ನಂಜನಗೂಡಿನಲ್ಲಿ ಬೈರಾಗಿ ಚಿತ್ರ ತಂಡಕ್ಕೆ ಅದ್ದೂರಿ ಸ್ವಾಗತ
ನಂಜುಂಡೇಶ್ವರನ ದರುಶನ ಪಡೆದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ದಂಪತಿ
Team Udayavani, Jun 25, 2022, 4:07 PM IST
ನಂಜನಗೂಡು : ನಂಜುಂಡೇಶ್ವರನ ದೇವಾಲಯಕ್ಕೆ ಚಿತ್ರನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಸಮೇತ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಶಿವರಾಜ್ ಕುಮಾರ್ ಗೆ ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ಸಾಥ್ ನೀಡಿದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ತಂದೆ ಡಾ. ರಾಜಕುಮಾರ್ ಹಾಗೂ ತಾಯಿ ಪಾರ್ವತಮ್ಮ ರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಬಳಿಕ ದೇವಾಲಯದ ಗರ್ಭ ಗುಡಿಯ ಬಳಿ ಕುಟುಂಬ ಸಮೇತ ಧ್ಯಾನ ಮಾಡಿದರು.
ನೆಚ್ಚಿನ ನಟನನ್ನ ಕಣ್ತುಂಬಿಕೊಳ್ಳಲು ದೇವಾಲಯದ ಆವರಣದಲ್ಲಿ ಅಭಿಮಾನಿಗಳ ನೂಕಾಟ ತಳ್ಳಾಟ ನಡೆಯಿತು. ಈ ವೇಳೆ ಕ್ರೇನ್ ಮೂಲಕ ಭಾರಿ ಗಾತ್ರದ ಹೂವಿನ ಹಾರ ಹಾಕಿ ಸಂಭ್ರಮಿಸಿದ ಅಭಿಮಾನಿಗಳು.
ಬೈರಾಗಿ ಚಲನಚಿತ್ರದ ಪ್ರಚಾರಕ್ಕಾಗಿ ನಂಜನಗೂಡಿಗೆ ಬಂದಿದ್ದ ಅವರು ದೇವರ ದರ್ಶನ ಪಡೆದು ಬಳಿಕ ವಾಹನದ ಮೇಲೆ ನಿಂತು ಅಭಿಮಾನಿಗಳತ್ತ ಕೈಬೀಸಿದ್ದಾರೆ.
ಇದನ್ನೂ ಓದಿ : ಪೃಥ್ವಿ-ಪ್ರಮೋದ್ ಜೊತೆ ಜೊತೆಯಲಿ… ಭುವನ-ಗಗನ ಪ್ರೇಮ ಪುರಾಣ