Subrahmanya ತೋಟಕ್ಕೆ ಕಾಡಾನೆ ಲಗ್ಗೆ: ಅಪಾರ ಕೃಷಿ ನಾಶ
Team Udayavani, Nov 17, 2023, 11:55 PM IST
ಸುಬ್ರಹ್ಮಣ್ಯ: ಕಡಬ ತಾಲೂಕಿನ ಐನೆಕಿದು ಗ್ರಾಮದ ಕೋಟೆಬೈಲು ಪ್ರದೇಶದ ಹಲವು ಕೃಷಿಕರ ತೋಟಗಳಿಗೆ ದಾಳಿಯಿಟ್ಟ ಕಾಡಾನೆಗಳು ಅಪಾರ ಪ್ರಮಾಣದ ಕೃಷಿ ನಾಶಗೈದಿವೆ.
ಸೋಮಸುಂದರ ಕೂಜುಗೋಡು ಅವರ ತೋಟದಲ್ಲಿ ಕಾಡಾನೆ ದಾಳಿಯಿಂದ ನೂರಾರು ಬಾಳೆ, ಅಡಿಕೆ ಗಿಡಗಳು ಹಾಗೂ 2 ತೆಂಗಿನ ಮರಗಳು ನಾಶಗೊಂಡಿವೆ.