Gangolli: ಎರಡು ಬೈಕ್ಗಳ ನಡುವೆ ಅಪಘಾತ; ಇಬ್ಬರಿಗೆ ಗಾಯ
Team Udayavani, Aug 7, 2023, 6:19 PM IST
ಗಂಗೊಳ್ಳಿ: ಬೈಂದೂರಿನ ಸುದೀಪ್ ಜೋಗಿ ಅವರು ತಂದೆ ಸುರೇಶ ಜೋಗಿ ಅವರನ್ನು ಕುಳ್ಳಿರಿಸಿಕೊಂಡು ಬೈಕಿನಲ್ಲಿ ಹೋಗುತ್ತಿದ್ದಾಗ ಮುಳ್ಳಿಕಟ್ಟೆ ಎಂಬಲ್ಲಿ ಬೈಕ್ ಢಿಕ್ಕಿ ಹೊಡೆದಿದೆ.
ಮುಳ್ಳಿಕಟ್ಟೆ ಜಂಕ್ಷನ್ ತಲುಪುವಾಗ ನಾಯಕವಾಡಿ ಕಡೆಯಿಂದ ಬಂದ ಅರುಣ ಮೇಸ್ತ ಅವರ ಬೈಕ್ ಢಿಕ್ಕಿಯಾಗಿದೆ.
ಸುರೇಶ್ ಜೋಗಿ ಗಂಭೀರ ಗಾಯಗೊಂಡಿದ್ದು ಅರುಣ ಮೇಸ್ತ ಅವರಿಗೂ ಗಾಯವಾಗಿದೆ. ಪ್ರಕರಣ ದಾಖಲಾಗಿದೆ.