ಗುಡಿಬಂಡೆ: ಆಕಸ್ಮಿಕ ಬೆಂಕಿ ಅವಘಡ 2 ಗುಡಿಸಲುಗಳು ಭಸ್ಮ
ಸಾಲ ಮಾಡಿ ತಂದಿದ್ದ 80 ಸಾವಿರ ಹಣವೂ ಬೂದಿ
Team Udayavani, Mar 2, 2023, 7:25 PM IST
ಗುಡಿಬಂಡೆ: ತಾಲೂಕಿನ ಕೊಂಡರೆಡ್ಡಿಹಳ್ಳಿ ಗ್ರಾಮದಲ್ಲಿ ಆದಿನಾರಾಯಣ, ನರಸಿಂಹಮೂರ್ತಿ ಎಂಬುವವರ ಮನೆಗಳಲ್ಲಿ ಆಕಸ್ಮಿಕವಾಗಿ ಎರಡು ಗುಡಿಸಲುಗಳು ಸಂಪೂರ್ಣವಾಗಿ ಭಸ್ಮವಾದ ಘಟನೆ ನಡೆದಿದೆ.
ಗುರುವಾರ ಸಂಜೆ 5.30ರ ಸುಮಾರಿನಲ್ಲಿ ಕೊಂಡರೆಡ್ಡಿಹಳ್ಳಿ ಗ್ರಾಮದ ಆದಿನಾರಾಯಣ, ನರಸಿಂಹಮೂರ್ತಿ ಎಂಬುವವರ ಎರಡು ಮನೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸಂಪೂರ್ಣವಾಗಿ ಭಸ್ಮವಾಗಿವೆ, ಎರಡು ಮನೆಗಳಲ್ಲಿದ್ದ ಬಟ್ಟೆ ಬರೆ, ದವಸ ದಾನ್ಯಗಳು, ದಾಖಲಾತಿಗಳು ಹಾಗೂ ನರಸಿಂಹಮೂರ್ತಿ ಸಾಲ ಮಾಡಿ ತಂದಿದ್ದ80 ಸಾವಿರ ನಗದು ಮೊತ್ತ ಸಹ ಸಂಪೂರ್ಣವಾಗಿ ಸುಟ್ಟು ಹೋಗಿದೆ, ಈ ಘಟನೆಯಲ್ಲಿ ಯಾರಿಗೂ ಸಹ ಪ್ರಾಣಾಪಾಯ ಸಂಭವಿಸಿರುವುದಿಲ್ಲ.