ಗಂಗಾವತಿ: ಮಾಜಿ ಸಚಿವ ಶಿವರಾಜ್ ತಂಗಡಿಗಿಯಿಂದ ಕೇಸರಿ ಬಟ್ಟೆ ಧರಿಸಿ ಹನುಮ ಮಾಲೆ ವೃತ ಆರಂಭ
ದೇವರು ಹಾಗೂ ಗುಡಿಗಳು ಸರ್ವ ಹಿಂದೂಗಳಿಗೆ ಸೇರಿವೆ : ಮಾಜಿ ಸಚಿವ ತಂಗಡಗಿ
Team Udayavani, Apr 1, 2023, 11:01 AM IST
ಗಂಗಾವತಿ: ಹಿಂದೂ ಧರ್ಮ ಮತ್ತು ದೇವರುಗಳು ಯಾವ ಪಕ್ಷ ಅಥವಾ ಸಂಘ-ಸಂಸ್ಥೆಗೆ ಸೇರಿದವಲ್ಲ, ಸರ್ವ ಹಿಂದೂಗಳಿಗೆ ಸೇರಿವೆ ಎಂದು ಮಾಜಿ ಸಚಿವ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದರು.
ಅವರು ಕಾರಟಗಿಯಲ್ಲಿ ಹನುಮಮಾಲೆ ವೃತದ ಕೇಸರಿ ಬಟ್ಟೆ ಧರಿಸಿ ವೃತಾಚರಣೆ ಮಾಡುವ ಸಂದರ್ಭ ಮಾತನಾಡಿದರು.
ಪ್ರತಿಯೊಬ್ಬರು ದೇವರ ಸನ್ನಿಧಿಗೆ ತೆರಳಿ ತಮ್ಮ ಕಷ್ಟಗಳನ್ನು ಆಚರಣೆ ಮೂಲಕ, ಮನವಿ ಮಾಡುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬೇಕು. ದೇವರು ಮತ್ತು ಧರ್ಮ ಹಿಂದೂ ಜನರಲ್ಲಿ ದೈವಿ ಭಾವನೆ ಮೂಡಿಸುತ್ತದೆ. ಆದ್ದರಿಂದ ಧರ್ಮದ ಜೊತೆ ಹಿರಿಯರನ್ನು ಗೌರವಿಸುವ ಮತ್ತು ಧರ್ಮಾಚರಣೆ ಮಾಡುವ ಸಂಕಲ್ಪ ಹನುಮ ಮಾಲೆ ಕಲಿಸುತ್ತದೆ ಎಂದರು.
ಹನುಮಂತ ಯುವಕರ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಯುವಕ ಹನುಮಾನ್ ಮಾಲೆ ಧರಿಸುವ ಮೂಲಕ ಒಳ್ಳೆಯ ಅಭ್ಯಾಸ ಕಲಿಯಬೇಕು. ದುಶ್ಚಟಗಳನ್ನು ಬಿಡಬೇಕು. ಬಿಜೆಪಿಯವರು ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಧರ್ಮಾಚರಣೆ ಪ್ರತಿ ಹಿಂದೂವಿನ ರಕ್ತದಲ್ಲಿದ್ದು ಅದನ್ನು ಬಿಜೆಪಿ ಅಥವಾ ಅನ್ಯರು ಹೇಳಿ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ತಾವು ಐದು ದಿನಗಳ ವೃತಾಚಣೆ ಮಾಡುತ್ತಿದ್ದು, ತನ್ನ ಜತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರೂ ಮಾಲೆ ಧರಿಸಿದ್ದು, ನಿತ್ಯವೂ ದೇವರ ಸ್ಮರಣೆ, ಧಾರ್ಮಿಕ ಆಚರಣೆಯ ಸಂಕಲ್ಪ ಮಾಡಲಾಗುತ್ತಿದೆ. ಏ.6 ರಂದು ಹನುಮಮಾಲಾ ವಿಸರ್ಜನೆಯನ್ನು ಕಿಷ್ಕಿಂಧಾ ಅಂಜನಾದ್ರಿಗೆ ತೆರಳಿ ಮಾಡಲಾಗುತ್ತದೆ. ಇದರಲ್ಲಿ ನಾವೆಂದೂ ಅನ್ಯ ಪಕ್ಷದವರಂತೆ ರಾಜಕೀಯ ಮಾಡುವುದಿಲ್ಲ. ಧರ್ಮವನ್ನು ಧರ್ಮಾಚರಣೆಯ ಮೂಲಕ ಮಾಡಲಾಗುತ್ತದೆ. ಲಾಭ ನಷ್ಟದಲ್ಲಿ ಮಾಡಬಾರು ಎಂದರು.
ಮಾಜಿ ಸಚಿವ ಶಿವರಾಜ್ ತಂಗಡಗಿ ಕಳೆದ 10 ವರ್ಷಗಳಿಂದ ಹನುಮಮಾಲೆ ಧರಿಸುತ್ತಿದ್ದು, ಸಹಪಾಠಿಗಳ ಜತೆ ಪಾದಯಾತ್ರೆ ಮೂಲಕ ತೆರಳಿ ಹನುಮಮಾಲೆ ವಿಸರ್ಜನೆ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ