ದುಬಾರಿ ಮೌಲ್ಯದ ಜೀವವಿಮೆಗಳಿಗೆ ತೆರಿಗೆ ವಿನಾಯ್ತಿ ಇಲ್ಲ
Team Udayavani, Feb 2, 2023, 7:25 AM IST
ಈ ವರ್ಷ ಏ.1ರಿಂದ ನೀಡಲ್ಪಡುವ ವಿಮೆಗಳಿಗೆ ಮಾತ್ರ ಹೊಸ ನೀತಿ ಅನ್ವಯ ದುಬಾರಿ ಮೌಲ್ಯದ ವಿಮಾ ಪಾಲಿಸಿಗಳನ್ನು ಮಾಡಿಸುವವರಿಗೆ ಒಂದು ಬೇಸರದ ಸುದ್ದಿಯಿದೆ. ಇದು ದುಬಾರಿ ವಿಮೆಗಳಿಗೆ ಮಾತ್ರ ಅನ್ವಯವಾಗುವುದರಿಂದ ಉಳಿದವರೆಲ್ಲ ಚಿಂತೆ ಮಾಡುವ ಅಗತ್ಯವಿಲ್ಲ. ಜೊತೆಗೆ 2023 ಏ.1 ಮತ್ತು ನಂತರ ನೀಡಲ್ಪಡುವ ಜೀವವಿಮೆಗಳಿಗೆ ಮಾತ್ರ ಇದು ಅನ್ವಯವಾಗುವುದು. ಹಾಗಾಗಿ ಹಿಂದೆಯೇ ದುಬಾರಿ ವಿಮೆ ಪಡೆದವರೂ ಯೋಚಿಸಬೇಕಾದ ಅಗತ್ಯವಿಲ್ಲ.
ವಿಷಯವೇನೆಂದರೆ ಈ ವರ್ಷ ಏ.1ರಿಂದ ಪಡೆಯುವ ಹೊಸ ವಿಮೆಗಳಿಗೆ 5 ಲಕ್ಷ ರೂ.ಗಿಂತ ಮೇಲ್ಪಟ್ಟು ಕಂತನ್ನು ಪಾವತಿಸುತ್ತೀರಾದರೆ, ಅದಕ್ಕೆ ಇನ್ನು ಮುಂದೆ ತೆರಿಗೆ ವಿನಾಯ್ತಿ ಸಿಗುವುದಿಲ್ಲ.
ಯೂಲಿಪ್ಗಳಿಗೆ (ಜೀವವಿಮೆಗಳನ್ನು ಹೆಚ್ಚುವರಿಯಾಗಿ ಹೊಂದಿರುವ ವಿಮೆಗಳು) ಹೊಸ ನೀತಿ ಅನ್ವಯವಾಗುವುದಿಲ್ಲ. ಅಂದರೆ ಯೂಲಿಪ್ ವಿಮೆಗಳಿಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ಗಮನಾರ್ಹ ಸಂಗತಿಯೆಂದರೆ 2021ರ ಬಜೆಟ್ನಲ್ಲಿ, ವಾರ್ಷಿಕ 2.5 ಲಕ್ಷ ರೂ. ಕಂತು ಹೊಂದಿದ್ದ ಯೂಲಿಪ್ಗಳಿಗೆ ತೆರಿಗೆ ವಿನಾಯ್ತಿ ತೆಗೆಯಲಾಗಿತ್ತು. ಇನ್ನು ಒಬ್ಬ ವ್ಯಕ್ತಿ ಮೃತಪಟ್ಟಾಗ ಪಡೆಯುವ ಪಡೆಯುವ ವಿಮಾಮೊತ್ತಕ್ಕೂ ಈ ಹೊಸ ನೀತಿ ಅನ್ವಯವಾಗುವುದಿಲ್ಲ. ಈ ಬಾರಿಯ ನೀತಿಯ ಉದ್ದೇಶವೆಂದರೆ ಗರಿಷ್ಠ ಮೌಲ್ಯ ಹೊಂದಿರುವ ವಿಮೆಗಳಿಗೆ ತೆರಿಗೆ ವಿನಾಯ್ತಿ ನೀಡುವುದನ್ನು ನಿಲ್ಲಿಸುವುದು.
ತಜ್ಞರ ವಿರೋಧ: ಸರ್ಕಾರದ ಹೊಸನೀತಿಯನ್ನು ತಜ್ಞರು ವಿರೋಧಿಸಿದ್ದಾರೆ. ಈ ನೀತಿಯಿಂದ ವಿಮಾವಲಯದಲ್ಲಿ ಋಣಾತ್ಮಕ ಪರಿಣಾಮವಾಗುತ್ತದೆ. ಗರಿಷ್ಠ ಮೌಲ್ಯ ಹೊಂದಿರುವ ಸಾಂಪ್ರದಾಯಿಕ ವಿಮೆಗಳನ್ನು (ಜೀವವಿಮೆ) ಕೊಳ್ಳುವ ವ್ಯಕ್ತಿಗಳ ಆಸಕ್ತಿ ಕುಂದಬಹುದು. ಜನ ಇನ್ನು ನಿಗದಿತ ಅವಧಿಯ ವಿಮೆಗಳಿಗೆ, ಭದ್ರತಾ ಆಧಾರಿತ ವಿಮೆಗಳಿಗೆ ಬದಲಿಸಿಕೊಳ್ಳಬಹುದು. ಈ ಹೊಸ ನೀತಿಯಿಂದ ಜನರು ಹೂಡಿಕೆ ಆಧಾರಿತ ಯೂಲಿಪ್ಗಳಿಗೆ ಬದಲಾಗದಿದ್ದರೆ ಸಾಕು ಎಂದು ಸೆಕ್ಯೂರ್ನೌ ಇನ್ಶೂರೆನ್ಸ್ ಬ್ರೋಕರ್ ಸಂಸ್ಥೆಯ ಸಹ ಸಂಸ್ಥಾಪಕ ಕಪಿಲ್ ಮೆಹ್ತಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು