ನಾಯಕನಾಗಿ ನಾನು ಇನ್ನೂ ಕಲಿಯುತ್ತಿದ್ದೇನೆ : ಗೆಲುವಿನ ಸಂಭ್ರಮದಲ್ಲಿ ರವೀಂದ್ರ ಜಡೇಜಾ
ನಾಯಕನಾಗಿ ಮೊದಲ ಗೆಲುವನ್ನು ನನ್ನ ಹೆಂಡತಿಗೆ ಅರ್ಪಿಸುತ್ತೇನೆ
Team Udayavani, Apr 13, 2022, 4:33 PM IST
ಮುಂಬಯಿ: ನಾನು ಇನ್ನೂ ಕಲಿಯುತ್ತಿದ್ದೇನೆ ಮತ್ತು ಪ್ರತಿ ಆಟದೊಂದಿಗೆ ಉತ್ತಮವಾಗಲು ಪ್ರಯತ್ನಿಸುತ್ತಿದ್ದೇನೆ ಎಂದು ಸತತ ನಾಲ್ಕು ಐಪಿಎಲ್ ಪಂದ್ಯಗಳಲ್ಲಿನ ಸೋಲಿನ ಬಳಿಕ ಕಂಡ ಗೆಲುವಿನ ಸಂಭ್ರಮವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜಾ ಹಂಚಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ನ ನಾಯಕನಾಗಿ ಆರ್ ಸಿಬಿ ಎದುರು ತನ್ನ ಮೊದಲ ಗೆಲುವನ್ನು ಸಾಧಿಸಿದ ರವೀಂದ್ರ ಜಡೇಜಾ ಅವರು” ನಾಯಕನಾಗಿ ನಾನು ಕಲಿಯುತ್ತಿದ್ದೇನೆ ಮತ್ತು ವಿಷಯಗಳನ್ನು ತಿಳಿಸುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.
”ತಂಡವು ಗಾಬರಿಯಾಗಲಿಲ್ಲ. ನಮ್ಮ ಆಡಳಿತವು ನನ್ನ ಮೇಲೆ ಒತ್ತಡ ಹೇರುವುದಿಲ್ಲ, ಅವರು ನಿರಾಳರಾಗಿದ್ದಾರೆ, ಅವರು ಯಾವಾಗಲೂ ನನ್ನ ಬಳಿಗೆ ಬಂದು ಪ್ರೇರೇಪಿಸುತ್ತಾರೆ ” ಎಂದು ಜಡೇಜಾ ಹೇಳಿದರು.
ಮೊದಲನೆಯದಾಗಿ, ನಾಯಕನಾಗಿ ಇದು ಮೊದಲ ಗೆಲುವು. ನಾನು ನನ್ನ ಹೆಂಡತಿಗೆ ಅರ್ಪಿಸಲು ಬಯಸುತ್ತೇನೆ ಏಕೆಂದರೆ ಮೊದಲ ಗೆಲುವು ಯಾವಾಗಲೂ ವಿಶೇಷವಾಗಿರುತ್ತದೆ,” ಎಂದು ಜಡೇಜಾ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹೇಳಿದರು.
ಹಿಂದಿನ ನಾಲ್ಕು ಪಂದ್ಯಗಳಲ್ಲಿ, ನಾವು ಗೆಲುವನ್ನು ಕಾಣಲು ಸಾಧ್ಯವಾಗಲಿಲ್ಲ. ಆದರೆ ತಂಡವಾಗಿ ನಾವು ಚೆನ್ನಾಗಿ ಆಡಿದ್ದೇವೆ. ನಾಯಕನಾಗಿ, ನಾನು ಇನ್ನೂ ಹಿರಿಯ ಆಟಗಾರರ ತಂತ್ರಗಳನ್ನು ಆರಿಸುತ್ತಿದ್ದೇನೆ. ಮಾಹಿ ಭಾಯ್ (ಧೋನಿ) ಇದ್ದಾರೆ, ನಾನು ಯಾವಾಗಲೂ ಅವರ ಬಳಿಗೆ ಹೋಗಿ ಚರ್ಚಿಸುತ್ತೇನೆ ಎಂದರು.
ಸಿಎಸ್ಕೆ 217 ರನ್ ಗಳಿಸಿ ಆರ್ಸಿಬಿಯನ್ನು 9 ವಿಕೆಟ್ಗೆ 193ಕ್ಕೆ ಕಟ್ಟಿ ಹಾಕಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ