ದೇಶ ಶಾಂತಿಗಾಗಿ ಸಂದೇಶ ಸಾರಿ ಸೈಕಲ್ ನಲ್ಲಿ ದೇಶ ಸುತ್ತಿದ ರೈತ

ರಾಯಚೂರಿಂದ ಹೊರಟು 13 ರಾಜ್ಯ ಸುತ್ತಿ ಧರ್ಮಸ್ಥಳಕ್ಕೆ ಭೇಟಿ

Team Udayavani, Feb 9, 2023, 3:18 PM IST

6–dharmasthala

ಬೆಳ್ತಂಗಡಿ: ದೇಶ ಶಾಂತಿಯಿಂದ ನೆಲೆಸಬೇಕು, ಮಕ್ಕಳು ಗುರು ಹಿರಿಯರಿಗೆ ಗೌರವ ನೀಡಬೇಕು ಹಾಗೂ ಭವಿಷ್ಯದ ಪೀಳಿಗೆಗೆ ನದಿಗಳ ಸಂರಕ್ಷಣೆಯೊಂದಿಗೆ ಶುದ್ಧ ನೀರು, ಶುದ್ಧ ಗಾಳಿ ನಮ್ಮದಾಗಬೇಕು ಎಂಬ ಸಂದೇಶ ಸಾರುತ್ತಾ ರಾಯಚೂರಿನಿಂದ ಸೈಕಲ್ ನಲ್ಲೇ 13 ರಾಜ್ಯ ಸುತ್ತಿ ಧರ್ಮಸ್ಥಳ ತೀರ್ಥ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರಿನ ಐವತ್ತೈದು ವರ್ಷದ ವಿಜಯ್ ಗೋಪಾಲ್ ಕೃಷ್ಣ ಎಂಬುವರು ಕಳೆದ 2022 ಮಾರ್ಚ್ 11 ರಂದು ತಮ್ಮ ಸೈಕಲ್ ಏರಿ ದೇಶ ಸುತ್ತಲು ಹೊರಟವರು ಕಾಶಿಯಿಂದ ರಾಮೇಶ್ವರ ವರೆಗೆ ಕರ್ನಾಟಕ, ತೆಲಂಗಾಣ, ಗುಜರಾತ್, ಅಯೋಧ್ಯೆ, ಉತ್ತರಪ್ರದೇಶ, ಕಾಶಿ, ಮಧುರ, ಆಗ್ರ, ಹರಿಯಾಣ, ದೆಹಲಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಕೇರಳ ಸುತ್ತಿ ಧರ್ಮಸ್ಥಳಕ್ಕೆ ಬಂದು ಉಡುಪಿ, ಕಾರಾವಾರ ತೆರಳಲು ಅಣಿಯಾಗಿದ್ದಾರೆ.

ಅವಿವಾಹಿತರಾಗಿರುವ ಇವರು ವ್ಯವಸಾಯಯೇ ಜೀವನಾಧಾರ. ಭಾರತವು ಸುಭದ್ರ ರಾಷ್ಟ್ರವಾಗಬೇಕು. ದೇಶದಲ್ಲಿ ಅನಾಚಾರ, ದೃಷ್ಕೃತ್ಯಗಳು ನಿಲ್ಲಬೇಕು, ಹಾಗೂ ಎಲ್ಲರೂ ದೈವ ಭಕ್ತರಾಗಿದ್ದು ಶಾಂತಿಗಾಗಿ ದೇಶಕ್ಕೆ ಏನನ್ನಾದರು ಕೊಡುಗೆ ನೀಡಿ ಎಂಬುದು ಇವರ ಸೈಕಲ್ ಯಾತ್ರೆಯ ಉದ್ದೇಶವಾಗಿದೆ.

ಸುಮಾರು 22,000 ಕಿ.ಮೀ. ಕೇವಲ ಸೈಕಲ್ ನಲ್ಲಿಯೇ ಸುತ್ತಾಡಿದ ಇವರು, ದೇಶದಲ್ಲಿ ಗಂಗಾ, ಯಮುನಾ, ಸರಸ್ವತಿ ಸಹಿತ 12 ಪ್ರಮುಖದ ನದಿಗಳನ್ನು ಸಂದರ್ಶಿಸಿದ್ದಾರೆ.

ದೇವಸ್ಥಾನದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲೇ ನಿದ್ರೆ. ಆಹಾರ ಸೇವಿಸುತ್ತಾ ದಿನ ಒಂದಕ್ಕೆ 70 ರಿಂದ 80 ಕಿ.ಮೀ. ಪ್ರಯಾಣಿಸುತ್ತಾರೆ. ಭಾರತದಲ್ಲಿ ನನಗಿಂತ ಹೆಚ್ಚಾಗಿ ಧ್ವಜಕ್ಕೆ ಬೆಲೆಯಿದ್ದು ಭಾರತೀಯ ಸಂಸ್ಕೃತಿಯ ಒಪ್ಪುವವರೆಲ್ಲಾ ನನಗೆ ಎಲ್ಲ ರಾಜ್ಯಗಳಲ್ಲೂ ಸಹಾಯ, ಸಹಕಾರ ಒದಗಿಸಿದ್ದಾರೆ ಎಂದು ಉದಯವಾಣಿಗೆ ತಿಳಿಸಿದರು.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಬೆಳ್ತಂಗಡಿ ಮಾರ್ಗವಾಗಿ ಉಡುಪಿಗೆ ಸಾಗಿದರು. ಕೇವಲ ಐದನೇ ತರಗತಿ ಶಿಕ್ಷಣ ಪಡೆದ ವಿಜಯ್ ಅವರು ಕನ್ನಡ, ಹಿಂದಿ, ಆಂಗ್ಲ ಭಾಷೆಯಲ್ಲೂ ವ್ಯವಹರಿಸುವ ಮೂಲಕ ದೇಶದ ಬಗೆಗಿನ ಅವರ ಅಮರ ಪ್ರೇಮ ಮಾದರಿಯಾಗಿದೆ.

ಟಾಪ್ ನ್ಯೂಸ್

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.