Train: ಇಂದಿನಿಂದ ವಿಸ್ತರಿತ ಮೈಸೂರು – ಮುರ್ಡೇಶ್ವರ ರೈಲು ಸಂಚಾರ
Team Udayavani, Sep 16, 2023, 2:36 AM IST
ಕುಂದಾಪುರ: ಮಂಗಳೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ಬೆಂಗಳೂರು-ಮೈಸೂರು ರೈಲನ್ನು ಈಗ ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದ್ದು, ಸೆ. 16ರಿಂದ ಈ ರೈಲು ಸಂಚಾರ ಆರಂಭಗೊಳ್ಳಲಿದೆ. ಬೆಂಗಳೂರಿನಿಂದ ಸೆ. 16ರ ರಾತ್ರಿ ಹೊರಡಲಿದ್ದು, ಮೈಸೂರು, ಸೆ. 17ರಂದು ಉಡುಪಿ, ಕುಂದಾಪುರ ಮೂಲಕ ಮುರ್ಡೇಶ್ವರ ತಲುಪಲಿದೆ.
ಈ ಹಿಂದೆ ಈ ರೈಲು ಮಂಗಳೂರುವರೆಗೆ ಮಾತ್ರ ಸಂಚರಿಸುತ್ತಿತ್ತು. ಕರಾವಳಿ, ಅದರಲ್ಲೂ ಕುಂದಾಪುರ ಭಾಗದ ರೈಲು ಪ್ರಯಾಣಿಕರ ಒತ್ತಾಯ, ಜನಪ್ರತಿನಿಧಿಗಳ ಪ್ರಯತ್ನದಿಂದಾಗಿ ಈ ರೈಲು ಸಂಚಾರವನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದೆ. ಇದರಿಂದ ಮೈಸೂರು ಭಾಗದಿಂದ ಕರಾವಳಿಗೆ ಬರುವವರಿಗೆ, ಕರಾವಳಿ ಭಾಗದಿಂದ ಮೈಸೂರು ಕಡೆಗೆ ತೆರಳುವವರಿಗೆ ಅನುಕೂಲವಾಗಲಿದೆ.