ರಾಜ್ಯದ ಮೇಲೆ ವಿಶ್ವಾಸವಿಟ್ಟು ಹೂಡಿಕೆ ಮಾಡಿ
Team Udayavani, Feb 15, 2020, 3:10 AM IST
ಹುಬ್ಬಳ್ಳಿ: “ಕರ್ನಾಟಕದ 2 ಮತ್ತು 3ನೇ ಸ್ತರದ ನಗರ ಗಳಲ್ಲಿ ಉದ್ಯಮ ಹೂಡಿಕೆಗೆ ಮುಂದಾಗಿ, ಉದ್ಯಮ ಪರವಾನಗಿ ಸರಳೀಕರಣ ಸೇರಿ ಎಲ್ಲ ರೀತಿ ಪ್ರೋತ್ಸಾಹ, ಸಹಕಾರ, ಬೆಂಬಲ ನೀಡುತ್ತೇವೆ. ಉದ್ಯಮಸ್ನೇಹಿ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗಿ, ವಿಶ್ವದ ಗಮನ ಸೆಳೆದಿರುವ ಕರ್ನಾಟಕದ ಮೇಲೆ ವಿಶ್ವಾಸವಿಡಿ. ನಿಮಗೆ ಯಾವ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ..’
ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ದೇಶ-ವಿದೇಶಗಳ ಉದ್ಯಮಿಗಳಿಗೆ ನೀಡಿದ ತುಂಬು ಹೃದಯದ ಆಹ್ವಾನ ಹಾಗೂ ಉದ್ಯಮಾ ಕರ್ಷಣೆ ಭರವಸೆ. ಸರ್ಎಂ.ವಿಶ್ವೇಶ್ವರಯ್ಯ ಅವರ ಉದ್ಯಮದ ಧ್ಯೇಯ ವಾಕ್ಯವೇ ನಮ್ಮ ಸರ್ಕಾರದ ಪ್ರಮುಖ ಆರ್ಥಿಕ ಅಂಶವಾಗಿರಿಸಿಕೊಂಡಿದ್ದೇವೆ ಎಂದರು.
ಇಲ್ಲಿನ ಡೆನಿಸನ್ಸ್ ಹೋಟೆಲ್ನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಬೆಂಗಳೂರು ಹೊರ ತಾದ ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲಿ ಉದ್ಯಮ ಹೂಡಿಕೆಗೆ ರಾಜ್ಯ ಸರ್ಕಾರ ಆದ್ಯತೆ ನೀಡು ತ್ತಿದ್ದು, ಉದ್ಯಮಿಗಳಿಗೆ ಎಲ್ಲ ರೀತಿಯ ನೆರವು-ಸಹಕಾರ ನೀಡುವ ಸ್ಪಷ್ಟ ಭರವಸೆ ನೀಡಿದರು.
ಭೂಸ್ವಾಧೀನ ಸರಳಕ್ಕೆ ತಿದ್ದುಪಡಿ: ಉದ್ಯಮಕ್ಕೆ ಕಾಲಮಿತಿಯೊಳಗೆ ಪರವಾನಗಿ, ತ್ವರಿತ ಅನುಮೋದನೆ, ಪೂರಕ ಸೌಲಭ್ಯ, ಅನಗತ್ಯ ತೊಂದರೆ, ಕಿರುಕುಳ ಇಲ್ಲ ದಂತೆ ನೋಡಿಕೊಳ್ಳುತ್ತೇವೆ. ಉದ್ಯಮಸ್ನೇಹಿ ಕೆಲವೇ ರಾಜ್ಯ ಗಳಲ್ಲಿ ಒಂದಾದ ಕರ್ನಾಟಕ, ಆ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಉದ್ಯಮ ಸ್ನೇಹಿ ವಾತಾವರಣ ವೃದ್ಧಿಗೆ ಸರ್ಕಾರ ಬದ್ಧ ವಿದೆ ಎಂದರು.
ಉದ್ಯಮಕ್ಕೆ ಅಗತ್ಯವಿರುವ ಭೂ ಸ್ವಾಧೀನ ವಿಳಂಬ- ತೊಂದರೆ ತಪ್ಪಿಸಲು ಭೂಸ್ವಾಧೀನ ಕಾಯ್ದೆ 109ನೇ ಕಲಂಗೆ ತಿದ್ದುಪಡಿ ತಂದು, ಸರಳಗೊಳಿಸ ಲಾಗಿದೆ. ಅದೇ ರೀತಿ ಕೃಷಿಯೇತರ ಭೂ ಪರಿವರ್ತನೆ 30 ದಿನ ದೊಳಗೆ ಕೈಗೊಳ್ಳುವಂತೆ, ಜತೆಗೆ ಡೀಮ್ಡ್ ಪರವಾನಗಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಉದ್ಯಮ ಸ್ಥಾಪನೆ ಹಾಗೂ ಉದ್ಯಮದಾರರಿಗೆ ಅನುಕೂಲ ವಾಗುವ ನಿಟ್ಟಿ ನಲ್ಲಿ ಬಿಜೆಪಿ ಸರ್ಕಾರ ಪಾರದರ್ಶಕ ಆಡ ಳಿತಕ್ಕೆ ಒತ್ತು ನೀಡಲಿದೆ. ಉತ್ತರ ಕರ್ನಾಟಕ ಉದ್ಯಮ ಹೂಡಿಕೆಗೆ ಪ್ರಾಶಸ್ತ್ಯ ಸ್ಥಳ. ಕೇಂದ್ರ ಸರ್ಕಾರ ಕೈಗೊಂಡ ಮುಂಬೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ 800 ಕಿಮೀ ಇದ್ದು, ಇದರಲ್ಲಿ 400 ಕಿಮೀ ಉತ್ತರ ಕರ್ನಾ ಟಕದ ವ್ಯಾಪ್ತಿಯಲ್ಲೇ ಬರಲಿದೆ ಎಂದರು.
ಬೆಂಗಳೂರು ಹೊರಗಡೆ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮ್ಮೇಳನ ನಡೆಯು ತ್ತಿದ್ದು, ರಾಜ್ಯದ ಇತಿಹಾಸದಲ್ಲಿಯೇ ಇದೊಂದು ದಾಖಲೆ ಕಾರ್ಯಕ್ರಮವಾಗಿದೆ. ನಿರೀಕ್ಷೆಗೂ ಮೀರಿ ಉದ್ಯಮಿಗಳು ಆಗಮಿಸಿರುವುದು ಸಂತಸದ ವಿಚಾರ. ಈ ಸಮ್ಮೇಳನದಲ್ಲಿ ಸಾಂಕೇತಿಕವಾಗಿ ಕೈಗೊಂಡ ಒಡಂಬಡಿಕೆಯಲ್ಲಿಯೇ ಸುಮಾರು 1 ಲಕ್ಷ ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಒಪ್ಪಂದ ಆಗಿರುವುದು ಸಂತಸದ ವಿಚಾರ ಎಂದರು.
ಇತ್ತೀಚೆಗೆ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಿ ವಿಶ್ವದ ವಿವಿಧ ಸುಮಾರು 40ಕ್ಕೂ ಹೆಚ್ಚು ಖ್ಯಾತ ಉದ್ಯಮದಾರರೊಂದಿಗೆ ಸಂವಾದ ನಡೆಸಿದ್ದೆ. ರಾಜ್ಯದಲ್ಲಿ ಹೂಡಿಕೆಗೆ ಮುಂದಾ ಗುವಂತೆ ಮನವಿ ಮಾಡಿದ್ದೆ. ಅಲ್ಲಿ ಸಂವಾದ ನಡೆಸಿದ ಕೆಲವೊಂದು ಉದ್ಯಮದಾರರು ಈ ಸಮ್ಮೇಳನದಲ್ಲಿ ಭಾಗಿಯಾಗಿರುವುದು ಸಂತಸ ಮೂಡಿಸಿದೆ ಎಂದರು.
ವಿವಿಧ ಕ್ಲಸ್ಟರ್ಗಳ ಅಭಿವೃದ್ಧಿ: ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ರಫ್ತಿನಲ್ಲಿ ಪ್ರಮುಖ ರಾಜ್ಯವಾಗಿ ವಿಶ್ವದ ಗಮನ ಸೆಳೆದಿದೆ. ಏರೋಸ್ಪೇಸ್, ಆಟೋಮೊಬೈಲ್, ಎಲೆಕ್ಟ್ರಿಕ್, ಜೈವಿಕ ತಂತ್ರಜ್ಞಾನ ಕ್ಷೇತ್ರ ಗಳಲ್ಲಿ ದೇಶದಲ್ಲಿಯೇ ಖ್ಯಾತಿ ಪಡೆದಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕದಲ್ಲಿ ವಿವಿಧ ಕ್ಲಸ್ಟರ್ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಕೊಪ್ಪಳ ಜಿಲ್ಲೆ ಯಲ್ಲಿ ಆಟಿಕೆ ಸಾಮಾನು, ಗೊಂಬೆಗಳ ತಯಾರಿಕೆ ಕ್ಲಸ್ಟರ್, ಬಳ್ಳಾರಿ ಜಿಲ್ಲೆಯಲ್ಲಿ ಜವಳಿ, ಧಾರವಾಡ ಜಿಲ್ಲೆ ಯಲ್ಲಿ ಎಫ್ಎಂಸಿಜಿ, ಕಲಬುರಗಿಯಲ್ಲಿ ಸೋಲಾರ, ಬೀದರಲ್ಲಿ ಅಗ್ರಿಕಲ್ಚರ್ ಕ್ಲಸ್ಟರ್ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಡಿ.ವಿ. ಸದಾನಂದಗೌಡ, ಸುರೇಶ ಅಂಗಡಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ ಸೇರಿ ಅನೇಕ ಸಂಸದರು, ಶಾಸಕರು, ಉದ್ಯಮಿಗಳು ಪಾಲ್ಗೊಂಡಿದ್ದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ