ಸುಲಿಗೆ, ಸಾಲದ ಬಜೆಟ್: ಯು.ಟಿ.ಖಾದರ್ ಆರೋಪ
Team Udayavani, Feb 19, 2023, 6:15 AM IST
ಮಂಗಳೂರು: ರಾಜ್ಯದ ಸಂಸದರ ಮೌನ, ಅಸಹಾಯಕತೆ, ಕೇಂದ್ರದ ಮಲತಾಯಿ ಧೋರಣೆ ಮೊದಲಾದವುಗಳಿಂದ ರಾಜ್ಯದ ಜನತೆಯನ್ನು ಸಾಲಗಾರರನ್ನಾಗಿ ಮಾಡುವ ಪರಿಸ್ಥಿತಿಗೆ ಸರಕಾರ ತಲು
ಪಿದ್ದು, ಸುಲಿಗೆ, ಸಾಲದ ಬಜೆಟ್ ಮಂಡನೆಯಾಗಿದೆ ಎಂದು ಶಾಸಕ ಯು.ಟಿ.ಖಾದರ್ ಪತ್ರಿಕಾ
ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಬಂದ ನಂತರದಿಂದ 2018ರ ಸಿದ್ದರಾಮಯ್ಯ ಸರಕಾರದ ಅಂತ್ಯದ ವರೆಗೆ 2.42ಲಕ್ಷ ಕೋ.ರೂ.ಇದ್ದ ರಾಜ್ಯ ಸರಕಾರದ ಸಾಲ 2023ರಲ್ಲಿ 5.64 ಲಕ್ಷ ಕೋ.ರೂ.ಗೆ ಏರಿಕೆಯಾಗಿದೆ. 5 ವರ್ಷದಲ್ಲಿ 3.20 ಲಕ್ಷ ಕೋಟಿ ರೂ. ಸಾಲ ಮಾಡಿ ಜನರ ಮೇಲೆ ಇಟ್ಟಿದೆ. 3.9 ಲಕ್ಷ ಕೋಟಿ ರೂ.ಬಜೆಟ್ನಲ್ಲಿ 2.45 ನಿಗದಿತ ವೆಚ್ಚಕ್ಕೆ ಮೀಸಲಾಗಿರಿಸಲಾಗಿದ್ದು, ಇದು ಅಭಿವೃದ್ಧಿಯಲ್ಲಿ ಬರುವುದಿಲ್ಲ. ಎಂದರು.
ಬಜೆಟ್ನಲ್ಲಿ ಕರಾವಳಿ ಮೀನುಗಾರರಿಗೆ ಬಂಪರ್ ಎಂದು ಬಿಂಬಿಸ ಲಾಗಿದೆ.ಆದರೆ ಸಂಪೂರ್ಣಮೋಸ ಮಾಡಲಾಗಿದೆ. ಮೀನು ಗಾರಿಕಾ ಕೊಂಡಿ ರಸ್ತೆ, ಕಡಲು ಕೊರೆತ ತಡೆ, ಅಳಿವೆ ಬಾಗಿಲು ಡ್ರೆಜ್ಜಿಂಗ್ ಇವುಗಳ ಪ್ರಸ್ತಾವನೆಯೇ ಇಲ್ಲ. ಎಂದರು.
ಟಿಪ್ಪುವೇ ಸರಕಾರಕ್ಕೆ ಆಕ್ಸಿಜನ್
ರಾಜ್ಯ ಸರಕಾರ ಕೊನೇ ಉಸಿರು ಎಳೆಯುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿಯ ಬದಲು ಟಿಪ್ಪು, ಪಾಕಿಸ್ಥಾನ, ಭಯೋತ್ಪಾದನೆ, ತಾಲಿಬಾನ್, ಎಸ್ಡಿಪಿಐ, ಎಂಐಎಂ ಇವುಗಳೇ ಸರಕಾರಕ್ಕೆ ಆಕ್ಸಿಜನ್. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಾದ ಉಚಿತ ವಿದ್ಯುತ್ ಮತ್ತು ಮನೆ ಯಜಮಾನಿಗೆ 2 ಸಾವಿರ ರೂ. ಘೋಷಣೆಗೆ ಬದ್ಧವಾಗಿದೆ ಎಂದವರು ಹೇಳಿದರು.
ಸದಾಶಿವ ಉಳ್ಳಾಲ, ಸಂತೋಷ್ ಕುಮಾರ್ ಶೆಟ್ಟಿ, ದೀಪಕ್ ಪೂಜಾರಿ, ವೃಂದಾ ಪೂಜಾರಿ, ಸೊಹೈಲ್ ಕಂದಕ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ