Marriage: `ಸಪ್ತಪದಿ’ ಶಾಸ್ತ್ರ ನಡೆಯದಿದ್ದರೆ ಆ ವಿವಾಹಕ್ಕಿಲ್ಲ ಮಾನ್ಯತೆ
ಪ್ರಕರಣವೊಂದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ಅಭಿಮತ
Team Udayavani, Oct 5, 2023, 9:17 PM IST
ಪ್ರಯಾಗ್ರಾಜ್: “ಹಿಂದೂಗಳಲ್ಲಿ ಸಪ್ತಪದಿ ತುಳಿಯುವ ಶಾಸ್ತ್ರ ಮಾಡಿಲ್ಲವೆಂದಾದರೆ ಆ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲು ಆಗುವುದಿಲ್ಲ’.
ಹೀಗೆಂದು ಹೇಳಿದ್ದು ಅಲಹಾಬಾದ್ ಹೈಕೋರ್ಟ್. ನನ್ನಿಂದ ವಿಚ್ಛೇದನ ಪಡೆಯದೆಯೇ ನನ್ನ ಪರಿತ್ಯಕ್ತ ಪತ್ನಿಯು ಎರಡನೇ ವಿವಾಹವಾಗಿದ್ದು, ಆಕೆಗೆ ಶಿಕ್ಷೆಯಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ಸಂಪೂರ್ಣ ವಿಚಾರಣೆಯನ್ನೇ ಹೈಕೋರ್ಟ್ ರದ್ದು ಮಾಡಿದೆ.
ಸ್ಮತಿ ಸಿಂಗ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ನ್ಯಾ.ಸಂಜಯ್ ಕುಮಾರ್ ಸಿಂಗ್ ಅವರು, “ಶಾಸ್ತ್ರೋಕ್ತ ವಿವಾಹ ಎಂದರೆ, ಸೂಕ್ತ ರೀತಿಯಲ್ಲಿ ಸಮರ್ಪಕ ಸಮಾರಂಭಗಳೊಂದಿಗೆ ಮದುವೆ ಆಗುವುದು. ಈ ರೀತಿ ವಿವಾಹವಾಗಿಲ್ಲ ಎಂದಾದರೆ ಅದನ್ನು ಶಾಸ್ತ್ರೋಕ್ತ ವಿವಾಹ ಎಂದು ಹೇಳಲಾಗದು. ಹಿಂದೂ ವಿವಾಹ ಕಾನೂನಿನ ಪ್ರಕಾರ, ಮದುವೆಯು ಮಾನ್ಯವಾಗಲು ಇರುವ ಪ್ರಕ್ರಿಯೆಗಳ ಪೈಕಿ ಸಪ್ತಪದಿ ತುಳಿಯುವ ಶಾಸ್ತ್ರವೂ ಒಂದಾಗಿದೆ. ಇದೇ ನಡೆದಿಲ್ಲವೆಂದರೆ, ಆ ಮದುವೆ ಕಾನೂನಿನ ಪ್ರಕಾರವೂ ಮಾನ್ಯವಾಗುವುದಿಲ್ಲ’ ಎಂದು ಹೇಳಿದರು.
ಈ ಪ್ರಕರಣದಲ್ಲಿ ಪತಿಯು ತನ್ನ ಪತ್ನಿ ವಿರುದ್ಧ ಮಾಡಿರುವ ದೂರಿನಲ್ಲಿ ಎಲ್ಲೂ ತಾವು ಸಪ್ತಪದಿ ತುಳಿದು ವಿವಾಹವಾಗಿದ್ದೇವೆ ಎಂಬ ಬಗ್ಗೆ ಉಲ್ಲೇಖವಿಲ್ಲ, ಕೋರ್ಟ್ ಮುಂದೆ ನೀಡಿರುವ ಹೇಳಿಕೆಯಲ್ಲೂ ಅದನ್ನು ಪ್ರಸ್ತಾಪಿಸಲಾಗಿಲ್ಲ. ಹೀಗಾಗಿ, ಅರ್ಜಿಯಲ್ಲಿ ಅಪರಾಧ ಎಂದು ಪರಿಗಣಿಸುವ ಅಂಶಗಳೇ ಕಾಣಿಸುತ್ತಿಲ್ಲ. ಈ ಕಾರಣಕ್ಕಾಗಿ, ಪತ್ನಿ ವಿರುದ್ಧ ಹೊರಡಿಸಲಾಗಿರುವ ಸಮನ್ಸ್ ರದ್ದು ಮಾಡುವುದರ ಜೊತೆಗೆ, ಮಿರ್ಜಾಪುರ ಕೋರ್ಟ್ನಲ್ಲಿ ಆಕೆಯ ವಿರುದ್ಧ ಸಲ್ಲಿಸಲಾಗಿರುವ ದೂರಿನ ವಿಚಾರಣೆಯನ್ನೂ ಕೈಬಿಡುವಂತೆ ಆದೇಶಿಸುತ್ತಿದ್ದೇವೆ ಎಂದೂ ನ್ಯಾ. ಸಂಜಯ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್