ಧೋನಿಯನ್ನು ಈಗಲೇ ನಿವೃತ್ತಿಗೆ ಪ್ರೇರೇಪಿಸುವುದು ಒಳಿತಲ್ಲ: ಹುಸೇನ್
Team Udayavani, Apr 12, 2020, 5:35 AM IST
ಮುಂಬಯಿ: ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ನಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಬಗ್ಗೆ ಯಾರೂ ಒತ್ತಡ ಹೇರದಿರಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾ
ಕೋವಿಡ್ 19 ವೈರಸ್ನಿಂದಾಗಿ 13ನೇ ಆವೃತ್ತಿಯ ಐಪಿಎಲ್ ನಡೆಯುವ ಸ್ಪಷ್ಟತೆ ಕೂಡ ಇನ್ನೂ ಗೋಚರಿಸುತ್ತಿಲ್ಲ. ಹಾಗಾಗಿ ಧೋನಿ ಕ್ರಿಕೆಟ್ ಭವಿಷ್ಯ ನಿಗೂಢವಾಗಿಯೇ ಇದೆ. ಈ ಬಗ್ಗೆ ಸ್ಟಾರ್ನ್ಪೋರ್ಟ್ಸ್ ಜತೆ ಮಾತನಾಡಿದ ಹುಸೇನ್, ಧೋನಿ ಅವರನ್ನು ಸದ್ಯದ ಸ್ಥಿತಿಯಲ್ಲಿ ನಿವೃತ್ತಿಗೆ ತಳ್ಳುವುದು ಒಳ್ಳೆಯದಲ್ಲ. ಅವರು ಒಮ್ಮೆ ತಂಡದಿಂದ ಹೊರ ಹೋದರೆ ಮತ್ತೆ ಹಿಂದಿರುಗಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಭಾರತ ತಂಡಕ್ಕೆ ಮರಳಲು ಧೋನಿ ಅವರಲ್ಲಿ ಈಗಲೂ ಸಾಮರ್ಥ್ಯವಿದೆ. ಈ ವಿಚಾರ ಮಂಡಳಿಯಲ್ಲಿರುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹೌದು, ಕಳೆದ ವಿಶ್ವಕಪ್ ಟೂರ್ನಿ ಸೇರಿದಂತೆ ಕೆಲವು ಪಂದ್ಯಗಳಲ್ಲಿ ಧೋನಿ ಅವರು ರನ್ ಚೇಸ್ ಮಾಡುವಲ್ಲಿ ಎಡವಿರಬಹುದು. ಆದರೆ, ಅವರು ಈಗಲೂ ಅದ್ಭುತ ಪ್ರತಿಭಾವಂತ ಆಟಗಾರ ಆಗಿದ್ದಾರೆ. ಧೋನಿ ನಿವೃತ್ತಿಯ ವಿಷಯದಲ್ಲಿ ಈಗ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಅವರು ಒಮ್ಮೆ ನಿವೃತ್ತಿ ಪಡೆದುಕೊಂಡರೆ, ಅವರನ್ನು ಮತ್ತೇ ಕರೆ ತರಲಾಗುವುದಿಲ್ಲ. ಕೆಲ ಕ್ರಿಕೆಟ್ ದಂತಕತೆಗಳನ್ನು ಬಹುಬೇಗ ನಿವೃತ್ತಿಗೆ ತಳ್ಳಬಾರದು’ ಎಂದು ನಾಸಿರ್ ಹುಸೇನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ