Reservation: ಮೀಸಲಿಗಾಗಿ ಬಾಲಕಿ ಆತ್ಮಹತ್ಯೆ
Team Udayavani, Nov 17, 2023, 11:23 PM IST
ಮುಂಬಯಿ: ಮರಾಠರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲು ನೀಡುವಂತೆ ಆಗ್ರಹಿಸಿ ಜಲ್ವಾದಲ್ಲಿ 14 ವರ್ಷದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸೋಮೇಶ್ವರ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಯ ಕೊಠಡಿಯಲ್ಲಿ “ಮರಾಠ ಸಮುದಾಯಕ್ಕೆ ಮೀಸಲು ನೀಡಬೇಕು ಎನ್ನುವುದು ನನ್ನ ಒತ್ತಾಯ. ಈ ಮಾತುಗಳು ವ್ಯರ್ಥವಾಗಬಾರದು’ ಎಂದು ಬಾಲಕಿ ಬರೆದು ಇರಿಸಿದ್ದಾಳೆ ಎಂದು ಹೇಳಲಾಗಿರುವ ಪತ್ರವೂ ಸಿಕ್ಕಿದೆ. ಇತ್ತೀಚೆಗೆ ಮೀಸಲು ನೀಡುವ ವಿಚಾರದಲ್ಲಿ ಜಲಾ° ಮತ್ತಿತರ ಪ್ರದೇಶಗಳಲ್ಲಿ ಗಲಾಟೆ, ಹಿಂಸಾಚಾರ ಉಂಟಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್ಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದ ಬೆಳವಣಿಗೆಗಳು ನಡೆದಿದ್ದವು.