ನಾನು, ನನ್ನದು ಎಂಬ ಅಹಂಕಾರ ಸಲ್ಲದು


Team Udayavani, Jul 3, 2021, 6:20 AM IST

ನಾನು, ನನ್ನದು ಎಂಬ ಅಹಂಕಾರ ಸಲ್ಲದು

ಈ ಪ್ರಪಂಚದಲ್ಲಿ ಎಲ್ಲ ಮನುಷ್ಯರು ಒಂದೇ ರೀತಿಯ ಸ್ವಭಾವವಾಗಲಿ, ಮನೋಭಾವವನ್ನಾಗಲೀ ಹೊಂದಿರು ವುದಿಲ್ಲ. ಸತ್ಯವಂತರು, ತ್ಯಾಗಿಗಳು, ಪರೋಪಕಾರಿಗಳು, ಸಾಧು ಸ್ವಭಾವ ದವರು, ಕೋಪಿಷ್ಠರು, ಅಹಂಕಾರಿ ಗಳು.. ಹೀಗೆ ವಿವಿಧ ಗುಣ, ವರ್ತನೆ, ಮನೋಭಾವವನ್ನು ಹೊಂದಿರುವವರಿ ದ್ದಾರೆ. ಅಧಿಕಾರ, ಸಿರಿವಂತಿಕೆ, ಯೌವನ ಇರುವಾಗ ಕೆಲವರು ತನಗೆ ಯಾರೂ ಸಮಾನರಿಲ್ಲ ಎಂಬ ಭಾವನೆ ತಳೆದು ಅಹಂಕಾರವನ್ನೇ ತಲೆಗೇರಿಸಿಕೊಂಡು ಮೆರೆಯುತ್ತಾರೆ. ತಮ್ಮಲ್ಲಿರುವ ಅಧಿಕಾರ,

ಸಿರಿವಂತಿಕೆಯನ್ನು ಕಳೆದು ಕೊಂಡ ಬಳಿಕ ಇವರು ಅಕ್ಷರಶಃ ಒಬ್ಬಂಟಿ ಯಾಗುತ್ತಾರೆ. ಎಲ್ಲವೂ ಇದ್ದಾಗ ಪರರತ್ತ ಕಿಂಚಿತ್‌ ದೃಷ್ಟಿ ಹಾಯಿಸದ ಇವರು ಆ ಬಳಿಕ ಅನಿವಾರ್ಯವಾಗಿ ಇತರರ ಮುಂದೆ ತಲೆಬಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಾನು, ನನ್ನದು ಎಂಬ ಅಹಂಕಾರದ ವರ್ತನೆಯೇ ನಮ್ಮ ಜೀವನದ ಎಲ್ಲ ಆಗು-ಹೋಗು, ಸುಖ-ದುಃಖಗಳಿಗೆ ಮೂಲ ಕಾರಣವಾಗಿದೆ.
ಒಮ್ಮೆ ಕನಕದಾಸರ ಗುರುಗ ಳಾದ ವ್ಯಾಸರಾಯರು ತನ್ನ ಶಿಷ್ಯರಿಗೆ ಯಾರೆಲ್ಲ ಸ್ವರ್ಗಕ್ಕೆ ಹೋಗುತ್ತೀರಿ ಎಂದು ಪ್ರಶ್ನಿಸಿದರಂತೆ.

ಎಲ್ಲ ಶಿಷ್ಯರು ಅವರವರ ಅಭಿಪ್ರಾಯ ತಿಳಿಸಿದರಂತೆ. ಆದರೆ ಕನಕದಾಸರು, ಗುರುಗಳೇ “ನಾನು’ ಹೋದರೆ ಹೋದೇನು ಅಂದರಂತೆ, ಅಂದರೆ ನಾನು ಎಂಬ ಅಹಂಕಾರ ಹೋದರೆ ಹೋಗಬಹುದು ಎಂದು ಅವರು ಹೇಳಿದರು.

ಅಣ್ಣ-ತಮ್ಮಂದಿರಿಬ್ಬರು ಜಮೀನಿನ ವಿಚಾರವಾಗಿ ಜಗಳ ಮಾಡಿಕೊಳ್ಳುತ್ತಾ ಇದು ನನ್ನದು, ಇದು ನನ್ನ ಜಮೀನು ಎಂದು ವಾದಿಸತೊಡಗಿದರಂತೆ. ಆಗ ದೇವರು ಈ ಪ್ರಪಂಚವೇ ನನ್ನದು. ಈ ಸಹೋದರರು ನನ್ನದು, ನನ್ನದು ಎಂದು ಹೇಳುತ್ತಿದ್ದಾರಲ್ಲ ಅಂತ ನಗುತ್ತಿದ್ದರಂತೆ. ಈ ಹಿಂದೆ ರಾಮಾಯಣ, ಮಹಾಭಾರತದಲ್ಲೂ ಇಂತಹ ವ್ಯಕ್ತಿಗಳಿದ್ದರು. ರಾವಣನು ಹೆಣ್ಣಿನಿಂದ ಕೆಟ್ಟ, ದುರ್ಯೋದನನು ಮಣ್ಣಿನಿಂದ ಕೆಟ್ಟ ಎಂಬ ನಾಣ್ನುಡಿ ಇದೆ. ಇವರು ಸಹ ಅಹಂಕಾರವನ್ನು ತಲೆ ಗೇರಿಸಿಕೊಂಡು ತಮ್ಮ ಸರ್ವಸ್ವವನ್ನು ಕಳಕೊಂಡವರಾಗಿದ್ದಾರೆ.

ಇತಿಹಾಸದ ಪುಟಗಳನ್ನು ತೆರೆದಾಗ ಅತ್ಯಂತ ಮಹತ್ವಾಕಾಂಕ್ಷಿ ಮುತ್ಸದ್ಧಿ, ಸಮರ್ಥ ಆಡಳಿತಗಾರ, ಗ್ರೀಕ್‌ ದೇಶದ ದೊರೆ ಅಲೆಕ್ಸಾಂಡರನಿಗೆ ಪ್ರಪಂಚವನ್ನೇ ಗೆಲ್ಲುವ ಯೋಚನೆ ಬಂತು. ಅದ ಕ್ಕಾಗಿ ಭೂಮಂಡಲಕ್ಕೆ ದಿಗ್ವಿಜಯಕ್ಕಾಗಿ ಹೊರಟು ಕೊನೆಗೆ ಭಾರತಕ್ಕೆ ಬಂದು ಇಲ್ಲಿನ ರಾಜಪುರೂರವನ ಸ್ನೇಹ ಬೆಳೆಸಿ ಯುದ್ಧಕ್ಕೆ ಸನ್ನದ್ಧನಾದನಂತೆ. ಆಗ ಅವನ ಮನಃಪರಿವರ್ತನೆಗೊಂಡು ತನ್ನ ದೇಶಕ್ಕೆ ಹಿಂದಿರುಗಿದನಂತೆ. ಅನಂತರ ಅವನು ಅನಾರೋಗ್ಯಕ್ಕೆ ತುತ್ತಾಗಿ ಅಂತ್ಯಕಾಲಕ್ಕೆ ಒಂದು ಪತ್ರ ಬರೆದಿಡುತ್ತಾನೆ. ನಾನು ಈ ಪ್ರಪಂಚದಿಂದ ಹೋಗುವಾಗ ಏನೂ ಕೊಂಡು ಹೋಗಲಿಲ್ಲ ಎಂದು ಲೋಕಕ್ಕೆ ತಿಳಿಯಲು ನನ್ನ ಎರಡೂ ಕೈಗಳನ್ನು ನನ್ನ ಶವಪೆಟ್ಟಿಗೆಯ ಹೊರಗೆ ತೋರುವಂತೆ ಇಡಬೇಕು ಹಾಗೂ ಎಲ್ಲ ವೈದ್ಯ ರಿಂದ ನನ್ನನ್ನು ಬದುಕಿಸಲು ಆಗದೇ ಇರುವುದಕ್ಕಾಗಿ ಅವರೆಲ್ಲರೂ ನನ್ನ ಶವ ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಆ ಪತ್ರದಲ್ಲಿ ಬರೆದಿಟ್ಟಿದ್ದನಂತೆ.

“ಅಹಂಕಾರ ವಿನಾಶಕ್ಕೆ ಕಾರಣ’ ಎಂಬುದಕ್ಕೆ ಪುರಾಣ, ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳು ನಮಗೆ ಲಭಿಸುತ್ತವೆ. ಅಷ್ಟು ಮಾತ್ರವಲ್ಲದೆ ವರ್ತಮಾನದಲ್ಲೂ ಇಂತಹ ವ್ಯಕ್ತಿಗಳು ನಮಗೆ ಕಾಣಸಿಗುತ್ತಾರೆ. ಅಹಂಕಾರ ದಿಂದ ಗಳಿಸಿದ ಅಧಿಕಾರ, ಸಂಪತ್ತು ಎಲ್ಲವೂ ನಶ್ವರ. ಇವೆಲ್ಲವೂ ನಮ್ಮನ್ನು ಅಂತ್ಯದತ್ತ ಕರೆದೊಯ್ಯುತ್ತವೆ. ಇದರ ಬದಲಾಗಿ ನಾವು ನಮ್ಮ ಹಿತದ ಜತೆ ಯಲ್ಲಿ ಪರರ ಹಿತದತ್ತಲೂ ಕೊಂಚ ದೃಷ್ಟಿ ಹರಿಸಬೇಕು. ನಮ್ಮ ಕೈಯಲ್ಲಿದ್ದ ಸಂಪತ್ತಿನಲ್ಲಿ ಅಲ್ಪಭಾಗವನ್ನು ಸಮಾಜ ದಲ್ಲಿನ ಅಶಕ್ತರಿಗೆ ನೀಡಿದಲ್ಲಿ ಅವರಿಗೆ ನೆರವಾದಂತಾಗುತ್ತದೆ. ಅಷ್ಟು ಮಾತ್ರವಲ್ಲದೆ ನಾವು ನೀಡುವ ಈ ಕೊಡುಗೆ ನಮ್ಮ ಮನಸ್ಸಿನಲ್ಲಿ ಏನೋ ಒಂದು ತೆರನಾದ ನೆಮ್ಮದಿಯನ್ನು ಮೂಡಿಸುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಮಾನಸಿಕ ನೆಮ್ಮದಿ ಮುಖ್ಯ. ಆದ್ದರಿಂದ ನಾವು ಜೀವನದಲ್ಲಿ ನಾನು, ನನ್ನದು ಎಂಬ ಅಹಂಕಾರ ಭಾವನೆಯನ್ನು ತೊರೆದು ತನ್ನ ಹಿತ ಮತ್ತು ಪರರ ಹಿತವನ್ನು ಮನಃಪೂರ್ವಕವಾಗಿ ಬಯಸುವವನಿಗೆ ಶ್ರೇಯಸ್ಸಾಗುವುದು.

- ದೇವರಾಜ ರಾವ್‌ ಎಂ., ಕಟಪಾಡಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.