ಕೈ ಕಾಲಿಗೆ ಕೋಳ ಬಿಗಿದು ಈಜಿ ದಾಖಲೆ; 3.55 ಕಿ.ಮೀ.ಕಡಲಲ್ಲಿಈಜಿದ ಗಂಗಾಧರ್
ಕಾಲಿಗೆ ಸರಪಳಿ ಬಿಗಿದು 1.4 ಕಿ.ಮೀ. ದೂರವನ್ನು ಬ್ರೆಸ್ಟ್ಸ್ಟ್ರೋಕ್ ಶೈಲಿಯಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ
Team Udayavani, Jan 25, 2022, 9:25 AM IST
ಉಡುಪಿ: ಸೋಮವಾರ ಸಮುದ್ರ ಶಾಂತವಾಗಿರಲಿಲ್ಲ. ಬೆಳಗ್ಗಿ ನಿಂದಲೇ ಅಬ್ಬರ ಜೋರಾಗಿತ್ತು. ಅದಾವುದನ್ನೂ ಲೆಕ್ಕಿಸದೆ ಕೈ-ಕಾಲಿಗೆ ಕೋಳ ಬಿಗಿದುಕೊಂಡು ಸತತ 5.34 ಗಂಟೆಗಳಲ್ಲಿ 3,550 ಮೀಟರ್(3.55 ಕಿ.ಮೀ.) ಈಜುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ 66ರ ವಯಸ್ಸಿನ ರಾಷ್ಟ್ರೀಯ ಈಜುಪಟು ಗಂಗಾಧರ್ ಕಡೆಕಾರ್ ಹೊಸ ದಾಖಲೆ ಬರೆದರು.
ಕಿದಿಯೂರು ಪಡುಕರೆ ಶ್ರೀದೇವಿ ಭಜನ ಮಂದಿರ ಬಳಿ ಬೆಳಗ್ಗೆ 7.51ಕ್ಕೆ ಸಮುದ್ರಕ್ಕೆ ಧುಮುಕಿದ ಗಂಗಾಧರ್ ದಡ ತಲುಪುವಾಗ ಮಧ್ಯಾಹ್ನ 1.25 ಆಗಿತ್ತು. ಈಜು ಆರಂಭ ಸ್ಥಳದಿಂದ ಕೊನೆಯ ತನಕವೂ ತೇಲುವ ಮಾರ್ಕಿಂಗ್ ಮಾಡಲಾಗಿತ್ತು. ಸಾಧನೆ ವೇಳೆ ಸುತ್ತಲೂ ರಕ್ಷಣಾ ಬೋಟ್ಗಳಿದ್ದವು. ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಗಂಗಾಧರ್ ಅವರ ಸಾಧನೆ ವೀಕ್ಷಣೆಗೆ ಸಾರ್ವಜನಿ ಕರನ್ನು ಬೋಟ್ ಮೂಲಕ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು.
2021 ಜನವರಿಯಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1.4 ಕಿ.ಮೀ. ದೂರವನ್ನು ಬ್ರೆಸ್ಟ್ಸ್ಟ್ರೋಕ್ ಶೈಲಿಯಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ನಿರ್ಮಿಸಲು 1.30 ಗಂಟೆ ತೆಗೆದುಕೊಂಡಿದ್ದರು.
ಚಾಲನೆ
ಬೆಳಗ್ಗೆ ಎಡಿಸಿ ಬಿ. ಸದಾಶಿವ ಪ್ರಭು ಅವರು ಈಜು ಸಾಧನೆಗೆ ಚಾಲನೆ ನೀಡಿದರು. ದ.ಕ. ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ, ಸರಸ್ವತಿ, ದಿವಾಕರ ಕುಂದರ್, ಆನಂದ ಪಿ. ಸುವರ್ಣ, ವಿಜಯ ಕುಂದರ್, ಸಾಧು ಸಾಲ್ಯಾನ್, ಮಲ್ಲೇಶ್ ಕುಮಾರ್, ನಾಗರಾಜ ಸುವರ್ಣ, ವಾಸುದೇವ ಖಾರ್ವಿ, ಕಡೆಕಾರು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ಉಪಾಧ್ಯಕ್ಷ ಚಂದ್ರ ಎ. ಕುಂದರ್, ಹರ್ಷ ಮೈಂದನ್, ಪಾಂಡುರಂಗ ಮಲ್ಪೆ, ಲಕ್ಷ್ಮಣ ಮೈಂದನ್, ವಿಜಯ ಕುಂದರ್ ಉಪಸ್ಥಿತರಿದ್ದರು.
ಇದನ್ನೂ ಓದಿ:ರೀಬಾಕ್ನಿಂದ ಹೊಸ ಸ್ಮಾರ್ಟ್ವಾಚ್ ; “ರೀಬಾಕ್ ಆ್ಯಕ್ಟಿವ್ ಫಿಟ್ 1.0′ ಬಿಡುಗಡೆ
ಕಡಲು ಒಂದೇ ರೀತಿ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಸೋಮವಾರ ಬೆಳಗ್ಗಿನಿಂದಲೇ ಗಾಳಿ, ಅಲೆಗಳ ಅಬ್ಬರ ಹೆಚ್ಚಿತ್ತು. 60 ವರ್ಷದ ದಾಟಿದ ಮೇಲೆ ಸಮುದ್ರದಲ್ಲಿ ಈಜನ್ನು ಇನ್ನಷ್ಟು ಕರಗತ ಮಾಡಿಕೊಂಡಿದ್ದೇನೆ. ಕೆಲಸದಿಂದ ನಿವೃತ್ತನಾದ ಮೇಲೆ ಮಕ್ಕಳಿಗೆ ಉಚಿತವಾಗಿ ಈಜು ಕಲಿಸುತ್ತಿದ್ದೇನೆ. ಇಂದಿನ ಸಾಧನೆ ತುಂಬ ಖುಷಿ ಕೊಟ್ಟಿದೆ.
– ಗಂಗಾಧರ ಜಿ. ಕಡೆಕಾರ್
ಗಂಗಾಧರ್ ಮಹತ್ವ ಪೂರ್ಣ ದಾಖಲೆ ಬರೆದಿದ್ದಾರೆ. ನನ್ನ ಜೀವನದಲ್ಲೂ ಈ ದಾಖಲೆ ಸದಾ ನೆನಪಿರಲಿದೆ. ಸರಪಳಿಗಳಿಂದ ಕಾಲು, ಕೈಗಳನ್ನು ಬಿಗಿದುಕೊಂಡು ಈಜುವುದು ಸುಲಭವಲ್ಲ. 66ನೇ ವಯಸ್ಸಿನಲ್ಲಿ ಮಾಡಿರುವ ಈ ಸಾಧನೆ ಯುಕರಿಗೆ ಪ್ರೇರಣದಾಯಿ.
-ಮನೀಷ್ ವೈಷ್ಣೋಯ್,
ತೀರ್ಪುಗಾರರು / ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್ನ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ