ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದ ಹೊನ್ನೇನಹಳ್ಳಿ ರವಿಗೌಡ
Team Udayavani, Apr 2, 2023, 10:24 PM IST
ಹುಣಸೂರು: ಹುಣಸೂರು ಎಪಿಎಂಸಿ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ಹೊನ್ನೇನಹಳ್ಳಿಯ ರವಿ ಗೌಡ ಅವರು ಜೆಡಿಎಸ್ ತೊರೆದು ತಮ್ಮ ಬೆಂಬಲಿಗರೊಂದಿಗೆ ಶಾಸಕ ಮಂಜುನಾಥ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಮುಖಂಡ ರವಿ ಸಾಲಿಯಾನ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ರವಿ ಗೌಡರನ್ನು ಶಾಸಕ ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.
ಈವೇಳೆ ಮಾತನಾಡಿದ ರವಿಗೌಡರು ಯಾವುದೇ ಆಮಿಷಕ್ಕೆ ಒಳಗಾಗದೆ ಶಾಸಕ ಮಂಜುನಾಥರ ಜನಪರ ಕಾಳಜಿ ಮೆಚ್ಚಿ ತಮ್ಮ ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆಯಾಗಿದ್ದು, ಪಕ್ಷ ವಹಿಸುವ ಸಂಘಟನೆ ಜವಾಬ್ದಾರಿ ನಿರ್ವಹಿಸುವಾಗಿ ತಿಳಿಸಿದರು.
ಈ ವೇಳೆ ಉದ್ಯಮಿ ರಾಜು ಶಿವರಾಜೇಗೌಡ, ತಾ.ಪಂ.ಮಾಜಿ ಸದಸ್ಯರಾದ ಗದ್ದಿಗೆ ದೇವರಾಜ್,ಚಿನ್ನವೀರಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಆರ್.ಸ್ವಾಮಿ, ಸದಸ್ಯರಾದ ರಾಜಣ್ಣ, ತಟ್ಟೆಕೆರೆ ನವೀನ್, ಚನ್ನರಾಜು, ಹೊನ್ನೇನಹಳ್ಳಿ ಸೊಸೈಟಿ ನಿರ್ದೇಶಕ ಸೋಮಶೇಖರ್, ಮುಖಂಡರಾದ ರವಿ, ತೊಂಡಾಳು ಕೃಷ್ಣಶೆಟ್ಟಿ, ಬಿಳಿಕೆರೆ ಬಾಬು,ಈಶ್ವರ್,ದಿನೇಶ್,ಶ್ರೀಕಂಠ ಸೇರಿದಂತೆ ಅನೇಕರಿದ್ದರು.