ಕಸದ ಲಾರಿ ಚಾಲಕರಿಗೆ ಫಿಟ್ನೆಸ್ ಟೆಸ್ಟ್‌; ಫೇಲ್‌ ಆದ ಚಾಲಕರಿಗೆ ಕೋಕ್‌

ಸಂಜೆ 6ಕ್ಕೆ ಪಾಳಿ ಸಿಗುತ್ತದೆ.ಅಲ್ಲಿಯವರೆಗೂ ಚಾಲಕರು ಆ ಜಾಗದಲ್ಲೇ ಕಾಲ ಕಳೆಯಬೇಕಾಗುತ್ತದೆ.

Team Udayavani, Apr 22, 2022, 11:32 AM IST

ಕಸದ ಲಾರಿ ಚಾಲಕರಿಗೆ ಫಿಟ್ನೆಸ್ ಟೆಸ್ಟ್‌; ಫೇಲ್‌ ಆದ ಚಾಲಕರಿಗೆ ಕೋಕ್‌

ಬೆಂಗಳೂರು: ಕೇವಲ ಒಂದು ತಿಂಗಳ ಅಂತರದಲ್ಲಿ ನಗರದ ಕಸದ ಲಾರಿಗಳು ಮೂರು ಬಲಿ ಪಡೆದ ಹಿನ್ನೆಲೆಯಲ್ಲಿ ಅವುಗಳ ಚಾಲಕರನ್ನು ದೈಹಿಕ ಪರೀಕ್ಷೆಗೊಳಪಡಿಸಲು ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ ಸುಮಾರು 350ರಿಂದ 400 ಲಾರಿಗಳಲ್ಲಿ ಕಸ ಬೇರೆ ಬೇರೆ ಕಡೆ ವಿಲೇವಾರಿ ಆಗುತ್ತದೆ. ಈ ಪೈಕಿ ಸಾವಿರ ಟನ್‌ ಹಸಿ ಕಸ ಸಂಸ್ಕರಣಾ ಕೇಂದ್ರಗಳಿಗೆ ಹಾಗೂ ಸುಮಾರು ಎರಡು ಸಾವಿರ ಟನ್‌ ಭೂಭರ್ತಿಗೆ ಹೋಗುತ್ತದೆ. ಈ ಲಾರಿಗಳ ಚಾಲಕರನ್ನು ಯಲಹಂಕದಲ್ಲಿರುವ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ದೈಹಿಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದ್ದು, ತಲಾ 50 ಜನರ ತಂಡಗಳನ್ನು ಮಾಡಿ, ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಸ್ಟಿಮ್ಯುಲೇಟರ್‌ನಲ್ಲಿ ಚಾಲಕರನ್ನು
ಕೂರಿಸಿ, ಕಣ್ಣು, ಕಿವಿ ಸೇರಿದಂತೆ ಚಾಲನಾ ಸಾಮರ್ಥ್ಯ ಪರಿಕ್ಷೆ ನಡೆಯಲಿದೆ. ಮುಂದಿನ 12 ದಿನಗಳು ಇದು ನಿರಂತರವಾಗಿ ಇರಲಿದೆ.

“ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಈ ಪರೀಕ್ಷೆ ಕೂಡ ಆರಂಭವಾಗಿದ್ದು, ಇದರಲ್ಲಿ ಅನುತ್ತೀರ್ಣಗೊಂಡವರನ್ನು ಗುತ್ತಿಗೆದಾರರಿಗೆ ಸುರಕ್ಷತೆ ದೃಷ್ಟಿಯಿಂದ ಕೈಬಿಡುವಂತೆ ಸೂಚಿಸಲಾಗುವುದು. ಅಲ್ಲದೆ, ಭೂಭರ್ತಿ ಘಟಕದ ಬಳಿ ತೂಕ ಮಾಡುವ ಯಂತ್ರಗಳ ಬಳಿ ಅಥವಾ ಮತ್ತೂಂದು ಪಾಯಿಂಟ್‌ನಲ್ಲಿ ಈ ಪರೀಕ್ಷೆ ಮೂಲಕ ಚಾಲಕರನ್ನು ಆಲ್ಕೋಮೀಟರ್‌ ಮೂಲಕ ಡ್ರಂಕ್‌ ಆಂಡ್‌ ಡ್ರೈವ್‌ ಪರೀಕ್ಷೆಗೊಳಪಡಿಸುವ ಚಿಂತ  ನೆಯೂ ನಡೆದಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಒಂದು ಕಸದ ಲಾರಿಯು ಸುಮಾರು ನಾಲ್ಕೈದು ಟನ್‌ ಕಸವನ್ನು ಹೊತ್ತೂಯ್ಯುತ್ತದೆ. ನಗರದ ವಿವಿಧ ಬಡಾವಣೆಗಳಿಂದ ಕಸ ಸಂಗ್ರಹಿಸಿಕೊಂಡು ಬರುವ ಕಾಂಪ್ಯಾಕ್ಟರ್‌ಗಳಿಂದ ಈ ಲಾರಿಗಳಿಗೆ ಕಸ ತುಂಬಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ತೆರಳುವ ಈ ವಾಹನಗಳು ಭೂಭರ್ತಿ ಕೇಂದ್ರಗಳಲ್ಲಿ ಪಾಳಿ ನಿಲ್ಲಬೇಕಾಗುತ್ತದೆ. ಸಂಜೆ 6ಕ್ಕೆ ಪಾಳಿ ಸಿಗುತ್ತದೆ.ಅಲ್ಲಿಯವರೆಗೂ ಚಾಲಕರು ಆ ಜಾಗದಲ್ಲೇ ಕಾಲ ಕಳೆಯಬೇಕಾಗುತ್ತದೆ. ಬಹುತೇಕ ಎಲ್ಲ ಚಾಲಕರು ಸಾಕಷ್ಟು ಅನುಭವ ಹೊಂದಿದವರಾಗಿದ್ದಾರೆ. ಆದಾಗ್ಯೂ ಅಹಿತಕರ ಘಟನೆಗಳು ಸಂಭವಿಸುತ್ತಿವೆ.

ಹೊಸ ವಾಹನಗಳು?
ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಸಮಗ್ರ ಟೆಂಡರ್‌ ಕರೆಯಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಹೊಸ ಕಸದ ವಾಹನಗಳನ್ನು ರಸ್ತೆಗಿಳಿಸಬೇಕು ಎಂಬ ಷರತ್ತು ಕೂಡ ಟೆಂಡರ್‌ ನಲ್ಲಿ ಸೇರಿಸಲು ಉದ್ದೇಶಿಸಿದೆ. ಐದು ವರ್ಷಗಳ ಗುತ್ತಿಗೆ ಇದಾಗಿರುತ್ತದೆ. ಜಿಪಿಎಸ್‌, ಬ್ಯಾಟರಿ ಮತ್ತಿತರ ಉಪಕರಣಗಳು ವಾಹನಗಳು ರಸ್ತೆಗಿಳಿಯುವಾಗಲೇ ಅಳವಡಿಕೆಯಾಗಿ ಬಂದರೆ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ವಾಹನಗಳನ್ನು ರಸ್ತೆಗಿಳಿಸಲು ಚಿಂತನೆ ನಡೆದಿದೆ. ಆದರೆ, ಇದಕ್ಕೆ ಮುಂಬರುವ ದಿನಗಳಲ್ಲಿ ಹಲವು ತಾಂತ್ರಿಕ ಅಡತಡೆಗಳೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಾರಿಗಳ ಮುಂಭಾಗ ಬಾವುಟ ಅಳವಡಿಕೆ
“ಮೂರೂ ಅಪಘಾತಗಳಲ್ಲಿ ಕಾರಣಗಳು ಏನೇ ಇರಬಹುದು. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಇದರಲ್ಲಿ ದೈಹಿಕ ಪರೀಕ್ಷೆ ಕೂಡ ಒಂದಾಗಿದೆ. ಜತೆಗೆ ಸಾಮಾನ್ಯವಾಗಿ ರಕ್ಷಣಾ ಇಲಾಖೆಯ ವಾಹನಗಳ ಮುಂಭಾಗದಲ್ಲಿ ಎರಡೂ ಬದಿಯಲ್ಲಿ ಬಾವುಟಗಳನ್ನು ಅಳವಡಿಸಲಾಗಿರುತ್ತದೆ. ಅದೇ ಮಾದರಿಯಲ್ಲಿ ಕಸದ ಲಾರಿಗಳ ಮುಂಭಾಗದ ಎರಡೂ ಬದಿಯಲ್ಲಿ ಬಿಳಿ ಅಥವಾ ಕಣ್ಣಿಗೆ ಎದ್ದುಕಾಣುವ ಯಾವುದಾದರೂ ಬಣ್ಣದ ಬಾವುಟಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ ಅನಾಹುತಗಳನ್ನು ತಪ್ಪಿಸಬಹುದು’ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು
ಮಾಹಿತಿ ನೀಡಿದರು. “ಈ ಕ್ರಮದಿಂದ ವಾಹನ ಹಿಂದಿಕ್ಕುವವರು ಅಥವಾ ಮುಂದೆ ಬರುವ ವಾಹನಗಳು ಕನಿಷ್ಠ ಆ ಬಾವುಟಗಳಷ್ಟು ಅಂತರ ಕಾಯ್ದುಕೊಳ್ಳಲು ಅನುಕೂಲ ಆಗುತ್ತದೆ. ಈ ಕುರಿತು ಚರ್ಚೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.