ಹುಣಸೂರಲ್ಲಿ ಇಬ್ಬರ ನಾಮಪತ್ರ ತಿರಸ್ಕೃತ, 14 ನಾಮಪತ್ರ ಸಿಂಧು
ನಾಮಪತ್ರ ಹಿಂಪಡೆಯಲು ಎ.24 ಕೊನೆ ದಿನ
Team Udayavani, Apr 22, 2023, 2:15 PM IST
ಹುಣಸೂರು: ಹುಣಸೂರು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ 16 ಉಮೇದುವಾರರ ಪೈಕಿ ಪಕ್ಷೇತರರಾಗಿ ಸ್ಪರ್ಧೆಗೆ ಬಯಸಿದ್ದ ಜಮೀರ್ ಪಾಷಾ ಹಾಗೂ ಜೆ.ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, 14 ಅಭ್ಯರ್ಥಿಗಳ ನಾಮಪತ್ರ ಸಿಂಧುಗೊಂಡಿದೆ.
ಶುಕ್ರವಾರ ನಡೆದ ನಾಮಪತ್ರ ಪರಿಶೀಲನೆ ವೇಳೆ ಇಬ್ಬರನ್ನು ಹೊರತುಪಡಿಸಿ ಉಳಿದಂತೆ ಎಚ್.ಪಿ.ಮಂಜುನಾಥ್ (ಕಾಂಗ್ರೇಸ್), ಜಿ.ಡಿ.ಹರೀಶ್ಗೌಡ (ಜೆಡಿಎಸ್), ದೇವರಹಳ್ಳಿ ಸೋಮಶೇಖರ್(ಬಿಜೆಪಿ), ಪ್ರಸನ್ನಕುಮಾರ್ ಸೋಮನಹಳ್ಳಿ (ಬಿಎಸ್ಪಿ), ಅಮ್ ಆದ್ಮಿ ಪಕ್ಷದಿಂದ ಜಿ.ರವಿಕುಮಾರ್ ರತ್ನಪುರಿ(ಎ.ಎ.ಪಿ), ಎಮ್ಮೆಕೊಪ್ಪಲಿನ ತಿಮ್ಮಾಬೋವಿ(ಕರ್ನಾಟಕ ರಾಷ್ಟ್ರ ಸಮಿತಿ-ಕೆಆರ್ಎಸ್), ಸುನಿಲ್ ಡಿ.ಎನ್.(ಉತ್ತಮ ಪ್ರಜಾಕೀಯಾ) ಹಾಗೂ ಪಕ್ಷೇತರರಾಗಿ ಕೊಡಗು ಕಾಲೋನಿಯ ಎಚ್.ವಿ.ರಾಜೇಂದ್ರ, ಹುಣಸೂರಿನ ನರಸಿಂಹಸ್ವಾಮಿ ಬಡಾವಣೆಯ ಬೀರೇಶ್, ಕಲ್ಲುಣಿಕೆ ರಂಗನಾಥ ಬಡಾವಣೆಯ ಉಮೇಶ್, ಕಾಳೇಗೌಡನಕೊಪ್ಪಲಿನ ಚನ್ನೇಗೌಡ, ಬನ್ನಿಕುಪ್ಪೆಯ ಬಿ.ಎಲ್.ಲೋಕೇಶ್, ಹುಣಸೂರಿನ ರಹಮತ್ ಮೊಹಲ್ಲಾದ ಸೈಯದ್ಅನೀಸ್ ಮತ್ತು ಪಿರಿಯಾಪಟ್ಟಣದ ಯಡ್ಯೂರಪ್ಪ ಸೇರಿದಂತೆ 14 ಮಂದಿ ನಾಮಪತ್ರ ಕ್ರಮವಾಗಿದ್ದು, ನಾಮಪತ್ರ ಹಿಂಪಡೆಯಲು ಎ.24ರ ಸೋಮವಾರ ಅಂತಿಮ ದಿನವಾಗಿದೆ ಎಂದು ಚುನಾವಣಾಧಿಕಾರಿ ರುಚಿ ಬಿಂದಾಲ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ