ಕಟಪಾಡಿ: ಮೂಕ ಪ್ರಾಣಿಗಳ ಹಸಿವು ನೀಗಿಸುವ ಮೂಲಕ ಮಾನವೀಯತೆ
Team Udayavani, Apr 22, 2020, 4:52 PM IST
ಕಟಪಾಡಿ: ಸುಭಾಸ್ನಗರದ ಟೀಂ ಓಂಕಾರ್ ನಾಸಿಕ್ ಫ್ರೆಂಡ್ಸ್ ಹಸಿದ ಶ್ವಾನಗಳು, ಪಕ್ಷಿಗಳಿಗೆ ಕೋಳಿ ಪದಾರ್ಥ ಬೆರೆಸಿದ ಅನ್ನದ ಊಟ, ಪೆಡಿಗ್ರಿ, ಕುಡಿಯುವ ನೀರನ್ನು ನಿತ್ಯ ಉಣಬಡಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಶ್ವಾನಪ್ರಿಯರಾದ ಈ ತಂಡವು ಮೂಡಬೆಟ್ಟು, ಪಾಂಗಾಳ, ಕಲ್ಲಾಪು, ಕಟಪಾಡಿ, ಕೋಟೆ, ಮಟ್ಟು, ಅಗ್ರಹಾರ, ಮಣಿಪುರ, ದೆಂದೂರುಕಟ್ಟೆ, ಅಲೆವೂರು, ಕುರ್ಕಾಲು, ಸುಭಾಸ್ನಗರ, ಶಂಕರಪುರ, ಅರಸಿಕಟ್ಟೆ, ಬಂಟಕಲ್ಲು , ಸರಕಾರಿಗುಡ್ಡೆ ವ್ಯಾಪ್ತಿಯಲ್ಲಿ ತಮ್ಮ ಎರಡು ದ್ವಿಚಕ್ರ ವಾಹನಗಳ ಮೂಲಕ ಪಯಣಿಸಿ ಕಳೆದ ಸುಮಾರು 12 ದಿನಗಳಿಂದ ಹಸಿದ ಶ್ವಾನ -ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತಿದೆ ಎಂದು ಉದಯವಾಣಿಗೆ ಮಾಹಿತಿಯನ್ನು ನೀಡುವ ಈ ತಂಡವು ಮೂಕ ಪ್ರಾಣಿ ಗಳ ಒಡನಾಡಿಗಳಾಗಿ ಮಾನವೀಯ ನೆಲೆಯಲ್ಲಿ ತಮ್ಮ ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ದಿನನಿತ್ಯ ಸುಮಾರು 90ಕ್ಕೂ ಅಧಿಕ ನಾಯಿಗಳು, ಪಕ್ಷಿಗಳಿಗೆ ಮೂಡಬೆಟ್ಟುವಿನ ರೇಣುಕಾ ಮತ್ತು ಪುತ್ರಿ ಹರ್ಷಿತಾ ಅವರು ತಮ್ಮ ಮನೆಯಲ್ಲಿ 4 ಸೇರು ಅಕ್ಕಿ ಬಳಸಿ ಸಿದ್ಧಪಡಿಸಿದ ಅನ್ನ ಹಾಗೂ ಕೋಳಿ ಪದಾರ್ಥವನ್ನು ಬೇಯಿಸಿ ಈ ಯುವಕರ ತಂಡಕ್ಕೆ ನೀಡಿ ಬೆಂಬಲವನ್ನು ನೀಡುತ್ತಿದ್ದಾರೆ. ದಾನಿಗಳ ಸಹಕಾರದಿಂದ ಈ ಸೇವೆಯನ್ನು ನಡೆಸುತ್ತಿದ್ದಾರೆ. ತಂಡದಲ್ಲಿ ನಿತೇಶ್, ಕಾರ್ತಿಕ್, ಸುಜಿತ್, ಅಕ್ಷಿತ್, ಪ್ರಜ್ವಲ್, ವಿಜಯ್, ವಿನಯ್ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಗಾಡ್ ಪ್ರಾಮಿಸ್ಗೆ ಸ್ಕ್ರಿಪ್ಟ್ ಪೂಜೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ