ವೇಗ ಹೆಚ್ಚಳ; 50 ನಿಮಿಷ ಮೊದಲೇ ಗಮ್ಯಕ್ಕೆ


Team Udayavani, Jan 24, 2022, 7:00 AM IST

ವೇಗ ಹೆಚ್ಚಳ; 50 ನಿಮಿಷ ಮೊದಲೇ ಗಮ್ಯಕ್ಕೆ

ಕುಂದಾಪುರ: ವಾರಕ್ಕೆ ಮೂರು ದಿನ ಓಡಾಡುವ ಯಶವಂತಪುರ-ಕಾರವಾರ ರೈಲು ಕೊಂಕಣ ರೈಲ್ವೇ ಮಾರ್ಗದಲ್ಲಿ ಮಂಗಳೂರು ಜಂಕ್ಷನ್‌ನಿಂದ ಕಾರವಾರ ನಡುವೆ ವಿದ್ಯುತ್‌ ಚಾಲಿತ ಪ್ರಯಾಣಿಕರ ರೈಲಾಗಿ ಜ. 21ರಂದು ಓಡಾಟ ಪ್ರಾರಂಭಿ ಸಿದೆ. ಕೊಂಕಣ ರೈಲು ಮಾರ್ಗ ದಲ್ಲಿ ಆರಂಭವಾದ ಕರಾವಳಿ ಕರ್ನಾಟಕದ ಮೊದಲ ಪ್ರಯಾ ಣಿಕರ ವಿದ್ಯುತ್‌ ರೈಲೆಂಬ ಹೆಗ್ಗಳಿಕೆ ಪಡೆದಿರುವ ಇದು ಜ. 24ರಿಂದ ಮಂಗಳೂರು ಜಂಕ್ಷನ್‌- ಕಾರವಾರ ನಡುವೆ 50 ನಿಮಿಷ ವೇಗ ಹೆಚ್ಚಿಸಿ ರಾತ್ರಿ 11.20ರ ಬದಲು 10.30ಕ್ಕೆ ತಲುಪಲಿದೆ.

ಅರ್ಧದ ವರೆಗೆ ಡೀಸೆಲ್‌ ಎಂಜಿನ್‌
ಬೆಂಗಳೂರಿನಿಂದ ಕಾರವಾರಕ್ಕೆ ಚಲಿಸುವ ಹಗಲು ರೈಲು, ದಕ್ಷಿಣ ರೈಲ್ವೇ ಮತ್ತು ಕೊಂಕಣ ರೈಲ್ವೇ ಪಥದಲ್ಲಿ ಓಡಾಟ ನಡೆಸಬೇಕಿದೆ. ಮಂಗಳೂರು- ಕಾರವಾರದ ಕೊಂಕಣ ರೈಲ್ವೇ ಪಥ ಮಾತ್ರ ವಿದ್ಯುದೀ ಕರಣ  ಆಗಿರುವುದ ರಿಂದ ಬೆಂಗಳೂರು- ಮಂಗಳೂರು ನಡುವಿನ ಮಾರ್ಗದಲ್ಲಿ ರೈಲು ಡೀಸೆಲ್‌ ಎಂಜಿನ್‌ ಬಳಸುತ್ತದೆ. ಮಂಗಳೂರಿ ನಲ್ಲಿ ಎಂಜಿನ್‌ ಬದಲಿಸಲಾಗುತ್ತದೆ. ತೋಕೂರು ಮತ್ತು ಕಾರವಾರ ನಡುವಿನ 240 ಕಿ.ಮೀ. ಕೆಆರ್‌ಸಿಎಲ್‌ ನೆಟ್‌ವರ್ಕ್‌ ವಿದ್ಯುದೀಕರಣಗೊಂಡಿದ್ದು, ಎಲೆಕ್ಟ್ರಿಕ್‌ ಲೋಕೋ ಮೂಲಕ ಸರಕು ಸಾಗಣೆ ರೈಲುಗಳನ್ನು ಕಳೆದ ಮೇ ತಿಂಗಳಿನಿಂದ ಕಾರವಾರದ ವರೆಗೆ ನಿರ್ವಹಿಸಲಾಗಿದೆ.

6 ವರ್ಷಗಳ ಹಿಂದೆ ಒಪ್ಪಿಗೆ
2015ರಲ್ಲಿ ಶಂಕುಸ್ಥಾಪನೆ ಮಾಡಲಾದ ಈ ಯೋಜನೆ ಯಡಿ ಕೊಂಕಣ ಪಥ ವನ್ನು ವಿದ್ಯುದೀ ಕರಣಗೊಳಿಸಲು ರೈಲ್ವೇ ಸಚಿವಾಲಯ 2016ರಲ್ಲಿ ಒಪ್ಪಿತ್ತು. ರೈಲ್ವೇ ವಿದ್ಯು ದೀಕರಣ ಹಾಗೂ ಪಥ ದ್ವಿಗುಣಗೊಳಿಸಲು ಚಾಲನೆ ನೀಡಿದ್ದರೂ ಪಥ ದ್ವಿಗುಣ ನಿರೀಕ್ಷಿತ ಮಟ್ಟದಲ್ಲಿ ಸಾಗಿಲ್ಲ.

ಯೋಜನೆಯ ಅನುಷ್ಠಾನಕ್ಕೆ ಸಾವಿರಾರು ಕೋಟಿ ರೂ. ಅನುದಾನ ಆವಶ್ಯಕತೆ ಇದ್ದುದರಿಂದ ಲಭ್ಯ ಅನುದಾನ ಬಳಸಿ ಸದ್ಯಕ್ಕೆ ಆಯ್ದ ಕಡೆ ವಿದ್ಯುದೀಕರಣಕ್ಕೆ ಆದ್ಯತೆ ನೀಡಲಾಗಿದೆ. ರೋಹಾದಿಂದ ವೆರ್ನಾವರೆಗೆ ಹಾಗೂ ವೆರ್ನಾದಿಂದ ತೋಕೂರು ವರೆಗೆ ಎರಡು ಪ್ಯಾಕೇಜ್‌ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅಂದಾಜು 1,287 ಕೋ.ರೂ. ವೆಚ್ಚದಲ್ಲಿ ಕೊಂಕಣ ರೈಲ್ವೇ ಪಥಕ್ಕೆ ಸಂಬಂಧಿ ಸಿ 741 ಕಿ.ಮೀ. ಮಾರ್ಗ ಜಾಲದಲ್ಲಿ ವಿದ್ಯುದೀಕರಣ ಈ ಮಾರ್ಚ್‌ ವೇಳೆಗೆ ನಡೆಯಲಿದೆ.

ಸುರಂಗದಲ್ಲಿ ಅಪೂರ್ಣ
ತೋಕೂರು-ವೆರ್ನಾ ವರೆಗಿನ ಪಥ ವಿದ್ಯುದೀಕರಣ ಅಂತಿಮವಾಗಿದೆ. ವೆರ್ನಾ- ರೋಹಾ ನಡುವಿನ ಕಾಮಗಾರಿ ಪ್ರಗತಿಯಲ್ಲಿದೆ. ಕೊಂಕಣ ರೈಲ್ವೇ ಪಥದಲ್ಲಿ ಶೇ. 87 ಕಾಮಗಾರಿ ಮುಗಿದಿದೆ. ಸುರಂಗ ಮಾರ್ಗದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಕ್ಷಿಪ್ರಗತಿಯಲ್ಲಿ ಪೂರೈಸಲು ಗಮನ ನೀಡಲಾಗುತ್ತಿದೆ. ಕಾರವಾರ-ತೋಕೂರು ವರೆಗೆ ವಿದ್ಯುದೀಕರಣ ವ್ಯವಸ್ಥೆ ಪೂರ್ತಿಗೊಂಡಿದ್ದರಿಂದ ಮೇ ತಿಂಗಳಿನಿಂದಲೇ ಗೂಡ್ಸ್‌ ರೈಲುಗಳ ಪ್ರಾಯೋಗಿಕ ಓಡಾಟ ನಡೆಯುತ್ತಿದೆ.

ಮಹಾರಾಷ್ಟ್ರದ ರೋಹಾ- ರತ್ನಗಿರಿಯ 204 ಕಿ.ಮೀ. ಹಾಗೂ ಕರ್ನಾಟಕದ ತೋಕೂರು-ಕಾರವಾರದ 239 ಕಿ.ಮೀ. ಸಹಿತ ಒಟ್ಟು 443 ಕಿ.ಮೀ. ದೂರ ವಿದ್ಯುದೀಕರಣವಾಗಿದೆ. ಉಳಿದ ಕಾಮಗಾರಿ ಶೀಘ್ರ ಪೂರ್ಣ ವಾಗಲಿದೆ.
– ಸುಧಾ ಕೃಷ್ಣಮೂರ್ತಿ
ಪಿಆರ್‌ಒ, ಕೊಂಕಣ ರೈಲ್ವೇ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.