ಹುಣಸೂರು: ಬಳೆ ವ್ಯಾಪಾರಿ, ಕೃಷಿಕ, ಅಡುಗೆಯವರ ಮಕ್ಕಳ ಸಾಧನೆ
Team Udayavani, Apr 22, 2023, 11:59 AM IST
ಹುಣಸೂರು: ಅಡುಗೆ ಕೆಲಸಗಾರನ ಮಗಳು, ರೈತನ ಮಗ, ವ್ಯಾಪಾರಿ ಪುತ್ರಿ ಈ ಬಾರಿಯ ಪಿಯು ಪರೀಕ್ಷೆಯ ಮೂರು ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದು ಈ ಬಾರಿಯ ವಿಶೇಷ.
ಹುಣಸೂರು ತಾಲೂಕಿನ ಬಿಳಿಗೆರೆ ಅನ್ವೇಷಣಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶ್ರೀರಕ್ಷಾ ಎಂ.ಎನ್. (579) ಅಂಕ, ವಾಣಿಜ್ಯ ವಿಭಾಗದಲ್ಲಿ ಹುಣಸೂರು ಶಾಸ್ತ್ರಿ ಕಾಲೇಜಿನ ಎಚ್.ಪಿ.ತ್ರಿಶಾ(583) ಅಂಕ, ಕಲಾ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಸುಮಂತ್ ಕೆ.ಟಿ (577)ಅಂಕ ಪಡೆದಿರುವ ಸಾಧಕರು. ವಿಜ್ಞಾನ ವಿಭಾಗದ ಶ್ರೀರಕ್ಷಾ ಎಂ.ಎನ್. ಕೆ.ಆರ್ .ನಗರದಲ್ಲಿ ಅಡುಗೆ ಕೆಲಸ ನಿರ್ವಹಿಸುವ ಎಂ.ಎಸ್ .ನಾಗರಾಜ್-ಉಷಾ ದಂಪತಿ ಪುತ್ರಿಯಾಗಿದ್ದು, ಎಂಜಿನಿಯರಿಂಗ್ ಓದುವ ಅಭಿಲಾಷೆ ವ್ಯಕ್ತಪಡಿಸಿದ್ದರೆ.
ಶಾಸ್ತ್ರಿ ಕಾಲೇಜಿನ ಎಚ್.ಪಿ.ತ್ರಿಶಾ ಹುಣಸೂರು ನಗರದ ಸೇತುವೆಯ ಶ್ರೀನಿಧಿ ಫ್ಯಾನ್ಸಿ ಸ್ಟೋರ್ನ ಮಾಲೀಕ ಎಚ್.ಎ.ಪ್ರದೀಪ್ ಕುಮಾರ್ -ಮಂಜುಳ ದಂಪತಿ ಪುತ್ರಿಯಾಗಿದ್ದು, ಮುಂದೆ ಬಿಬಿಎ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಕಲಾ ವಿಭಾಗದಲ್ಲಿ ಹುಣಸೂರಿನ ಸಂತಜೋಸೆಫರ ಪಿಯು ಕಾಲೇಜಿನ ಸುಮಂತ್ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರದ ರೈತ ತಿಮ್ಮಪ್ಪ-ರುಕ್ಮಿಣಿ ದಂಪತಿ ಪುತ್ರನಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತೇನೆಂದು ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು