ಇ ಪಾಸ್‌ಗೆ ಜಿಲ್ಲೆಯಾದ್ಯಂತ ಭಾರೀ ಬೇಡಿಕೆ

ಪಾಸ್‌ ಉದ್ದೇಶದ ವೈದ್ಯಕೀಯ ಪ್ರಮಾಣ ಪತ್ರಕ್ಕೂ ಬೇಡಿಕೆ ; ದಿನಕ್ಕೆ 35-40 ಅರ್ಜಿಗಳಿಗೆ ಅನುಮತಿ

Team Udayavani, May 5, 2020, 5:46 AM IST

ಇ ಪಾಸ್‌ಗೆ ಜಿಲ್ಲೆಯಾದ್ಯಂತ ಭಾರೀ ಬೇಡಿಕೆ

ಉಡುಪಿ/ಕುಂದಾಪುರ/ ಕಾಪು/ ಬೈಂದೂರು/ಕಾರ್ಕಳ: ಅಂತರ್‌ ಜಿಲ್ಲೆ ಪ್ರಯಾಣಕ್ಕೆ ಒನ್‌ ಟೈಮ್‌ ಇ ಪಾಸ್‌ ನೀಡಲಾಗುತ್ತಿದ್ದು, ತಹಶೀಲ್ದಾರ್‌ ಕಚೇರಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇದು ಒನ್‌ಟೈಂ ಪಾಸ್‌ ಆಗಿದ್ದು, ಹೋದವರು ವಾಪಸ್‌ ಬರಲು ಅವಕಾಶ ವಿರುವುದಿಲ್ಲ. ಈ ಕಾರಣಕ್ಕೆ ಕೆಲವೆಡೆ ಪಾಸ್‌ಗಾಗಿ ಬಂದವರು ವಾಪಸ್‌ ಹೋದ ಉದಾಹರಣೆಗಳೂ ವರದಿಯಾಗಿವೆ.

150-200 ಅರ್ಜಿ
ಉಡುಪಿಯಲ್ಲಿ 150-200 ಅರ್ಜಿ ಗಳು ಬರುತ್ತಿವೆ. ಆರೋಗ್ಯ ಕಾರಣ, ಆಕಸ್ಮಿಕವಾಗಿ ಬಂಧಿಯಾಗಿರುವುದು, ಬಾಣಂತಿಯರು, ಔದ್ಯೋಗಿಕವಾಗಿ ಅನಿವಾರ್ಯವಾಗಿ ಹೋಗಬೇಕಿರುವ ಸಂದರ್ಭಗಳಲ್ಲಿ ಅನುಕೂಲಕ್ಕಾಗಿ ಇ ಪಾಸ್‌ ಯೋಜನೆಯನ್ನು ಜಾರಿಗೊಳಿಸಿದೆ. ಈಗ ಜನರು ಬೇರೆ ಬೇರೆ ಗಂಭೀರವಲ್ಲದ ಕಾರಣಗಳನ್ನೂ ಮುಂದೊಡ್ಡಿ ಅರ್ಜಿ ಸಲ್ಲಿಸುತ್ತಿದ್ದಾರೆ.

ವಿಚಾರಣೆ, ಶಿಫಾರಸು
ಅರ್ಜಿಗಳು ಸಾಕಷ್ಟು ಬರುತ್ತಿದ್ದರೂ ಸೂಕ್ತ ವಿಚಾರಣೆ ನಡೆಸಿ ದಿನಕ್ಕೆ 35-40 ಅರ್ಜಿಗಳಿಗೆ ಅನುಮತಿ ಕೊಡಲು ಜಿಲ್ಲಾಧಿ ಕಾರಿ ಕಚೇರಿಗೆ ಶಿಫಾರಸು ಮಾಡುತ್ತಿದ್ದೇವೆ ಎಂದು ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ತಿಳಿಸಿದ್ದಾರೆ.

ಪಾಸ್‌, ವೈದ್ಯಕೀಯ ಪ್ರಮಾಣಪತ್ರಕ್ಕೆ ಜನ
ಕುಂದಾಪುರದಲ್ಲೂ ಇ-ಪಾಸ್‌ಗಾಗಿ ಹಲವರು ಸರತಿಯಲ್ಲಿ ನಿಂತಿದ್ದರು. ಇದರೊಂದಿಗೆ ತಾಲೂಕು ಸರಕಾರಿ ಆಸ್ಪತ್ರೆ ಯಲ್ಲಿ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ಸರದಿ ಸಾಲು ಕಂಡು ಬಂದಿತ್ತು.

ತಾಲೂಕು ಆಸ್ಪತ್ರೆ ಅಷ್ಟೇ ಅಲ್ಲದೇ ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಜನ ಪ್ರಮಾಣಪತ್ರಕ್ಕಾಗಿ ಆಗಮಿಸುತ್ತಿದ್ದರು. ಒಮ್ಮೆ ಗಡಿ ದಾಟಿ ಹೋದವರು ಮರಳಿ ಈ ಕಡೆ ಪ್ರವೇಶಿಸುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಮತ್ತು ಪರಿಶೀಲಿಸಿಯೇ ಪಾಸ್‌ ವಿತರಿಸುವುದಾಗಿ ಸಹಾಯಕ ಕಮಿಷನರ್‌ ರಾಜು ತಿಳಿಸಿದ್ದಾರೆ.

ಬೈಂದೂರಿನಲ್ಲೂ ಸರತಿ ಸಾಲು
ಬೈಂದೂರು: ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲೂ ಸರತಿ ಸಾಲು ಇತ್ತು. ಬೆಂಗಳೂರಿಗೆ ತೆರಳುವವರು ಪಾಸ್‌ಗಾಗಿ ನಿಂತಿದ್ದರು. ಒನ್‌ ಟೈಮ್‌ ಪಾಸ್‌ ಮಾತ್ರ ಆಗಿದ್ದು, ವಾಪಸ್‌ ಬರಲು ಅನುಮತಿ ಇಲ್ಲ ಎಂಬ ಕಾರಣಕ್ಕೆ ಪಾಸ್‌ಗೆ ಬಂದಿದ್ದವರು ಹಲವರು ವಾಪಸಾಗಿದ್ದಾರೆ.

120 ಪಾಸ್‌ ವಿತರಣೆ
ಕಾಪು: ತಾಲೂಕಿನಲ್ಲಿ 120 ಪಾಸ್‌ಗಳ ವಿತರಣೆಯಾಗಿದೆ. ಸೋಮವಾರ 40ಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದಾರೆ. ಅತಿ ಅಗತ್ಯವಿದ್ದವರು ಮಾತ್ರ ಇ ಪಾಸ್‌ಗೆ ಅರ್ಜಿ ಸಲ್ಲಿಸಲು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಹೇಳಿದ್ದಾರೆ.

ಕಾರ್ಕಳ: 71 ಅರ್ಜಿ
ಕಾರ್ಕಳ: ಇ-ಪಾಸ್‌ ಪಡೆಯುವ ಸಲುವಾಗಿ ಕಾರ್ಕಳ ತಾಲೂಕು ಕಚೇರಿಗೆ ಸೋಮವಾರ 71 ಅರ್ಜಿಗಳು ಬಂದಿವೆ.

ಪಾಸ್‌ಗೆ ಬೇಕಾದ್ದೇನು?
ಫೋಟೊ, ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ, ಮೊಬೈಲ್‌ ನಂಬರ್‌, ಮನೆಯ ವಿಳಾಸ, ಎಲ್ಲಿಂದ ಹಾಗೂ ಎಲ್ಲಿಗೆ ಹೋಗುವುದು, ಪ್ರಯಾಣಿಸುವ ನಿರ್ದಿಷ್ಟ ಉದ್ದೇಶ, ಪ್ರಯಾಣಿಸುವವರಿಗೆ ಕೋವಿಡ್‌ 19 ಸೋಂಕು ಇಲ್ಲ ಎಂದು ವೈದ್ಯಕೀಯ ಪ್ರಮಾಣ ಪತ್ರ ಮತ್ತು ವಾಹನದ ದಾಖಲಾತಿ ಮತ್ತಿತರ ಮಾಹಿತಿ ಇತ್ಯಾದಿ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಿ ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಬೇಕಾಗುತ್ತದೆ.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.