ಒಡವೆ ವಸ್ತ್ರ; ಮ್ಯಾಚಿಂಗ್ನ ಕಲೆ ಅರಿಯಿರಿ
Team Udayavani, Oct 17, 2020, 11:15 AM IST
ಚಂದದ ದಿರಿಸಿಗೆ ಅಂದದ ಒಡವೆ ಧರಿಸಿದರೇ ಚೆನ್ನ. ಒಡವೆ ಅಂದರೆ ಬಂಗಾರದ್ದೇ ಆಗಬೇಕಿಲ್ಲ. ಚಿನ್ನವನ್ನೇ ನಾಚಿಸುವಷ್ಟು ಚೆನ್ನಾಗಿರುವ ಕೃತಕ ಆಭರಣಗಳು ಈಗ ಎಲ್ಲರ ಮೆಚ್ಚುಗೆ ಪಡೆದಿವೆ. ಹೆಣ್ಣಿನ ಅಂದವನ್ನು ಹೆಚ್ಚಿಸುವ ಒಡವೆಗಳನ್ನು, ಧರಿಸುವ ವಸ್ತ್ರಕ್ಕೆ ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಯಾವ ಉಡುಪಿಗೆ ಯಾವ ಬಗೆಯ ಜ್ಯುವೆಲರಿ ಅಂತ ಹೊಂದಿಸುವುದೂ ಕಲಾತ್ಮಕತೆಯೇ…
-ಮ್ಯಾಚಿಂಗ್ ಮ್ಯಾಚಿಂಗ್ ಬೇಡ
ಹಿಂದೆಲ್ಲಾ, ಉಡುಪಿಗೆ ತಕ್ಕಂತೆ ಜ್ಯುವೆಲರಿ ಧರಿಸುವ ಟ್ರೆಂಡ್ ಇತ್ತು. ಈಗ, ವಿರುದ್ಧ ಬಣ್ಣದ ಬಳೆ, ಸರ, ಕಿವಿಯೋಲೆ ಧರಿಸುವುದೇ ಸ್ಟೈಲ್. ಬಟ್ಟೆ ಹಾಗೂ ಒಡವೆಯನ್ನು ಮಿಕ್ಸ್ ಅಂಡ್ ಮ್ಯಾಚ್ ಮಾಡಿ, ಲುಕ್ಗೊಂದು ಹೊಸ ಸ್ಪರ್ಶ ನೀಡಿ.
-ತಿಳಿ ಬಣ್ಣ ಹುಡುಕಿ
ಧರಿಸಿರುವ ಉಡುಪು, ಮಲ್ಟಿ ಕಲರ್ (ಒಂದಕ್ಕಿಂತ ಹೆಚ್ಚು ಬಣ್ಣ)ನದ್ದಾಗಿದ್ದರೆ, ಅದರಲ್ಲಿ ತಿಳಿಯಾದ ಬಣ್ಣ ಯಾವುದೋ, ಆ ಬಣ್ಣದ ಜ್ಯುವೆಲರಿ ಧರಿಸಿ. ಒಂದು ವೇಳೆ, ತಿಳಿಯಾದ ಬಣ್ಣವೇ ಬಟ್ಟೆಯ ತುಂಬೆಲ್ಲಾ ಆವರಿಸಿದ್ದರೆ, ಬಟ್ಟೆಯನ್ನು ಅತಿ ಕಡಿಮೆ ಆವರಿಸಿರುವ ಬಣ್ಣದ ಜ್ಯುವೆಲರಿ ಧರಿಸಿದರೆ ಚೆನ್ನ. ( ಗಾಢ ಹಸಿರು ಬಣ್ಣದ ಚಿತ್ತಾರವಿರುವ ಬಿಳಿ ಬಣ್ಣದ ಬಟ್ಟೆಗೆ ಹಸಿರು ಬಣ್ಣದ ಜ್ಯುವೆಲರಿ, ಹಳದಿ, ಕೆಂಪು, ನೀಲಿ ಬಣ್ಣದ ಬಟ್ಟೆಗೆ ಹಳದಿ ಆ್ಯಕ್ಸೆಸರೀಸ್ ಒಪ್ಪುತ್ತದೆ)
-ಪ್ರದರ್ಶನ ಬೇಡ
ಊಟಕ್ಕೆ ಉಪ್ಪಿನಕಾಯಿ ಹೇಗೋ, ದಿರಿಸಿಗೆ ಆಭರಣಗಳೂ ಹಾಗೆಯೇ. ಹೆಚ್ಚೆಚ್ಚು ಒಡವೆಗಳನ್ನು, ಅದ್ಧೂರಿ ಎನಿಸುವಂಥ ಆ್ಯಕ್ಸೆಸರೀಸ್ಗಳನ್ನು ಧರಿಸಿದರೆ ಪ್ರದರ್ಶನದ ಗೊಂಬೆಯಂತೆ ಕಾಣಿಸಬಹುದು. ಡ್ರೆಸ್ನ ಅಂದವನ್ನೇ ಒಡವೆ ನುಂಗಿಬಿಡುವುದೂ ಉಂಟು.
-ಸಂದರ್ಭಕ್ಕೆ, ದಿರಿಸಿಗೆ ತಕ್ಕಂತೆ ಧರಿಸಿ
ಆಫೀಸ್ ಪಾರ್ಟಿಗೆ ಯಾವ ಒಡವೆ, ಮದುವೆಗೆ ಯಾವ ಬಗೆಯ ಆಭರಣ, ಕಿಟಿ ಪಾರ್ಟಿಗೆ ಯಾವುದು ಅಂತ ಅರಿತುಕೊಳ್ಳುವುದು ಅಗತ್ಯ. ಸಿಂಪಲ್ ದಿರಿಸಿಗೆ ಅದ್ಧೂರಿ ಸರ-ಕಿವಿಯೋಲೆ, ಅದ್ಧೂರಿ ಡ್ರೆಸ್ಗೆ ಸಿಂಪಲ್ ಒಡವೆ ಧರಿಸಿದರೆ ಚೆನ್ನ.
-ಮೈ ಬಣ್ಣ ಮರೆಯದಿರಿ
ಬಗೆ ಬಗೆ ಬಣ್ಣಗಳ ಜೊತೆ ಪ್ರಯೋಗ ಮಾಡುವುದು ಫ್ಯಾಷನ್ನ ಮೂಲ ಮಂತ್ರ. ಆದರೆ, ಮೈ ಬಣ್ಣಕ್ಕೆ ತಕ್ಕಂತೆ ವಸ್ತ್ರ-ಒಡವೆ ಧರಿಸುವುದು ಜಾಣತನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ
ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು
ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’
ಫ್ಯಾಶನ್ ಶೋ ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ
ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ