
ಕಾರವಾರದ ವ್ಯಕ್ತಿ ಅಮೆರಿಕದಲ್ಲಿ ಸಾವು; ಶವ ತರಿಸಲು ಕೇಂದ್ರ ಸಚಿವರಲ್ಲಿ ಮನವಿ
Team Udayavani, Mar 18, 2023, 10:54 PM IST

ಅಂಕೋಲಾ : ಕಾರವಾರ ಮೂಲದ ವ್ಯಕ್ತಿಯೋರ್ವರು ಅಮೇರಿಕಾದಲ್ಲಿ ಮರಣ ಹೊಂದಿದ್ದು ವ್ಯಕ್ತಿಯ ಮೃತದೇಹವನ್ನು ತರಿಸಲು ಕುಟುಂಬದ ಸದಸ್ಯರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಕಾರವಾರ ಸದಾಶಿವಗಡದ ಫರ್ನಾಂಡಿಸ್ ಜೊಸೆಫ್ ಮೇಟ್ಸ್ (46) ಮಾರ್ಚ್ 14 ರಂದು ಮೃತಪಟ್ಟಿದ್ದರು.
ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ಪುರುಶೋತ್ತಮ ರುಪಾಲಾ ಅಂಕೋಲಾದ ಬೆಳಂಬಾರದ ಬಂದರು ಸ್ಥಳ ವೀಕ್ಷಣೆಗೆಂದು ಆಗಮಿಸಿದ ವೇಳೆ ಭೇಟಿಯಾದ ಮೃತರ ಪತ್ನಿ ಮತ್ತು ಅವರ ಸಹೋದರಿ ರೆನಿಟಾ ಡಿಸಿಲ್ವಾ ಸಚಿವರನ್ನು ಭೇಟಿ ಮಾಡಿ ಮೃತರ ಶವವನ್ನು ಭಾರತಕ್ಕೆ ತರಲು ಸಹಾಯ ಕೋರಿ ಮನವಿಯನ್ನು ಅರ್ಪಿಸಿದರು. ಕೇಂದ್ರ ವಿದೇಶಾಂಗ ಸಚಿವರಿಗೂ ಪತ್ರ ಬರೆದಿದ್ದು ಮೀನುಗಾರಿಕೆಯ ಸಚಿವರು ಮುತುವರ್ಜಿವಹಿಸಿ ಸಹಾಯ ಮಾಡಬೇಕಾಗಿ ವಿನಂತಿಸಿದರು.
ಮನವಿಯನ್ನು ಸ್ವೀಕರಿಸಿದ ಕೇಂದ್ರ ಸಚಿವ ಪುರುಷೋತ್ತಮ ರುಪಾಲಾ ತಕ್ಷಣ ನೆರವು ನೀಡುವದಾಗಿ ಭರವಸೆಯಿತ್ತರು ಹಾಗೂ ಇಂದೇ ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ