ಭಾರತೀಯ ಸಂಸ್ಕೃತಿಯ ಪರಂಪರೆ ಆದಿ-ಅನಂತ…: ರಾಜ್ಯಪಾಲ ಗೆಹ್ಲೋಟ್
ಪಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆ
Team Udayavani, Mar 22, 2023, 9:42 PM IST
ಕುಷ್ಟಗಿ:ಭಾರತೀಯ ಸಂಸ್ಕೃತಿ ಆದಿ- ಆನಂತವಾಗಿದ್ದು ಅನಾದಿ ಕಾಲದಿಂದಲೂ ಸಾಧು ಸಂತರ ರಕ್ಷಣೆಯಲ್ಲಿದೆ. ನಮ್ಮ ದೇಶ ಋಷಿ ಮುನಿಗಳ ದೇಶವಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಸನಾತನ ಸಂಸ್ಕೃತಿ, ಆದ್ಯಾತ್ಮಿಕ ಧ್ವಜ ವಿಶ್ವಮಟ್ಟದಲ್ಲಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಕುಷ್ಟಗಿ ತಾಲೂಕಿನ ಶಾಖಾಪೂರ ಸೀಮಾದ (ವಜ್ರಬಂಡಿ ರಸ್ತೆ) ಶ್ರೀ ಅಮರನಾಥೇಶ್ವರ ಮಹಾದೇವಮಠ ನಾಗಾಸಾಧು ಆಶ್ರಮ (ಜುನಾ ಅಖಾಡ) ದಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ವಸುದೈವಕುಟುಂಬಕಂ’ ಎಂಬ ಭಾವನೆಗೆ ಭಾರತೀಯ ಸಂಸ್ಕೃತಿಗೆ ಪ್ರೇರಣೆಯಾಗಿದೆ. ಸಹದೈವ ವಿಶ್ವ ಬಂಧು ವಿಶ್ವ ಕಲ್ಯಾಣ, ಸಾಮಾಜಿಕ ಸಾಮರಸ್ಯ ಸಮಾನತೆ ಬದುಕಿಗೆ ಪ್ರೇರಣೆಯಾಗಿದೆ ಎಂದರು.
ಧರ್ಮ ಹಾಗೂ ಆಧ್ಯಾತ್ಮದ ಜ್ಞಾನ ಪ್ರಸಾರದಿಂದ ದೇಶದಲ್ಲಿ ಶಾಶ್ವತ ಶಾಂತಿಯ ಪ್ರೇರಣದಾಯಕವಾಗಿದ್ದು, ಈ ಭಾಗದಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಾಣದಿಂದ ಈ ಪ್ರದೇಶ ಪುಣ್ಯಭೂಮಿಯಾಗಲಿದ್ದು ಮನಸ್ಸಿಗೆ ಪ್ರಸನ್ನತೆ ಸಿಗಲಿದೆ ಎಂದರು.
ಅಮರನಾಥೇಶ್ವರ ಮಠ ಮಹಾದೇವ ಮಂದಿರದ ಮಹಾಂತ ಸಹದೇವನಂದ ಗಿರೀಜಿ ಅವರು ಹೇಳಿದಂತೆ ಇಲ್ಲಿನ ಅಮರನಾಥ ಮಂದಿರ ಉಜ್ಯನಿ ಮಹಾಕಾಲ ಮಂದಿರ ಮಾದರಿಯಲ್ಲಿ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ನನ್ನ ಜಿಲ್ಲೆ ಉಜ್ಜಯನಿ ಜಿಲ್ಲೆ ಆಗಿದ್ದು, ಮಹಾಕಾಲ ನಗರದಿಂದ ಬಂದಿರುವೆ. ಮಹಾಕಾಲನ ಆಶೀರ್ವಾದ ದೇಶವಾಸಿಗಳಿಗೆ ಸಿಗುತ್ತಿದೆ ಎಂದರು.
ಉತ್ತರಖಂಡದ ಅನಂತ ವಿಭೂಷಿತ ಮಹಾಮಂಡಳೇಶ್ವರ ಶ್ರೀ ಸ್ವಾಮೀ ದೇವಾನಂದ ಗಿರಿ ಮಹಾರಾಜ ಮಾತನಾಡಿ ಅಂಜನಾದ್ರಿ ಪರ್ವತ ಶ್ರೇಣಿಯಲ್ಲಿ ಭಗವಾನ ಹನುಮಾನ ಜನಿಸಿದ್ದು ಇದೇ ಪ್ರದೇಶದಲ್ಲಿ ಪಂಚಮುಖಿ ಆಂಜನೇಯ ದೇವಸ್ಥಾನ ಯುಗಾದಿ ಹಬ್ಬದ ಹೊಸ ವರ್ಷದಲ್ಲಿ ನಿರ್ಮಾಣವಾಗಿದೆ. ಈ ಭವ್ಯ ಮಂದಿರ ಧರ್ಮ ಜಾಗೃತಿಗೆ ಪ್ರಭಾವಿತವಾಗಲಿ ಎಂದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸಂತರಾದ ಅಷ್ಟಕುಶಾಲ ಮಹಾಂತ ರಾಹುಲ್ ಗಿರಿ ಮಹಾರಾಜ, ಮಹಾಂತ ರಣಾಪತಿ ಶ್ರೀ ಗೋಚಂದಗಿರಿ ಮಹಾರಾಜ, ಬೃಂದಾವನ ಸಾದ್ವಿ ಶ್ರೀ ಲಕ್ಷ್ಮೀ ಪುರಿ ಮಾತಾಜಿ, ಯೋಗೀರಾಜ ಅಭಿಷೇಕ ಮಹಾರಾಜ್ ಸ್ವಾಮೀಜಿ ಭಾಗವಹಿಸಿದ್ದರು. ಅಮರನಾಥೇಶ್ವರ ಮಠ ಮಹಾದೇವ ಮಂದಿರದ ಮಹಾಂತ ಸಹದೇವನಂದ ಗಿರೀಜಿ ಅಧ್ಯಕ್ಷತೆವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
MUST WATCH
ಹೊಸ ಸೇರ್ಪಡೆ
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!