Finance: ಶೇ.2 ವರೆಗೆ ವೈಯಕ್ತಿಕ, ವಾಹನ ಸಾಲ ಬಡ್ಡಿ ದರ ಸದ್ದಿಲ್ಲದೆ ಏರಿಕೆ!
ಹಬ್ಬದ ಋತು ಮುಗಿಯುತ್ತಿದ್ದಂತೆ ಹಲವು ಬ್ಯಾಂಕುಗಳಿಂದ ಈ ಕ್ರಮ
Team Udayavani, Jan 7, 2024, 9:10 PM IST
ಮುಂಬೈ: ನಿಮ್ಮ ವೈಯಕ್ತಿಕ ಸಾಲ ಮತ್ತು ವಾಹನ ಸಾಲದ ಬಡ್ಡಿ ದರ ಏರಿಕೆಯಾಗಿದೆಯೇ? ಒಮ್ಮೆ ಚೆಕ್ ಮಾಡಿಕೊಳ್ಳಿ.
ಹಲವು ಬ್ಯಾಂಕುಗಳು ಗೃಹ ಸಾಲ ಹೊರತುಪಡಿಸಿ ಇತರೆ ಕೆಲವು (ರಿಟೇಲ್) ಸಾಲಗಳ ಮೇಲಿನ ವೆಚ್ಚ ಆಧಾರಿ ಬಡ್ಡಿ ದರ(ಎಂಸಿಎಲ್ಆರ್)ವನ್ನು ಸದ್ದಿಲ್ಲದೇ ಏರಿಕೆ ಮಾಡಿವೆ.
ಬ್ಯಾಂಕುಗಳು ತಮ್ಮ ಗೃಹ ಸಾಲಗಳನ್ನು ರೆಪೋ ದರಕ್ಕೆ ಲಿಂಕ್ ಮಾಡಿರುತ್ತವೆ. ಆದರೆ, ಇತರೆ ಸಾಲಗಳು ರೆಪೋ ದರಕ್ಕೆ ಲಿಂಕ್ ಆಗಿರುವುದಿಲ್ಲ. ಅದರಂತೆ, ಚಿಲ್ಲರೆ ಸಾಲಗಳ ಮೇಲಿನ ಬಡ್ಡಿ ದರವನ್ನು ಬ್ಯಾಂಕುಗಳು ಪರಿಷ್ಕರಿಸಲಾರಂಭಿಸಿವೆ.
ಯಾವ ಬ್ಯಾಂಕ್ನಿಂದ ಎಷ್ಟು ಹೆಚ್ಚಳ?
ಕಳೆದ ವರ್ಷದ ಡಿಸೆಂಬರ್ವರೆಗೆ ಎಸ್ಬಿಐ ವಾಹನ ಸಾಲದ ಬಡ್ಡಿ ದರ ಶೇ.8.65ರಿಂದ ಆರಂಭವಾಗುತ್ತಿತ್ತು. ಈಗ ಅದನ್ನು ಶೇ.8.85ಕ್ಕೆ(ಅಧಿಕ ಕ್ರೆಡಿಟ್ ಸ್ಕೋರ್ ಇರುವ ಗ್ರಾಹಕರಿಗೆ) ಏರಿಸಲಾಗಿದೆ. ಅದೇ ರೀತಿ, ಬ್ಯಾಂಕ್ ಆಫ್ ಬರೋಡಾದ ವಾಹನ ಸಾಲದ ಆರಂಭಿಕ ಬಡ್ಡಿ ದರ ಡಿಸೆಂಬರ್ನಲ್ಲಿ ಶೇ.8.7 ಇದ್ದಿದ್ದು, ಈಗ ಶೇ.8.8 ಆಗಿದೆ. ಜತೆಗೆ, ಪ್ರೊಸೆಸಿಂಗ್ ಶುಲ್ಕವನ್ನೂ ಮರು ಜಾರಿ ಮಾಡಲಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಾರು ಸಾಲದ ಮೇಲಿನ ಬಡ್ಡಿ ದರ ಶೇ.8.75ರಿಂದ ಆರಂಭವಾಗುತ್ತಿದ್ದದ್ದು, ಈಗ ಶೇ.9.15ಕ್ಕೇರಿದೆ. ಕರ್ನಾಟಕ ಬ್ಯಾಂಕ್ನ ವೈಯಕ್ತಿಕ ಸಾಲದ ಬಡ್ಡಿ ದರ ಶೇ.14.21ರಿಂದ ಶೇ.14.28ಕ್ಕೇರಿಸಲಾಗಿದೆ. ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಪರ್ಸನಲ್ ಲೋನ್ನ ಬಡ್ಡಿ ದರ ನವೆಂಬರ್ನಲ್ಲಿ ಶೇ.10.49 ಇದ್ದಿದ್ದು, ಈಗ ಶೇ.10.75ಕ್ಕೇರಿಸಲಾಗಿದೆ. ಹಬ್ಬಗಳ ಋತು ಮುಗಿಯುತ್ತಿದ್ದಂತೆ ಬಡ್ಡಿ ದರ ಏರಿಕೆ ಮಾಡಲು ಬ್ಯಾಂಕುಗಳು ಕಾಯುತ್ತಿದ್ದವು. ಅದರಂತೆ, ಈಗ ಪರಿಷ್ಕರಣೆ ಮಾಡಲಾಗಿದೆ ಎಂದು ಬ್ಯಾಂಕಿನ ಮೂಲಗಳು ತಿಳಿಸಿವೆ.
ಬ್ಯಾಂಕ್ ಹಾಲಿ ಬಡ್ಡಿದರ (%) ಹೊಸ ಬಡ್ಡಿದರ (%)
ಎಸ್ಬಿಐ 8.65 8.85
ಬ್ಯಾಂಕ್ ಆಫ್ ಬರೋಡ 8.7 8.8
ಯೂನಿಯ್ ಬ್ಯಾಂಕ್ 8.75 9.15
ಐಡಿಎಫ್ಸಿ ಫಸ್ಟ್ ಬ್ಯಾಂಕ್ 10.45 10.75
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು
NITI Aayog ಸಭೆಯಲ್ಲಿ ಯಾರು ಭಾಗವಹಿಸಲಿಲ್ಲವೋ ಅವರಿಗೇ ನಷ್ಟ: ಬಿ.ವಿ.ಆರ್.ಸುಬ್ರಹ್ಮಣ್ಯಂ
Science ಸೀಟ್ ಸಿಗದ ಕೊರಗಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ!
NITI Aayog ಸಭೆ; ಎಲ್ಲಾ ರಾಜ್ಯಗಳ ಪ್ರಯತ್ನದಿಂದ ವಿಕಸಿತ ಭಾರತ್ ಗುರಿ: ಪ್ರಧಾನಿ
Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು
MUST WATCH
ಹೊಸ ಸೇರ್ಪಡೆ
Priyank Kharge: ಸಿದ್ದು-ಡಿಕೆಶಿ ಬಂಧನಕ್ಕೆ ಬಿಜೆಪಿ ನಾಯಕರ ಹುನ್ನಾರ; ಪ್ರಿಯಾಂಕ್
Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು
Kampli: ಹೆಚ್ಚಿದ ನೆರೆ ಪ್ರವಾಹ; ಹೊಲಗಳಿಗೆ ನುಗ್ಗಿದ ನೀರು
Mysuru ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮೃತಪಟ್ಟ 27 ರ ಯುವಕ!
Hyper-s*xualised; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ: ಧರ್ಮನಿಂದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.