ಶಿಕ್ಷಕರ ಅಕ್ರಮ ನೇಮಕಾತಿ: ಮತ್ತೆ 8 ಸಹ ಶಿಕ್ಷಕರು ಸಿಐಡಿ ಬಲೆಗೆ
Team Udayavani, Feb 11, 2023, 6:45 AM IST
ಬೆಂಗಳೂರು: 2012-15ನೇ ಸಾಲಿನ ಶಿಕ್ಷಕರ ನೇಮ ಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ 8 ಮಂದಿ ಶಿಕ್ಷಕರು ಸಿಐಡಿ ಬಲೆಗೆ ಬಿದ್ದಿದ್ದಾರೆ.
2012-13ನೇ ಸಾಲಿನಲ್ಲಿ ನೇಮ ಕಾತಿಗೆ ಸಂಬಂಧಿಸಿ ಬಾಗಲಕೋಟೆಯ ಮದನಬಾವಿ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಶ್ರೀಕಾಂತ್ ನಾಯಿಕ, ವಿಜಯನಗರ ಬಸವನ ಬಾಗೇವಾಡಿ ತಾಲೂಕಿನ, ಕೊಲ್ಹಾರ ಸರಕಾರಿ ಪ್ರೌಢಶಾಲಾ ಸಹಶಿಕ್ಷಕ ನಾಯಕ ಪ್ರಕಾಶ್ , ಶಿವಮೊಗ್ಗ ಸೊರಬ ತಾಲೂಕಿನ ಕಮರೂರು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಿ.ಆರ್. ಮೆಹಬೂಬ್ ಪಾಷ, ಉತ್ತರ ಕನ್ನಡದ ಮುಂಡಗೋಳ ತಾಲೂಕಿನ ಮುಳಗಿ ಕರ್ನಾಟಕ ಪಬ್ಲಿಕ್ ಸ್ಕೂಲಿನ ಸಹ ಶಿಕ್ಷಕಿ ಸುಜಾತಾ ಭಂಡಾರಿ ಬಂಧಿತರು.
2014-15ನೇ ಸಾಲಿನ ನೇಮ ಕಾತಿಗೆ ಸಂಬಂಧಿಸಿ ಮಧುಗಿರಿ ಶೈಕ್ಷಣಿಕ ಕೊರಟಗೆರೆ ತಾಲೂಕು, ಬುಕ್ಕಾಪಟ್ಣ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಜಿ.ಎನ್. ದೀಪಾರಾಣಿ, ಮಧುಗಿರಿ ಶೈಕ್ಷಣಿಕ ಜಿಲ್ಲೆ , ಪಾವಗಡ ತಾಲೂಕು, ನಾಗಲಮಡಿಕೆ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಮೋಹನ್ ಕುಮಾರ್. ಜಿ.ಕೆ., ಮಧುಗಿರಿ ಶೈಕ್ಷಣಿಕ ಜಿಲ್ಲೆ , ಪಾವಗಡ ತಾಲೂಕು, ವಲ್ಲೂರು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಮಂಜುನಾಥ್.ಎಸ್ ಹಾಗೂ ಚಿತ್ರದುರ್ಗ ಜಿಲ್ಲೆ , ಹಿರಿಯೂರು ಟೌನ್, ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕ ಶಾಂತಿಲಾಲ್ ಚೌವ್ಹಾಣ್ ಎಂಬವವರನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ