂ ಸಿಡಿಸಿ ತೊಂದರೆ ಮಾಡುವುದಿಲ್ಲ. ಬೆಳಕಿನ ಪಟಾಕಿಯನ್ನೇ ಹಚ್ಚಿದರೂ, ಸಿಡಿಸಿದ ಅನಂತರದ ಅವಶೇಷವನ್ನು ಅರ್ಧ ನೀರು ತುಂಬಿಸಿರುವ ಬಕೇಟ್‌ನಲ್ಲಿ ಅದ್ದಿ ಇಡುತ್ತೇವೆ. ಅದರಂತೆಯೇ, ಹತ್ತರ ಅನಂತರ, ನಮ್ಮಿಂದ ಬೀದಿಯಲ್ಲಿ ಬಿದ್ದಿರುವ ಯಾವುದೇ ಪಟಾಕಿಯ ಕಸವನ್ನೂ ತೆಗೆದು ಟ್ರಾಶ್‌ ಮಾಡಿ ಶುಚಿ ಮಾಡುವುದನ್ನೂ ಪಾಲಿಸಿಕೊಂಡು ಬಂದಿದ್ದೇವೆ.

ಹಬ್ಬಗಳ ಉದ್ದೇಶವೇ ಸಂಭ್ರಮ, ಆನಂದ ಹಂಚಿಕೊಳ್ಳುವುದು. ಸಿಹಿತಿಂಡಿಗಳು ಎನ್ನುವುದು ಈ ಆನಂದದ ಪ್ರತೀಕ. ಬೆಳಕು ಎಂಬುದು ಅಂಧಕಾರವನ್ನು ತೊಡೆಯುವ ಅರ್ಥದಲ್ಲಿ ಸಂಭ್ರಮಿಸುವ ಪರಿ. ಇಂಥಾ ಒಂದು ಅದ್ಭುತ ಸಂದೇಶವನ್ನು ಸಾರುವ ಈ ಹಬ್ಬವನ್ನೂ ಬೇರೆ ಬೇರೆ ಅರ್ಥಗಳ ರೂಪ ಕೊಟ್ಟು ಹಾಳುಗೆಡುವುದು ಬೇಡ. “ಲೋಕಾಃ ಸಮಸ್ತಃ ಸುಖೀನೋಭವಂತು’ ಎಂಬ ನೀತಿಯನ್ನು ಅನುಸರಿಸಿ ಬಾಳುವ. ಎಲ್ಲರಿಗೂ ದೀಪಾವಳಿಯ ಹಬ್ಬದ ಶುಭಾಶಯಗಳು.

ಶ್ರೀನಾಥ್‌ ಭಲ್ಲೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.