ವರದಿಗೆ ಎಚ್ಚೆತ್ತ ಅಧಿಕಾರಿಗಳು : ಕೈಮಗ್ಗ ನೇಕಾರ ಸಹಕಾರ ಸಂಘಕ್ಕೆ ಆಡಳಿತಾಧಿಕಾರಿ ಆಗಮನ
ಕಳೆದ ಒಂದುವಾರ ಸಂಘದ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿತು
Team Udayavani, Apr 25, 2022, 5:48 PM IST
ದೋಟಿಹಾಳ: ಗ್ರಾಮದ ಕೈಮಗ್ಗ ನೇಕಾರ ಸಹಕಾರ ಉತ್ಪಾದಕರು ಮತ್ತು ಮಾರಾಟ ಸಂಘಕ್ಕೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ವೆಂಕರೆಡ್ಡಿಯವರು ಸೋಮುವಾರ ಅಧಿಕಾರ ವಹಿಸಿಕೊಂಡರು.
ಈ ಸಂಘದ ಆಡಳಿತ ಮಂಡಳಿ ಹಾಗು ಸಿಬ್ಬಂದಿಯೊಬ್ಬರ ಮಧ್ಯೆ ವಿವಾದ ಉಂಟಾಗಿ ಸಹಕಾರಿ ಸಂಘಗಳ ನಿಬಂಧಕರಿಗೆ ದೂರು ನೀಡಿಲಾಗಿತು. ಇದರ ಬಗ್ಗೆ ವಿಚಾರಣೆ ನಡೆಸಿದ ಉಪನಿಬಂಧಕರು ಎಪ್ರಿಲ್ 11 ರಂದು ಈಗಿರುವ ಆಡಳಿತ ಮಂಡಳಿಯನ್ನು ರದ್ದು ಮಾಡಿ, ಸಂಘಕ್ಕೆ ನೂತನ ಆಡಳಿತಾಧಿಕಾರಿಯಾಗಿ ವೆಂಕರೆಡ್ಡಿಯವರು ನೇಮಿಸಿ ಆದೇಶ ನೀಡಿದ್ದರು.
ಆದರೆ ನೇಮಕವಾದ ಆಡಳಿತಾಧಿಕಾರಿಗಳು ಕಳೆದ 10 ದಿನಗಳಿಂದ ಸಂಘಕ್ಕೆ ಬಾರದೆ ಇರುವುದರಿಂದ ಸಂಘದ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿತ್ತು ಪರಿಣಾಮ ನೇಕಾರರು ಹಣವಿಲ್ಲದೆ ಒಂದುವಾರ ಸಂಕಷ್ಟ ಅನುಭವಿಸಬೇಕಾಯಿತು. ಇದರ ಬಗ್ಗೆ ಏ:23 ಉದಯವಾಣಿ ವೆಬ್ನಲ್ಲಿ ಹಾಗೂ ಏ:24 ‘ಉದಯವಾಣಿ’ ಪತ್ರಿಕೆಯಲ್ಲಿ “ಸಹಕಾರ ಸಂಘದತ್ತ ಮುಖ ಮಾಡದ ಅಧಿಕಾರಿ” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಣೆ ಮಾಡಲಾಗಿತ್ತು.
ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಹೆಸರಿಡಿ: ವಚನಾನಂದ ಶ್ರೀ
ವರದಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು.. ನಾನು ಕಳೆದ ಒಂದು ವಾರದಿಂದ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಕರ್ತವ್ಯದಲ್ಲಿರುವ ಕಾರಣ ಸಂಘಕ್ಕೆ ಭೇಟಿ ನೀಡಿ ಅಧಿಕಾರವಹಿಸಿಕೊಳ್ಳಲು ತಡವಾಗಿದೆ. ಇನ್ನೂ ಮುಂದೆ ನೇಕಾರರಿಗೆ ಯಾವುದೇ ತೊಂದರೆಗಳು ಆಗುವುದಿಲ್ಲ ಎಂದು ಸಂಘದ ಆಡಳಿತಾಧಿಕಾರಿ ವೆಂಕರೆಡ್ಡಿಯವರು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ