ಹಂಪಿ-ಕಿಷ್ಕಿಂಧಾ ಅಂಜನಾದ್ರಿ ದೇಶ-ವಿದೇಶಿ ಶಿಲಾರೋಹಿಗಳ ಸ್ವರ್ಗ

ಋಷಿಮುಖ ಪರ್ವತ,ಏಳುಗುಡ್ಡ ಪ್ರದೇಶದಲ್ಲಿ ಶಿಲಾರೋಹಣದ ಕಲಿಕೆ- ಪ್ರವಾಸೋದ್ಯಮ ಇಲಾಖೆ,ಜಿಲ್ಲಾಡಳಿತದಿಂದ ಬೇಕಿದೆ ಹೆಚ್ಚಿನ ಪ್ರೋತ್ಸಾಹ

Team Udayavani, Aug 4, 2023, 6:38 PM IST

kishkinda

ಗಂಗಾವತಿ: ಪ್ರಾಕೃತಿಕವಾಗಿ ತಾಲೂಕಿನ ಆನೆಗೊಂದಿ, ಹಿರೇಬೆಣಕಲ್, ಜಂಗ್ಲಿ, ಹಳೆಕುಮಟಾ ಸೇರಿ ಆಗೋಲಿ ಹಾಗೂ ಋಷಿಮುಖ-ಏಳುಗುಡ್ಡಪ್ರದೇಶಗಳು ಶಿಲಾರೋಹಣಕ್ಕೆ ದೇಶದಲ್ಲಿಯೇ ಹೇಳಿ ಮಾಡಿದ ಪ್ರಾಕೃತಿಕ ಪ್ರಾಶಸ್ತ್ಯ ಸ್ಥಳವಾಗಿವೆ.

ಹಂಪಿ-ಆನೆಗೊಂದಿ ಪ್ರದೇಶವನ್ನು ಯುನೆಸ್ಕೋ ವಿಶ್ವಪರಂಪರಾ ಪಟ್ಟಿಗೆ ಸೇರ್ಪಡೆ ನಂತರ ಇಲ್ಲಿಗೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರಲ್ಲಿ ಶೇ.40 ರಷ್ಟು ಪ್ರವಾಸಿಗರು ಶಿಲಾರೋಹಣ ಕ್ರೀಡೆ ಕಲಿಯಲು ಆಗಮಿಸುತ್ತಾರೆ. ಶಿಲಾರೋಹಣ ಕಲಿಸಲು ಆನೆಗೊಂದಿ ಹಂಪಿಯಲ್ಲಿ ಕೆಲ ಯುವಕರು ತರಬೇತಿಯನ್ನು ಪಡೆದು ಶಿಲಾರೋಹಿಗಳಿಗೆ ಕಲ್ಲು, ಬೆಟ್ಟಗುಡ್ಡಗಳನ್ನು ಹತ್ತುವ ಕುರಿತು ಅಗತ್ಯ ಸುರಕ್ಷತೆಯೊಂದಿಗೆ ಕಲಿಸಉವ ಮೂಲಕ ಸ್ವಯಂ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಒಲಂಪಿಕ್ ವಿಶ್ವದ ಕ್ರೀಡಾಕೂಟದಲ್ಲಿ ಶಿಲಾರೋಹಣ ಸ್ಪರ್ಧೆ ಪರಿಚಯಿಸಿದ ನಂತರ ಶಿಲಾರೋಹಣ ಕಲಿಯುವವರ ಸಂಖ್ಯೆ ಹೆಚ್ಚಾಗಿದ್ದು ಹಂಪಿ ಆನೆಗೊಂದಿ ಪ್ರದೇಶಕ್ಕೆ ವೀಕ್ ಎಂಡ್ ಹಾಗೂ ಪ್ರವಾಸಕ್ಕೆ ಆಗಮಿಸುವವರು ಕಡ್ಡಾಯವಾಗಿ ಸ್ಥಳೀಯ ಯುವ ತರಬೇತುದಾರರಿಂದ ಶಿಲಾರೋಹಣ ಮಾಡುವುದನ್ನು ಕಲಿಯುತ್ತಿದ್ದಾರೆ.

ಇತ್ತೀಚೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಂಪಿ ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್-ಹೊಟೇಲ್ ತೆರವುಗೊಳಿಸಿದ ನಂತರ ಹಂಪಿ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಸೊರಗಿದ್ದು ವೀಕ್ ಎಂಡ್ ಹಾಗೂ ಐಟಿಬಿಟಿ ಉದ್ಯೋಗಿಗಳು ವಿದೇಶಿಗರು ಇಲ್ಲಿಗೆ ಬರುವುದು ಬಹಳ ಕಡಿಮೆಯಾಗಿದ್ದು ಶಿಲಾರೋಹಣ ಕಲಿಸುವುದನ್ನೇ ಉದ್ಯೋಗ ಮಾಡಿಕೊಂಡಿ ಅನೇಕ ಯುವ ತರಬೇತಿದಾರರ ಬದುಕು ದುಸ್ತಾರವಾಗಿದೆ.

ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಶಿಲಾರೋಹಣ ಕ್ರೀಡೆಯನ್ನು ಪ್ರೋತ್ಸಾಹಿಸಿ ದೇಶ ವಿದೇಶಗಳಲ್ಲಿ ಶಿಲಾರೋಹಣ ಹಾಗೂ ಹಂಪಿಯ ಆನೆಗೊಂದಿ ಪ್ರದೇಶದ ಬೆಟ್ಟಗುಡ್ಡಗಳು ಹೇಗೆ ಪ್ರಾಶ್ಯಸ್ತ ಸ್ಥಳ ಎನ್ನುವುದನ್ನು ಹೆಚ್ಚು ಪ್ರಚುರಪಡಿಸುವ ಕಾರ್ಯ ಮಾಡುವ ಮೂಲಕ ಶಿಲಾರೋಹಣದಲ್ಲಿ ಆಸಕ್ತರಿಗೆ ವೆಬ್‌ಸೈಟ್ ಸೇರಿ ಹಲವು ಪ್ರಚಾರಗಳ ಮೂಲಕ ಮಾಹಿತಿ ನೀಡಬೇಕಿದೆ. ಇದರಿಂದ ಸ್ಥಳೀಯ ಶಿಲಾರೋಹಣ ತರಬೇತಿ ನೀಡಿ ಬದುಕು ನಿರ್ವಹಿಸುವವರಿಗೆ ಅನುಕೂಲವಾಗುತ್ತದೆ.

ಕಿಷ್ಕಿಂಧಾ ಏಳುಗುಡ್ಡ ಪ್ರದೇಶ ಶಿಲಾರೋಹಣಕ್ಕೆ ಪ್ರಾಶ್ಯಸ್ತ :ರಾಮಾಯಣ ಕಾಲದಿಂದಲೂ ತಾಲೂಕಿನ ಆನೆಗೊಂದಿ ಕಿಷ್ಕಿಂಧಾ-ಅಂಜನಾದಿ ಏಳುಗುಡ್ಡ ಪ್ರದೇಶ ಖ್ಯಾತಿ ಪಡೆದಿದೆ.ಇಲ್ಲಿ ವಾನರ ಸಾಮ್ರಾಜ್ಯವಿತ್ತು. ಮಧುವನ,ಮಾಲ್ಯವಂತ, ಮೋರ್ಯಯ ಬೆಟ್ಟ ಹೀಗೆ ಹಲವು ಪ್ರಾಕೃತಿಕ ಸೌಂದರ್ಯದ ಬೆಟ್ಟಗುಡ್ಡಗಳಿದ್ದು ಇಲ್ಲಿಯ ಶಿಲಾರಾಶಿ ಪ್ರಕೃತಿ ಪ್ರಿಯರಿಗೆ ಅಚ್ಚುಮೆಚ್ಚಾಗುತ್ತದೆ.

ಇಲ್ಲಿಯ ಬೃಹದಾಕಾರದ ಬಂಡೆಗಳು, ಆಕಾಶವನ್ನು ಚುಂಬಿಸುವಂತಿಸುವ ಶಿಲೆಗಳಿಗೆ ದೇಶ ವಿದೇಶದ ಪ್ರವಾಸಿಗರು ಮನಸೋತು ಇಲ್ಲಿಗೆ ಆಗಮಿಸಿ ಶಿಲಾರೋಹಣ ಮಾಡುತ್ತಾರೆ. ಹನುಮನಹಳ್ಳಿ ಮತ್ತು ವಿರೂಪಾಪೂರಗಡ್ಡಿ ಮಧ್ಯೆ ಇರುವ ಋಷಿಮುಖ ಪರ್ವತದ ಶಿಲೆಗಳು ಆಕಾಶದೆತ್ತರವಾಗಿದ್ದು ಈ ಶಿಲೆಗಳನ್ನು ಹತ್ತಲು ವಿದೇಶಿಗ ತಂಡ ಒಂದು 2006 ರಲ್ಲಿ ಅಗತ್ಯ ಸುರಕ್ಷತೆಯೊಂದಿಗೆ ಶಿಲಾರೋಹಣ ಆರಂಭವಾಗಿದ್ದು ಇದೀಗ ನಿತ್ಯವೂ ನೂರಾರು ಪ್ರವಾಸಿಗರು ಶಿಲಾರೋಹಣ ನಡೆಸಲು ಆಗಮಿಸುತ್ತಿದ್ದು ಸ್ಥಳೀಯವಾಗಿ ಕೆ.ತಿಮ್ಮಪ್ಪ ಹಾಗೂ ವಿಕಾಸ(ಜರ‍್ರಿ) ಸೇರಿ ಹಲವು ಯುವಕರು ಶಿಲಾರೋಹಣ ಕಲೆಯನ್ನು ಕಲಿಸುತ್ತಾರೆ. ಅಗತ್ಯ ಸುರಕ್ಷತೆ ಮತ್ತು ಶಿಲಾರೋಹಣಕ್ಕೆ ಬೇಕಾಗುವ ವಸ್ತುಗಳನ್ನು ಸಹ ಇವರು ಹನುಮನಹಳ್ಳಿ ಮತ್ತು ಸಾಶಾಪೂರದಲ್ಲಿ ಮಾರಾಟ ಮಾಡಲು ಅಂಗಡಿಗಳನ್ನು ಆರಂಭ ಮಾಡಿದ್ದಾರೆ.

ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ನಿರ್ಲಕ್ಷ್ಯ: ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ನವೀನರಾಜ್ ಸಿಂಗ್, ಪಿ.ಸುನೀಲ್ ಕುಮಾರ, ವಿಕಾಸ ಕಿಶೋರ ಸುರಳ್ಕರ್ ಇವರು ಆನೆಗೊಂದಿ ಭಾಗದಲ್ಲಿ ಹಿಪ್ಪಿ ಸಂಸ್ಕೃತಿಯನ್ನು ಹೋಗಲಾಡಿಸಿ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದರು. ಆನೆಗೊಂದಿ ಉತ್ಸವದ ಸಂದರ್ಭದಲ್ಲಿ ಹನುಮನಹಳ್ಳಿ ಋಷಿಮುಖ ಪರ್ವತ ಶ್ರೇಣಿ, ಸಾಣಾಪೂರ ಬೆಟ್ಟ ಪ್ರದೇಶದಲ್ಲಿ ಶಿಲಾರೋಹಣ, ಸಾಣಾಪೂರ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಹೊಸತನವನ್ನು ತೋರಿಸುವ ಯತ್ನ ಮಾಡಿದ ನಂತರ ಶಿಲಾರೋಹಣ ಹೆಚ್ಚು ಜನಪ್ರಿಯವಾಗಲು ಆರಂಭಿಸಿದ್ದು ನಿತ್ಯವೂ ಶಿಲಾರೋಹಣ ಮಾಡುವರ ಸಂಖ್ಯೆ ಹೆಚ್ಚಾಗಿದ್ದರಿಂದ ಹಂಪಿ, ಹನುಮನಹಳ್ಳಿ, ಸಾಣಾಪೂರ, ವಿರೂಪಾಪೂರಗಡ್ಡಿ, ಕಡ್ಡಿರಾಂಪೂರ, ತಿರುಮಲಾಪೂರ, ಆನೆಗೊಂದಿ ಭಾಗದಲ್ಲಿ ಶಿಲಾರೋಹಣ ತರಬೇತಿ ನೀಡುವ ಯುವಕರು ಅಗತ್ಯ ತರಬೇತಿ ಪಡೆದು ಕೆಲಸ ಆರಂಭಿಸಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದರು.

ಅನಧಿಕೃತ ನೆಪದಲ್ಲಿ ಇತ್ತೀಚೆಗೆ ರೆಸಾರ್ಟ್, ಹೊಟೇಲ್ ತೆರವು ಮಾಡಿದ್ದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಶಿಲಾರೋಹಣ ತರಬೇತಿ ನೀಡುವ ಕೆಲಸ ಮಾಡುತ್ತಿದ್ದವರ ಬದುಕು ಕಷ್ಟವಾಗಿದೆ.

ಪ್ರವಾಸೋದ್ಯಮ ಇಲಾಖೆ ಹಂಪಿ ಆನೆಗೊಂದಿ ಭಾಗದಲ್ಲಿ ಕಳೆದ 30 ವರ್ಷಗಳಿಂದ ನಡೆಯುತ್ತಿರುವ ಶಿಲಾರೋಹಣವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಮೂಲಕ ಶಿಲಾರೋಹಿಗಳ ಸಂಖ್ಯೆ ಹೆಚ್ಚು ಮಾಡಬೇಕಿದೆ. ಇದರಿಂದ ಬದುಕನ್ನು ಕಟ್ಟಿಕೊಂಡಿರುವ ಸ್ಥಳೀಯ ಯುವಕರಿಗೆ ಇನ್ನಷ್ಟು ತರಬೇತಿ ನೀಡಿ ಅವರ ಬದುಕಿಗೆ ಭದ್ರತೆ ನೀಡುವುದು ಅಗತ್ಯವಾಗಿದೆ.

ಹನುಮನಹಳ್ಳಿ, ವಿರೂಪಾಪೂರಗಡ್ಡಿ ಋಷಿಮುಖ, ಸಾಣಾಪೂರ ಲೇಖ್, ಜಂಗ್ಲಿ, ಮಲ್ಲಾಪೂರ, ಆನೆಗೊಂದಿ, ವಾನಭದ್ರೇಶ್ವರ ಬೆಟ್ಟಗಳಲ್ಲಿ ಶಿಲಾರೋಹಣಕ್ಕೆ ಹೇಳಿ ಮಾಡಿದ ಶಿಲಾಬಂಡೆಗಳಿದ್ದು(ಬೋಲ್ರ‍್ಸ್) ಇಲ್ಲಿ ಶಿಲಾರೋಹಣ ಮಾಡಲು ದೇಶ ವಿದೇಶದ ಶಿಲಾರೋಹಿಗಳು ಆಗಮಿಸುತ್ತಿದ್ದು ಕೆಲ ಯುವಕರು ಶಿಲಾರೋಹಣ ಕಲಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಪ್ರವಾಸೋದ್ಯಮ ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆ ಶಿಲಾರೋಹಣ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು. ವೆಬ್ ಸೈಟ್,ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಬೇಕು. ಉತ್ಸವದ ಸಂದರ್ಭದಲ್ಲಿ ಶಿಲಾರೋಹಣದ ಕುರಿತು ತರಬೇತಿ ಮತ್ತು ಪ್ರದರ್ಶನ ಏರ್ಪಡಿಸಬೇಕು.
-ಶಮಾ ಪವಾರ್ ಮುಖ್ಯಸ್ಥರು ದಿ ಕಿಷ್ಕಿಂಧಾ ಟ್ರಸ್ಟ್

ಶಿಲಾರೋಹಣ ಕಲೆ ದೇಶಿಯ ಕ್ರೀಡೆಯಾಗಿದ್ದು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣ ಗೇರಿಲ್ಲಾ ಮಾದರಿ ದಾಳಿ ಸಂದರ್ಭದಲ್ಲಿ ಶಿಲಾರೋಹಣ ಕಲೆಯನ್ನು ಯಶಸ್ವಿಯಾಗಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಕಿಷ್ಕಿಂಧಾ ಏಳುಗುಡ್ಡ ಪ್ರದೇಶ ಹಾಗೂ ಋಷಿಮುಖ ಪರ್ವತ ಶ್ರೇಣಿಗಳು ಶಿಲಾರೋಹಿಗಳಿಗೆ ಅತ್ಯುತ್ತಮ ಸ್ಥಳಗಳಾಗಿದ್ದು ಇಲ್ಲಿಗೆ ಕಳೆದ 20 ವರ್ಷಗಳಿಂದ ದೇಶ ವಿದೇಶದ ಶಿಲಾರೋಹಿಗಳು ಆಗಮಿಸುತ್ತಿದ್ದು ಶಿಲಾರೋಹಣದ ಪ್ರಾಥಮಿಕ ಕಲೆಗಳನ್ನು ಇಲ್ಲಿ ಕಲಿಯುತ್ತಾರೆ. ಇಲ್ಲಿಯ ಶಿಲಾರೋಹಣ ಮತ್ತು ಶಿಲಾಬಂಡೆಗಳು ಮತ್ತು ತರಬೇತಿದಾರರ ಕುರಿತು ಯುರೋಪ್ ದೇಶಗಳ ಪ್ರವಾಸಿಗರು ತಮ್ಮ ಪುಸ್ತಕಗಳಲ್ಲಿಯೂ ಬರೆದುಕೊಂಡಿದ್ದಾರೆ. ಪ್ರವಾಸೋದ್ಯಮ ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆಯವರು ಮಾತ್ರ ಶಿಲಾರೋಹಣಕ್ಕೆ ಸರಿಯಾದ ಪ್ರೋತ್ಸಾಹ ನೀಡುತ್ತಿಲ್ಲ.

ಶಿಲಾರೋಹಣ ಮಾಡುವಾಗ ಅಗತ್ಯ ಸುರಕ್ಷತೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಪ್ರಚಾರ ಮತ್ತು ಶಿಲಾರೋಹಣದ ತರಬೇತಿದಾರರಿಗೆ ಅನುಕೂಲ ಕಲ್ಪಿಸಬೇಕು.ಸ್ಥಳೀಯ ಶಾಲಾ-ಕಾಲೇಜು ಮಕ್ಕಳಿಗೆ ಶಿಲಾರೋಹಣದ ಕುರಿತು ಶಿಬಿರಗಳನ್ನು ಹಮ್ಮಿಕೊಳ್ಳಬೇಕಿದೆ. ಈ ಎಲ್ಲಾ ಕಾರ್ಯಗಳಿಗೆ ಅರಣ್ಯ ಇಲಾಖೆಯವರ ಸಹಕಾರ ಅಗತ್ಯವಾಗಿದೆ.
-ಕೆ.ತಿಮ್ಮಪ್ಪ , ವಿಕಾಸ(ಜರ‍್ರಿ) ಶಿಲಾರೋಹಣ ತರಬೇತಿದಾರರು.

ಕೆ.ನಿಂಗಜ್ಜ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.