ಜೇಡುಹುಳು – ಕಾಂಡ ಕೊರಕ ಹುಳುಗಳ ನಿರ್ವಹಣೆಗಾಗಿ ಇಲ್ಲಿದೆ ಮಾಹಿತಿ


Team Udayavani, Oct 29, 2020, 4:29 PM IST

hula

ವಿಜಯಪುರ: ಜಿಲ್ಲೆಯಲ್ಲಿ ಮಳೆ, ಗಾಳಿ, ಬಿಸಿಲಿನ ವೈಪರಿತ್ಯದಿಂದ ಮಾವಿನ ಗಿಡಗಳಲ್ಲಿ ಜೇಡುಹುಳು ಹಾಗೂ ಕಾಂಡ ಕೊರಕದ ಹುಳುಗಳ ಬಾಧೆ ಕಂಡು ಬಂದಿದೆ. ಇವುಗಳ ಸೂಕ್ತ ನಿರ್ವಹಣೆ ಕುರಿತು ವಿಜಯಪುರ ಜಿಲ್ಲಾ ತೋಟಗಾರಿಕೆ, ಉಪ ನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಅವರು ಮಾವಿನ ಬೆಳೆಗಾರರಿಗೆ ಕೆಲವು ಉಪಯುಕ್ತ ಮಾಹಿತಿ ನೀಡಿದ್ದಾರೆ. ಮಾವಿನ ಗಿಡಗಳಲ್ಲಿ ಚಿಗುರೆಲೆಗಳು ಬರುತ್ತಿವೆ. ಈ ಚಿಗುರೆಲೆಗಳು ತಾಮ್ರ ವರ್ಣದಿದ್ದು ಮೃದುವಾಗಿವೆ. ಎಲೆ ತಿನ್ನುವ ಹುಳುಗಳು ಇಂಥ ಎಲೆಗಳನ್ನು ಸುಲಭವಾಗಿ ಕೆರೆದು, ಕಡಿದು ತಿಂದು ಹಾಕುತ್ತವೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ 2.5 ಮಿ.ಲೀ ಕ್ವಿನಾಲ್‌ ಪಾಸ್‌-25 ಅಥವಾ 2
ಮಿ.ಲೀ ಕ್ಲೋರ್‌ ಪೈರಿಫಾಸ್‌ ಔಷಧಿಯನ್ನು +0.5 ಮಿ.ಲೀ ಮ್ಯಾಕ್ಸಿವೆಟ್‌ಸಿಟಿವೆಟ್‌ ಅಚಿಟಿನ್‌ ಔಷಧಿಯನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಬೆಳಗ್ಗೆ ಸಿಂಪರಣೆ ಮಾಡಬೇಕು. ಇನ್ನು ಸಣ್ಣ ಜೇಡುನುಸಿಗಳು ಎಲೆಗಳನ್ನು ಕೂಡಿಸಿ ಅದರೊಳಗೆ ಸೇರಿಸಿಕೊಂಡು ಜೇಡರ ಬಲೆ ಕಟ್ಟಿ ಎಲೆಗಳನ್ನು ತಿಂದು ಒಣಗಿಸಿ ಬಿಡುತ್ತವೆ. ಇವುಗಳ ಲಕ್ಷಣಗಳು ಕಂಡು ಬಂದಾಗ ಮೊದಲು ಜೇಡರ ಬಲೆಯನ್ನು ಮುಳ್ಳು ಕಂಟಿಯಿಂದ ಬಿಡಿಸಬೇಕು.  ನಂತರ 2.5 ಮಿ.ಲೀ ಡೈಕೋಫಾಲ್‌ -20 ಔಷಧಿಯನ್ನು +0.5 ಮಿ.ಲೀ ಮ್ಯಾಕ್ಸ್‌ವೆಟ್‌/ಸಿಟಿ ವೆಟ್‌ ವೆಟ್ಟಿಂಗ್‌ ಏಜೆಂಟ್‌ ಮಿಶ್ರಣ ಮಾಡಿ ಬೆಳೆಗೆ ಸಿಂಪಡಿಸಬೇಕು. ಕುಡಿಕೊರಕ ಲಕ್ಷಣವೆಂದರೆ ಕುಡಿಗಳಲ್ಲಿ ರಂಧ್ರಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ:ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಕುಡಿಗಳು ಜೋತು ಬಿದ್ದು ಎಲೆಗಳು ಒಣಗುತ್ತವೆ. ಇಂತಹ ಕುಡಿ, ತುದಿಗಳು ರಂಧ್ರವಿರುವ ಜಾಗದಿಂದ 2-3 ಇಂಚು ಕೆಳಗೆ ಕತ್ತರಿಸಿ ಸಂಗ್ರಹಿಸಿ ಸುಡಬೇಕು. ನಂತರ ಅಂತರವ್ಯಾಸಿ ಕೀಟನಾಶಕಗಳಾದ 0.3 ಮಿ.ಲೀ ಇಮಿಡಾಕ್ಲೊಪ್ರಿಡ್‌ ಅಥವಾ ಒಂದು ಮಿ.ಲೀ ಮೊನೊಕ್ರೋಟೊಫಾಸ್‌ ಅಥವಾ 1.7 ಮಿ.ಲೀ ಡೈ ಮಿಥೋಯೇಟದಂಥ ಔಷಧಗಳನ್ನು ಸಿಂಪಡಿಸಿ ಕುಡಿಕೊರಕದ ಹತೋಟಿ ಮಾಡಬಹುದು. ಕಾಂಡಕೊರಕ ಲಕ್ಷಣವೆಂದರೆ ಗಿಡಗಳ ಬುಡಗಳಲ್ಲಿ ಹುಳುಗಳು ರಂಧ್ರ ಕೊರೆದು ಒಳಗಿನಿಂದ ಮೇಲಕ್ಕೆ ಮೇಯುತ್ತ ಹೋಗುತ್ತವೆ.

ರಂಧ್ರದಿಂದ ಕಟ್ಟಿಗೆ ಪುಡಿ ಉದುರಿ ಬಿದ್ದದ್ದು ಕಂಡು ಬರುತ್ತದೆ. ಇಂಥ ರಂಧ್ರಗಳನ್ನು ತಂತಿ ಕಡ್ಡಿಯಿಂದ ಒಳಗೆ ಸೇರಿಸಿ
ಸ್ವತ್ಛಗೊಳಿಸಬೇಕು. ನಂತರ ರಂಧ್ರದೊಳಗೆ ಕೆಳಮುಖವಾಗಿ ಔಷಧ ನಿಲ್ಲಲು ಇನ್ನೊಂದೆರೆಡು ಇಂಚು ಆಳದ ರಂಧ್ರ
ಹಾಕಬೇಕು. ಬಳಿಕ ಡೈಕ್ಲೋರೋವಾಸ್‌ದ ಕೆಲವು ಹನಿಗಳನ್ನು ರಂಧ್ರದಲ್ಲಿ ಸಿರಿಂಜ್‌ ಮೂಲಕ ಬಿಡಬೇಕು. ನಂತರ
ರಂದ್ರವನ್ನು ಜಿಗುಟು ಕೆಸರಿನಿಂದ ಮುಚ್ಚಬೇಕು. ಒಳಗಡೆ ಹುಳು ಇದ್ದರೆ ಸಾಯುತ್ತದೆ. ಮಾಹಿತಿಗಾಗಿ ಸಂಬಂಧಪಟ್ಟ
ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಹಾರ್ಟಿಕ್ಲಿನಿಕ್‌ ವಿಷಯ ತಜ್ಞರಾದ ವಿಜಯಕುಮಾರ್‌ ರೇವಣ್ಣವರ (ಮೊ.
9482053985) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.