ಗ್ರಾಮೀಣ ಜನರ ಮತ್ಸ್ಯ ಬೇಟೆ ; ಉಬಾರ್ ಗುದ್ದುನ ಗಮ್ಮತ್ತ್
Team Udayavani, Jun 29, 2023, 3:48 PM IST
ಬೆಳ್ಮಣ್: ಗ್ರಾಮೀಣ ಭಾಗದ ವಿವಿಧ ಆಚರಣೆ, ಸಂಪ್ರದಾಯ ಗಳನ್ನು ಮೀರಿ ನಿಲ್ಲಬಹುದಾದ ಪ್ರಕ್ರಿಯೆ ಗ್ರಾಮೀಣ ಜನರ ಮತ್ಸ್ಯ ಬೇಟೆ “ಉಬಾರ್ ಗುದ್ದುನಿ’ ಕರಾವಳಿ ಭಾಗದಲ್ಲಿ ಬಿರುಸಾಗಿದ್ದು ಕಳೆದೆರಡು ದಿನಗಳ ಭಾರೀ ಮುಂಗಾರು ಮಳೆಗೆ ಯುವಕರು ಹಗಲು ರಾತ್ರಿ ಉಬಾರ್ ಗುದ್ದುನಿ ಪ್ರಕ್ರಿಯೆಯ ಮೂಲಕ ಮತ್ಸ್ಯ ಬೇಟೆಯಲ್ಲಿ ತೊಡಗಿದ್ದಾರೆ.
ಸಂಕಲಕರಿಯ, ಏಳಿಂಜೆ, ಸೂರಿಂಜೆ, ಕಾಂತಾವರ, ಮುಂಡ್ಕೂರು, ಸಾಣೂರು, ಭಾಗದ ಹೊಲ ಗದ್ದೆಗಳಲ್ಲಿ ಯುವಕರು ಕಳೆದೆರಡು ದಿನಗಳಿಂದ ಮೀನು ಬೇಟೆ ನಡೆಸಿದ್ದಾರೆ. ಈ ಪ್ರಕ್ರಿಯೆ ಇನ್ನೂ ಒಂದು ವಾರ ನಡೆಯುವ ಸಾಧ್ಯತೆ ಇದೆೆ.
ಮಳೆಯ ನೀರು ನದಿಗೆ ಸೇರುವ ಗದ್ದೆಗಳಲ್ಲಿ, ಕೊನೆಯವರೆಗೂ ನೀರು ಬತ್ತದ ಹಳ್ಳಿಗಾಡಿನ ಹೊಲಗಳ ಕೆರೆಗಳ ಪಕ್ಕದಲ್ಲಿ ಈ ಮೀನುಗಳು ಸಿಹಿ ನೀರು ಕುಡಿಯಲು ಧಾವಿಸುವ ಸಂದರ್ಭ ಮೀನು ಬೇಟೆ ನಡೆಯುತ್ತಿದೆ. ರಾತ್ರಿ ಹೊತ್ತು ಚಾರ್ಜರ್, ಟಾರ್ಚ್ ಅಥವಾ ದೊಂದಿ ಬಳಸಿ ಕುತ್ತರಿ, ಮಕ್ಕೆರಿ, ಕತ್ತಿ, ದೊಣ್ಣೆ ಬಳಸಿ ಈ ಉಬಾರ್ ಗುದ್ದುನಿ ಪ್ರಕ್ರಿಯೆಯ ಮೂಲಕ ಮೀನುಗಳನ್ನು ಹೊಡೆಯಲಾಗುತ್ತದೆ. ಹಗಲಲ್ಲಿ ಬಲೆಗಳನ್ನು ಬಳಸಿ ಮೀನು ಹಿಡಿಯಲಾಗುತ್ತದೆ. ಹೀಗೆ ಹಿಡಿದ ಮೀನುಗಳು ಭಾರೀ ರುಚಿಕರ ಎಂದು ಸವಿದವರ ಅಂಬೋಣ.
ಕಿಜನ್, ಮುಗುಡು, ಮೊಡೆಂಜಿ, ಜೆಂಜಿ, ಪುರಿಯೋಲು, ಅಬ್ರೋಣಿ, ಅಲಂಕ್, ಕೊಂತಿ ಎಂಬಿತ್ಯಾದಿ ಮೀನುಗಳು ಈ ಬಲೆಗೆ ಸಿಗುತ್ತವೆ.
-ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ