ಪ್ರತಿ ವರ್ಷ 10 ಮಿಲಿಯನ್‌ ಜನತೆ ಕ್ಯಾನ್ಸರ್‌ನಿಂದ ಸಾವು

ಎನ್‌ಸಿಡಿ ಕೌನ್ಸಿಲರ್‌ ಸಿದ್ದಮ್ಮ ಬ್ಯಾಲಾಳ ನುಡಿ

Team Udayavani, Feb 8, 2023, 11:49 AM IST

CANCER copy

ತಾಳಿಕೋಟೆ: ಕ್ಯಾನ್ಸರ್‌ ಸಂಬಂಧಿತ ಸಾವುಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಪ್ರಕರಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವ ಮೂಲಕ ಸುಲಭವಾಗಿ ತಡೆಯಬಹುದಾಗಿದೆ. ಜೀವನದ ಬದಲಾವಣೆಗಳು ಮತ್ತು ನಿಯಮಿತ ತಪಾಸಣೆಯಿಂದ ಕ್ಯಾನ್ಸರ್‌ ಬರದಂತೆ ನೋಡಿಕೊಳ್ಳಬಹುದಾಗಿದೆ ಎಂದು ಎನ್‌ಸಿಡಿ ಕೌನ್ಸಿಲರ್‌ ಸಿದ್ದಮ್ಮ ಬ್ಯಾಲಾಳ ನುಡಿದರು.

ವಿಶ್ವ ಕ್ಯಾನ್ಸರ್‌ ದಿನಾಚರಣೆ ನಿಮಿತ್ತ ಜನಜಾಗೃತಿ ಮೂಡಿಸುವ ಕುರಿತು ಜೆಎಸ್‌ ಎಸ್‌ ಕಾಲೇಜ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಎನ್‌ಸಿಡಿ ಘಟಕದ ವತಿಯಿಂದ ಏರ್ಪಡಿಸಿದ್ದ ವಿಶ್ವ ಕ್ಯಾನ್ಸರ್‌ ದಿನಾಚರಣೆಯ ಜನಜಾಗೃತಿ ಹಾಗೂ ತಡೆಗಟ್ಟುವ ಕುರಿತು ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಯಾನ್ಸರ್‌ ಜಾಗೃತಿ ಮೂಡಿಸಲು ಮತ್ತು ಜನರನ್ನು ಜಾಗೃತರನ್ನಾಗಿ ಮಾಡಲು ಪ್ರತಿ ವರ್ಷ ಫೆ. 4ರಂದು ವಿಶ್ವ ಕ್ಯಾನ್ಸರ್‌ ದಿನವೆಂದು ಆಚರಿಸಲಾಗುತ್ತದೆ. ಸರ್ಕಾರಗಳು ಆರೋಗ್ಯ ತಜ್ಞರು ಮತ್ತು ಸಾರ್ವಜನಿಕರು ಸೇರಿದಂತೆ ಹಲವಾರು ಮಧ್ಯಸ್ತಗಾರರನ್ನು ಒಗ್ಗೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ ಎಂದರು.

ಟಿಬಿ ಮೇಲ್ವಿಚಾರಕ ಶಿವರಾಜ್‌ ದಿಕ್ಷೀತ ಮಾತನಾಡಿ, ಮಾರಣಾಂತಿಕ ಖಾಯಿಲೆಯ ಪ್ರಮುಖ ಕಾರಣಗಳೆನೆಂದರೆ ತಂಬಾಕು ಬಳಕೆ. ಸೂರ್ಯನ ನೆರಳಾತೀತ ಕಿರಣ ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು ಅಲ್ಲದೇ ಧೂಮಪಾನವು ಕ್ಯಾನ್ಸರ್‌ ಮತ್ತು ಇತರ  ಧೀರ್ಘ‌ ಕಾಲದ ಕಾಯಿಲೆಗೆ ಕಾರಣವಾಗಬಹುದು ಎಂಬುದು ಆಶ್ಚರ್ಯವೇನಿಲ್ಲ ಎಂದರು. ಧೂಮಪಾನವು ಶ್ವಾಸಕೋಶದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜೊತೆಗೆ ಹಲವಾರು ಮಾರಣಾಂತಿಕತೆಗಳ ಅಪಾಯವನ್ನು ಹೆಚ್ಚಿಸುತ್ತದೆ. ತಕ್ಷಣ ಧೂಮಪಾನ ಮಾಡುವುದನ್ನು ನಿಲ್ಲಿಸಿದರೆ ಕ್ಯಾನ್ಸರ್‌ ಬರುವ ಅಪಾಯ ಕಡಿಮೆಯಾಗುತ್ತದೆ ಎಂದರು.

ಕ್ಯಾನ್ಸರ್‌ಗೆ ಮುಖ್ಯ ಕಾರಣವೆನೆಂದರೆ, ಬೊಜ್ಜು, ಸ್ತನ ಕ್ಯಾನ್ಸರ್‌, ಕರುಳಿನ ಕ್ಯಾನ್ಸರ್‌, ಯಂಡೊಮೆಟ್ರಿಯಲ್‌ ಕ್ಯಾನ್ಸರ್‌, ಅನ್ನನಾಳದ ಕ್ಯಾನ್ಸರ್‌, ಅಲ್ಲದೇ ಮೂತ್ರಪಿಂಡದ ಕ್ಯಾನ್ಸರ್‌ ಇವುಗಳು ಅಪಾಯವನ್ನು ಹೆಚ್ಚಿಸುವ ಕೆಲವು ಕ್ಯಾನ್ಸರ್‌ ಗಳಾಗಿವೆ ಎಂದು ತಿಳಿಹೇಳಿದ ಅವರು, ಕ್ಯಾನ್ಸರ್‌ ಬೆಳವಣಿಗೆಯನ್ನು ಬೆಂಬಲಿಸುವ ಎರಡು ರಾಸಾಯನಿಕಗಳು ಆರೋಗ್ಯಕರ ದೇಹದ ತೂಕವನ್ನು ಸಾ ಧಿಸುವ ಅಥವಾ ನಿರ್ವಹಿಸುವ ಮೂಲಕ ಅಪಾಯಗಳನ್ನು ಕಡಿಮೆ ಮಾಡಬಹುದಾಗಿದೆ ಎಂದರು.

ಇದೇ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಿದ್ದಮ್ಮ ಬ್ಯಾಲ್ಯಾಳ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಜೆಎಸ್‌ ಎಸ್‌ ಕಾಲೇಜ್‌ ಪ್ರಾಚಾರ್ಯ ಗಿರೀಶ ಪಿ.ಆರ್‌., ಕಾರ್ಯದರ್ಶಿಗಳಾದ ಶ್ರೀಕಾಂತ ಪತ್ತಾರ ಹಾಗೂ ಕಾಲೇಜ್‌ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಜನಜಾಗೃತಿ ಜಾಥಾ ಮೂಡಿಸುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಟಾಪ್ ನ್ಯೂಸ್

akhilesh

ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್

1-dwdasdasd

ವನಿತಾ ಪ್ರೀಮಿಯರ್‌ ಲೀಗ್‌ : ಚೊಚ್ಚಲ ಪ್ರಶಸ್ತಿ ಮುಂಬೈ ಇಂಡಿಯನ್ಸ್‌ ಪಾಲು

1-saddsadsad-asds

ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ

1-sadsad-as-d

ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್‌ ನ್ಪೋಟ್ಸ್‌ನ “ಟ್ರೋಫಿ ಟೂರ್‌’

ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್‌ ಸ್ಪೋರ್ಟ್ಸ್ ನ “ಟ್ರೋಫಿ ಟೂರ್‌’

HDK

50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sad-sadsad

ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ

tdy-13

ಕಾಂಗ್ರೆಸ್ ಗೆ ಮಾರಾಟವಾದ ಊಸರವಳ್ಳಿ ಬಾಬುರಾವ್ ಚಿಂಚನೂರ್: ಮ್ಯಾಕೇರಿ ಆರೋಪ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲಾತಿಗಳು ಬೆಂಕಿಗಾಹುತಿ

Sunil vallapure

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸುನೀಲ್ ವಲ್ಲಾಪುರೆ

ಕೈ ಹಿಡಿದ ಚಿಂಚನ್ಸೂರ; ಲಾಭ-ನಷ್ಟದ ಲೆಕ್ಕಾಚಾರ

ಕೈ ಹಿಡಿದ ಚಿಂಚನ್ಸೂರ; ಲಾಭ-ನಷ್ಟದ ಲೆಕ್ಕಾಚಾರ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

akhilesh

ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್

1-dwdasdasd

ವನಿತಾ ಪ್ರೀಮಿಯರ್‌ ಲೀಗ್‌ : ಚೊಚ್ಚಲ ಪ್ರಶಸ್ತಿ ಮುಂಬೈ ಇಂಡಿಯನ್ಸ್‌ ಪಾಲು

1-saddsadsad-asds

ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ

1-sadsad-as-d

ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.