Gilgit-Baltistan: ಗಿಲ್ಗಿಟ್-ಬಾಲ್ಟಿಸ್ತಾನ ಭಾರತಕ್ಕೆ ಸೇರ್ಪಡೆಗೊಳಿಸಲು ಪ್ರತಿಭಟನೆ!
-ಪಾಕ್ ಆಡಳಿತದ ವಿರುದ್ಧ ಜನರ ಆಕ್ರೋಶ, ವಿಲೀನಕ್ಕೆ ಒತ್ತಾಯ
Team Udayavani, Aug 31, 2023, 8:14 PM IST
ನವದೆಹಲಿ: ನೆರೆ ರಾಷ್ಟ್ರ ಪಾಕಿಸ್ತಾನ ಇತ್ತ ಭಾರತದ ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿನ ನಾಗರಿಕರು ತಮ್ಮ ಪ್ರದೇಶವನ್ನು ಭಾರತದ ಜತೆಗೆ ಸೇರ್ಪಡೆಗೊಳಿಸಲು ಪಟ್ಟು ಹಿಡಿದು, ಪಾಕ್ ಆಡಳಿತದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಚಲೋ-ಚಲೋ ಕಾರ್ಗಿಲ್ ಎಂಬ ಘೋಷಗಳು ಮುಗಿಲು ಮುಟ್ಟಿದ್ದು, ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಈ ವರೆಗೆ ನಡೆದ ಅತಿದೊಡ್ಡ ಪ್ರತಿಭಟನೆ ಇದು ಎನ್ನಲಾಗಿದೆ. ಶಿಯಾ ಮುಸ್ಲಿಮರ ಧರ್ಮಗುರು ಅಘಾ ಬಕೀರ್ ಅಲ್ ಹುಸೇನಿ ಅವರು ಧಾರ್ಮಿಕ ಸಭೆಯಲ್ಲಿ ನೀಡಿದ ಪ್ರವಚನಗಳಲ್ಲಿ ಧರ್ಮನಿಂದನೆಯಾಗಿದೆ ಎಂದು ಆರೋಪಿಸಿ, ಅವರ ವಿರುದ್ಧ ಪಾಕಿಸ್ತಾನ ಧರ್ಮನಿಂದನೆ ಕಾನೂನು ಅನ್ವಯ ಕೇಸು ದಾಖಲಿಸಿ, ಬಂಧಿಸಲಾಗಿದೆ.
ಇದನ್ನು ಖಂಡಿಸಿ, ಸ್ಕದೂ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಧರ್ಮನಿಂದನೆಯಾಗಿದೆ ಎಂಬುದಕ್ಕಿಂತಲೂ ಬಕೀರ್ ಓರ್ವ ಶಿಯಾ ಸಮುದಾಯದ ಧರ್ಮಗುರು ಎಂದು ಅವರನ್ನು ಗುರಿಯಾಗಿಸಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ. ಪಾಕಿಸ್ತಾನದಲ್ಲಿ ಸುನ್ನಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದು, ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಶಿಯಾಗಳ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶಿಯಾ ಮುಸಲ್ಮಾನರನ್ನು ಗುರಿಯಾಗಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಸಂಬಂಧಿಸಿದಂತೆ ಸ್ಥಳೀಯ ನಾಯಕರು ಕೂಡ ಪಾಕ್ ಆಡಳಿತಕ್ಕೆ ಎಚ್ಚರಿಕೆ ನೀಡಿ, ನಾವು ಗಿಲ್ಗಿಟ್-ಬಾಲ್ಟಿಸ್ತಾನವನ್ನು ಭಾರತದೊಂದಿಗೆ ವಿಲೀನಗೊಳಿಸಿಕೊಳ್ಳುತ್ತೇವೆಂದು ಪಟ್ಟು ಹಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ
Liquid Nitrogen ಪಾನ್ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ
Arrest: ಬಾರ್ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ
Bengaluru: ಶಾಸಕ ಮಹಾಂತೇಶ್ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ
Road Mishap: ನೈಸ್ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು