Stem Borer: ಭತ್ತದಲ್ಲಿ ಕಾಂಡಕೊರಕದ ಬಾಧೆ ಮತ್ತು ಅದರ ನಿರ್ವಹಣೆಗೆ ಸಲಹೆ
Team Udayavani, Aug 10, 2023, 5:54 PM IST
ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸದ್ಯ ಭತ್ತವು ಸಸಿಮಡಿ ಹಂತ ಮತ್ತು ನಾಟಿ ಮಾಡಿ 15-20 ದಿವಸಗಳಾಗಿರುತ್ತದೆ. ಸದ್ಯ ನಾಟಿ ಮಾಡಿದ ಬೆಳೆಯಲ್ಲಿ ಮತ್ತು ಸಸಿಮಡಿಯಲ್ಲಿ ಭತ್ತದ ಪ್ರಮುಖ ಕೀಟವಾದ ಹಳದಿ ಕಾಂಡಕೋರಕದ ಬಾಧೆ ಹೆಚ್ಚಾಗಿದ್ದು ಕಂಡು ಬಂದಿದೆ. ಭತ್ತದ ಬೆಳೆಯ ಕಾಂಡವನ್ನು ಮರಿ ಹುಳು ಕೊರೆದು ತಿನ್ನುವದರಿಂದ ಸುಳಿಯು ಒಣಗುತ್ತದೆ.
ಈ ಬಾಧೆಯ ಲಕ್ಷಣಕ್ಕೆ “ಸತ್ತ ಸುಳಿ” ಎಂದು ಕರೆಯುತ್ತಾರೆ. ಭತ್ತದ ಗದ್ದೆಯನ್ನು ಪರಿಶೀಲಿಸಿದಾಗ ಗದ್ದೆಯಲ್ಲಿ ಸುಳಿ ಒಣಗುವಿಕೆ ಸಂಖ್ಯೆ ಹೆಚ್ಚಾಗಿ ಕಂಡುಬಂದಿರುತ್ತದೆ. ಈ ಕೀಟದ ಬಾಧೆ ಹೆಚ್ಚಾಗಿ ಪ್ರಾರಂಭಿಕ ಹಂತದಲ್ಲಿ ಕಂಡುಬರುವದರಿಂದ ಇದರ ನಿರ್ವಹಣೆ ಅತ್ಯಗತ್ಯ ಇಲ್ಲವಾದರೆ ಈ ಕೀಟದ ಬಾಧೆಯಿಂದ ಬೆಳೆವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಸುಮಾರು 15-20ರಷ್ಟು ಹಾನಿಕಂಡುಬರುವುದು.
ಈ ಕೀಟದ ನಿರ್ವಹಣೆಗಾಗಿ ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಸಂಶೋಧನಾ ಕೇಂದ್ರ ವತಿಯಿಂದ ಸಲಹೆ ನೀಡಲಾಗಿದೆ. ರೈತರು ಸಲಹೆಗಳನ್ನು ಪಾಲಸಿ ಹೆಚ್ಚಿನ ಇಳುವರಿ ಪಡೆಯುವಂತೆ ಸಲಹೆ ನೀಡಲಾಯಿತು. ಬದುಗಳಲ್ಲಿ ಆಶ್ರಿತ ಕಳೆಗಳನ್ನು ಸ್ವಚ್ಛವಾಗಿಸುವುದು ಪ್ರತಿ ಎಕರೆಗೆ 12-15 ಲಿಂಗಾಕರ್ಷಕ ಬಲೆಗಳನ್ನು (ಸಿರ್ಪೊಲ್ಯೂರ್) ಹಾಕಬೇಕು. ಪ್ರೌಢ ಕೀಟಗಳನ್ನು ದೀಪದ ಬಲೆಗಳಿಗೆ ಆರ್ಕಷಿಸುವುದು ಮತ್ತು ನಾಶಪಡಿಸಬೇಕು.
ನಾಟಿ ಮಾಡುವ 3-4 ದಿನಗಳ ಮುಂಚಿತವಾಗಿ 1 ಮೀ.ಲೀ ಫಿಪ್ರೋನಿಲ್ 5 ಎಸ್.ಸಿ ಅಥವಾ 2 ಮೀ.ಲೀ ಕ್ಲೊರೊಪೈರಿಫಾಸ್ 20 ಈ.ಸಿ ಅಥವಾ 2 ಮಿ. ಲೀ. ಕಾರ್ಬೋಸಲ್ಫಾನ್ 25 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಮುಖ್ಯ ಗದ್ದೆಯಲ್ಲಿ 20-25 ದಿನಗಳವರೆಗೆ ಹಳದಿ ಕಾಂಡಕೊರಕದ ಭಾದೆಯನ್ನು ತಪ್ಪಿಸಬಹುದು. ನಾಟಿ ಮಾಡಿದ 15-20 ದಿವಸಗಳ ನಂತರ ಹರಳುರೂಪದ ಕೀಟನಾಶಕಗಳಾದ ಪ್ರತಿ ಎಕರೆಗೆ 3.0 ಕೆ.ಜಿ. ಶೇ.2ರ ಫ್ಲುಪೈರಿಮಿನ್ ಅಥವಾ 3.5 ಕೆ.ಜಿ ಶೇ. 0.8 ರ ಸ್ಪೆಂ ನಿಟೊರಾಮ್ ಹರಳು ಅಥವಾ 4 ಕೆ.ಜಿ ಶೇ. 4 ರ ಕ್ಲೊರಾಂಟ್ರಾನಿಲಿಪ್ರೋಲ್ ಹರಳು ಅಥವಾ 10 ಕೆ.ಜಿ ಶೇ. 4 ರ ಕಾರ್ಟಾಪ್ ಹೈಡ್ರೊಕ್ಲೋರೈಡ್ ಹರಳು ಅಥವಾ 10 ಕೆ.ಜಿ ಶೇ. 0.3 ರ ಫಿಪ್ರೊನಿಲ್ ಹರಳು ಅಥವಾ 7.5 ಕೆ.ಜಿ ಶೇ. 3 ರ ಕಾರ್ಬೊಫ್ಯೂರಾನ್ ಉಗ್ಗಬೇಕು.
ಇವುಗಳಲ್ಲಿ ಯಾವುದಾದರೊಂದು ಕೀಟನಾಶಕವನ್ನು ಉಗ್ಗಬೇಕು. ಹರಳು ರೂಪದ ಕೀಟನಾಶಕಗಳನ್ನು ಬಳಸುವಾಗ ಗದ್ದೆಯಲ್ಲಿ ಹೆಚ್ಚು ನೀರನ್ನು ನಿಲ್ಲಿಸಬಾರದು ಮತ್ತು ಒಂದು ಗದ್ದೆಯಿಂದ ಮತ್ತು ಗದ್ದೆಗೆ ನೀರನ್ನು ಹೋಗದಂತೆ ತಡೆಯುವಂತೆ ರೈತರಿಗೆ ಸಲಹೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ
Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…
Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ
MUST WATCH
ಹೊಸ ಸೇರ್ಪಡೆ
H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ