ಸರಕಾರಿ ಸಿಟಿ ಬಸ್ ಸೇವೆ ಆರಂಭ: ಬಹಳ ಕಾಲದ ಬೇಡಿಕೆ ಈಡೇರಿಕೆ
ಬೊಕ್ಕಪಟ್ಣ ಬೋಳೂರಿನಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ
Team Udayavani, Sep 28, 2021, 5:35 AM IST
ಮಹಾನಗರ: ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಬೊಕ್ಕಪಟ್ಣ ಬೋಳೂರಿನಿಂದ ಅಮೃತ ವಿದ್ಯಾಲಯದ ಮೂಲಕವಾಗಿ ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದವರೆಗೆ ಸರಕಾರಿ ಸಿಟಿ ಬಸ್ ಸೌಲಭ್ಯ ಸೋಮವಾರ ಉದ್ಘಾಟನೆಗೊಂಡಿತು.
ಶಾಸಕ ವೇದವ್ಯಾಸ ಕಾಮತ್ ನೂತನ ಸಾರಿಗೆ ಸೌಲಭ್ಯವನ್ನು ಉದ್ಘಾಟಿಸಿದರು. ಸ್ಥಳೀಯ ಸಾರ್ವಜನಿಕರು ಬಹಳ ಕಾಲದಿಂದಲೂ ಇಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸಲ್ಲಿಸುತ್ತಿದ್ದರು. ಇಲ್ಲಿನ ಜನರ ಭಾವನೆಗಳಿಗನುಗುಣವಾಗಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಮಂಗಳೂರು ಭೇಟಿಯ ಸಂದರ್ಭ ಅಮ್ಮನವರು ಇಲ್ಲಿ ಸಾರಿಗೆ ಸೌಲಭ್ಯ ಅಭಿವೃದ್ಧಿ ಮಾಡಬೇಕಾಗಿ ತಿಳಿಸಿದ್ದರು. ಅಮ್ಮನವರ ಸಂಕಲ್ಪದಂತೆ ಇಂದು ಅವರ 68 ನೇ ಜನ್ಮದಿನಾಚರಣೆಯಂದು ಈ ಸೇವೆ ಆರಂಭಗೊಳ್ಳುತ್ತಿರುವುದು ವಿಶೇಷ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಇದು ಅನುಕೂಲಕರವಾಗಿದೆ ಎಂದರು.
ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್. ಅರುಣ್ ಸ್ವಾಗತಿಸಿದರು. ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಡಾ| ವಸಂತ ಕುಮಾರ್ ಪೆರ್ಲ ಪ್ರಾಸ್ತಾವನೆಗೈದರು.
ಎಸ್.ಸಿ.ಎಸ್. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಜೀವರಾಜ್ ಸೊರಕೆ, ಮಾಜಿ ಮೇಯರ್ ದಿವಾಕರ್, ಸ್ಥಳೀಯ ಕಾರ್ಪೋರೆಟರ್ ಜಗದೀಶ್ ಶೆಟ್ಟಿ, ಪ್ರಸಾದ್ರಾಜ್ ಕಾಂಚನ್, ಸುರೇಶ್ ಅಮೀನ್, ಮುರಳೀಧರ್ ಶೆಟ್ಟಿ, ಪಂಕಜ್ ವಸಾನಿ, ಆರ್.ಟಿ.ಒ. ವರ್ಣೇಕರ್, ರಾಹುಲ್ ಶೆಟ್ಟಿ, ಯೋಗೀಶ್ ಆಚಾರ್ಯ, ಬೋಳೂರು ಮೊಗವೀರ ಸಭಾದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಎರಡು ಗುಂಪುಗಳ ಗಲಾಟೆಯಲ್ಲಿ ʼಬಸವʼ ಬಡವಾಯ್ತು
ಬಜಾಲ್ಪಡ್ಪು -ಲ್ಯಾಂಡ್ಲಿಂಕ್ಸ್ಗೆ ಬಸ್ಸಂಚಾರ
ಬಜಾಲ್ಪಡ್ಪು ನಿಂದ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ಲಿಂಕ್ಸ್ಗೆ ಸರಕಾರಿ ಬಸ್ ಸಂಚಾರ ಸೌಲಭ್ಯ ಸೆ. 28ರಿಂದ ಪ್ರಾರಂಭ ವಾಗಲಿದೆ. ಬಸ್ ಬಜಾಲ್ಪಡು³- ಪಲ್ಲಕೆರೆ, ಬಜಾಲ್ ಕ್ರಾಸ್, ಪಂಪ್ವೆಲ್, ಕಂಕನಾಡಿ, ಅಂಬೇಡ್ಕರ್ ವೃತ್ತ (ಜ್ಯೋತಿ), ಪಿವಿಎಸ್, ಕೆಎಸ್ಆರ್ಟಿಸಿ- ಕುಂಟಿಕಾನ-ಕೊಂಚಾಡಿ ಮೂಲಕ ಲ್ಯಾಂಡ್ಲಿಂಕ್ಸ್ ಗೆ ಸಂಚರಿಸಲಿದೆ. ಸಂಚಾರ ಸಮಯ-ಲ್ಯಾಂಡ್ಲಿಂಕ್ಸ್ನಿಂದ- ಬೆಳಗ್ಗೆ 8.00, 8.45, 9.30, 10.15, 11.00, 11.45. 1.05, 1.50 , 2.35, 3.20, 4.15, 5.00, 5.45 ಹಾಗೂ 6.45. ಬಜಾಲ್ಪಡಿ³ನಿಂದ 8.00, 8.45, 9.30, 10.15, 11.00, 11.45, 1.05, 1.50, 2.35, 3.20, 4.15, 5.00 ಹಾಗೂ 5.45.
ವೇಳಾಪಟ್ಟಿ
ಸಂಚಾರಮಾರ್ಗ: ಅಮೃತಾನಂದಮಯಿಮಠ ಬೋಳೂರು – ಲೇಡಿಹಿಲ್- ಪಿವಿಎಸ್- ಅಂಬೇಡ್ಕರ್ ವೃತ್ತ (ಜ್ಯೋತಿ)- ಕಂಕನಾಡಿ- ಪಂಪ್ವೆಲ್- ಬಜಾಲ್ ಕ್ರಾಸ್- ಮಂಗಳೂರು ಜಂಕ್ಷನ್ ರೈಲು ನಿಲ್ದಾಣ.
ಬೊಕ್ಕಪಟ್ಣದಿಂದ (ಅಮೃತಾನಂದಮಯಿ ಮಠ) ಬಸ್ ಹೊರಡುವ ಸಮಯ: ಬೆಳಗೆ 8.00, 9.30, 11.00, 12.30, 2.35, 4.15 ಹಾಗೂ 5.45. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬೆಳಗ್ಗೆ 8.45, 10.15, 11.45, 1.30, 3.20, 5.00 ಹಾಗೂ 6.30
ಉದಯವಾಣಿ ವರದಿ ಫಲಶ್ರುತಿ
ಮಂಗಳೂರು ನಗರದ ಪ್ರಮುಖ ರೈಲು ನಿಲ್ದಾಣಗಳೊಲ್ಲಂ ದಾಗಿರುವ ಮಂಗಳೂರು ಜಂಕ್ಷನ್ನಿಂದ ನಗರಕ್ಕೆ ಸೂಕ್ತ ಬಸ್ ಸೌಕರ್ಯವಿಲ್ಲದೆ ಪ್ರಯಾಣಿಕರು ಎದುರಿ ಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಹಾಗೂ ಇಲ್ಲಿಗೆ ರಾಜ್ಯ ರಸ್ತೆಸಾರಿಗೆ ಬಸ್ ಸೌಲಭ್ಯಕಲ್ಪಿಸಬೇಕು ಬೇಡಿಕೆ ಬಗೆ ಉದಯವಾಣಿ ಸುದಿನದಲ್ಲಿ ಜು. 13ರಂದು ವಿಶೇಷ ವರದಿ ಪ್ರಕಟಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ