Jharkhand: ಸಂಸದ ಧೀರಜ್ ಬಳಿ ಸಿಕ್ಕಿದ್ದು 353 ಕೋಟಿ
ಕೈ ಸಂಸದ ಧೀರಜ್ ಬಳಿ ಸಿಕ್ಕಿದ ಹಣ ಎಣಿಕೆ ಕೊನೆಗೂ ಮುಕ್ತಾಯ
Team Udayavani, Dec 11, 2023, 12:04 AM IST
ಹೊಸದಿಲ್ಲಿ: ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಮತ್ತವರ ಸಹೋದರರಿಗೆ ಸೇರಿದ ಕಂಪೆನಿಗಳಿಂದ ವಶಪಡಿಸಿಕೊಂಡಿದ್ದ ಹಣ ಎಣಿಕೆ ಮುಕ್ತಾಯವಾಗಿದೆ. ಅದರ ಪ್ರಕಾರ ಬರೋಬ್ಬರಿ 350 ಕೋಟಿ ರೂ. ನಗದು ಅವರಿಗೆ ಸೇರಿದ ಸ್ಥಳದಲ್ಲಿ ಇದ್ದದ್ದು ದೃಢಪಟ್ಟಿದೆ. ಅದನ್ನು ಎಣಿಕೆ ಮಾಡಲು ಒಟ್ಟು 40 ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು.
ಇದನ್ನು ಬಲವಾದ ಶಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರಾಹುಲ್ ನೀವೇಕೆ ಮೌನವಾಗಿದ್ದೀರಿ? ಇದು ನವಭಾರತ. ಇಲ್ಲಿ ರಾಜವಂಶದ ಹೆಸರಲ್ಲಿ ಜನರನ್ನು ಶೋಷಣೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ನೀವು ಓಡುತ್ತ ಓಡುತ್ತ ಸುಸ್ತಾಗಿರಬಹುದು, ಆದರೆ ಕಾನೂನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕುಟುಕಿದ್ದಾರೆ. ಮಾತ್ರವಲ್ಲ, ಕಾಂಗ್ರೆಸ್ ಭ್ರಷ್ಟಾಚಾರದ ಭರವಸೆ ನೀಡಿದರೆ, ಮೋದಿ ಯವರು ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯಾಗಿದ್ದಾರೆ. ಜನರಿಂದ ವಸೂಲಿ ಮಾಡಿರುವ ಪ್ರತೀ ರೂ.ಅನ್ನೂ ವಾಪಸ್ ಮರಳಿಸಬೇಕು ಎಂದು ನಡ್ಡಾ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ