Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು
Team Udayavani, Dec 10, 2023, 12:44 AM IST
ಹೊಸದಿಲ್ಲಿ: ಝಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಕುಮಾರ್ ಸಾಹೂ ಅವರಿಗೆ ಸೇರಿದ ಡಿಸ್ಟಿಲರಿ ಮತ್ತು ಇತರ ಸಂಸ್ಥೆಗಳಿಂದ ವಶಪಡಿಸಿಕೊಂಡಿರುವ ಅಕ್ರಮ ಹಣ ದೇಶದಲ್ಲಿಯೇ ಬೃಹತ್ ಪ್ರಮಾಣದ್ದು ಎನ್ನಲಾಗಿದೆ.
ಇದುವರೆಗೆ ಸರಿಸುಮಾರು 300 ಕೋಟಿ ರೂ. ಹಣ ಎಣಿಕೆ ಮಾಡಲಾಗಿದೆ. ಹಲವು ಚೀಲಗಳಲ್ಲಿ ತುಂಬಿರುವ ನೋಟುಗಳ ಎಣಿಕೆ ಇನ್ನೂ ಬಾಕಿ ಇದೆ. ಅಲ್ಲದೆ ಸಾಹೂ ಇನ್ನಷ್ಟು ಸ್ಥಳಗಳಲ್ಲಿ ನಗದು ಸಂಗ್ರಹಿಸಿ ಇರಿಸಿರುವ ಸಂಶಯ ವ್ಯಕ್ತವಾಗಿದೆ. ಝಾರ್ಖಂಡ್, ಪ. ಬಂಗಾಲ, ಒಡಿಶಾಗಳಲ್ಲಿ 7 ಕೊಠಡಿಗಳಲ್ಲಿರುವ 9 ಲಾಕರ್ಗಳನ್ನು ಇನ್ನಷ್ಟೇ ತೆರೆದು ಪರಿಶೀಲಿಸಬೇಕಾಗಿದೆ.
ನಿವಾಸಗಳ ಮೇಲೆ ದಾಳಿ
ಸಾಹೂ ಅವರ ಕಂಪೆನಿಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ದಾಳಿ ನಡೆಸಿದ ಬಳಿಕ ಐಟಿ ಇಲಾಖೆ ಈ ಕಂಪೆನಿಗಳ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಆರಂಭಿಸಿದೆ.
ಶನಿವಾರ ಒಡಿಶಾದ ಬೊಲಾಂಗಿರ್ ಜಿಲ್ಲೆಯ ಸುದಾಪಾರ ಎಂಬಲ್ಲಿ ಒಂದು ಮನೆಯ ಮೇಲೆ ದಾಳಿ ನಡೆಸಿ 20 ಚೀಲಗಳಲ್ಲಿ ತುಂಬಿಸಿ ಇರಿಸಲಾಗಿದ್ದ ನಗದನ್ನು ವಶಕ್ಕೆ ಪಡೆದು, ಕೊಂಡೊ ಯ್ದಿದ್ದಾರೆ. ಶುಕ್ರವಾರದ ವರೆಗೆ ಒಟ್ಟು 156 ಚೀಲಗಳಲ್ಲಿ ನಗದು ಇರಿಸಿದ್ದು ಪತ್ತೆಯಾಗಿತ್ತು. ಶನಿವಾರದ್ದು ಸೇರಿ ದಂತೆ ನಗದು ಚೀಲಗಳ ಸಂಖ್ಯೆ 176ಕ್ಕೆ ಏರಿದೆ. ಅವುಗಳನ್ನು ಎಸ್ಬಿಐಯ ಬೊಲಾಂಗಿರ್ ಶಾಖೆಯಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.
ಮಾಹಿತಿಯನ್ನೇ ನೀಡಿಲ್ಲ
ಯಾವ ಕಾರಣಕ್ಕಾಗಿ ಧೀರಜ್ ಕುಮಾರ್ ಸಾಹೂ ಅವರಿಗೆ ಸಂಬಂಧಿ ಸಿದ ಸ್ಥಳಗಳ ಮೇಲೆ ದಾಳಿ ನಡೆಸಿದೆ ಎನ್ನುವುದರ ಬಗ್ಗೆ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿಲ್ಲ ಎಂದು ಝಾರ್ಖಂಡ್ ಕಾಂಗ್ರೆಸ್ ವಕ್ತಾಕ ರಾಕೇಶ್ ಸಿನ್ಹಾ ದೂರಿದ್ದಾರೆ. ಸಾಹೂ ಹಲವು ವರ್ಷಗಳಿಂದ ಉದ್ದಿಮೆ ನಡೆಸುತ್ತಿದ್ದಾರೆ. ಆತಿಥ್ಯ, ಸಾರಿಗೆ, ಮೀನು ಗಾರಿಕೆ, ಅಬಕಾರಿ ಕ್ಷೇತ್ರಗಳಲ್ಲಿ ಸಾಹೂ ಕುಟುಂಬ ತೊಡಗಿಸಿಕೊಂಡಿದೆ ಎಂದವರು ತಿಳಿಸಿದ್ದಾರೆ.
ಎಲ್ಲೆಲ್ಲಿ ಹಣ ಇರಿಸಲಾಗಿತ್ತು?
ವಶಪಡಿಸಿಕೊಳ್ಳಲಾಗಿರುವ 300 ಕೋಟಿ ರೂ.ಗಳ ಪೈಕಿ ಹೆಚ್ಚಿನ ಮೊತ್ತ ವನ್ನು ಬೊಲಾಂಗಿರ್ನಿಂದಲೇ ವಶಪಡಿ ಸಲಾಗಿದೆ. ಈ ಮೊತ್ತವನ್ನು ಎಂಟರಿಂದ ಹತ್ತು ಕಪಾಟುಗಳಲ್ಲಿ ಸಂಗ್ರಹಿಸಿ ಇರಿಸಲಾಗಿತ್ತು. ಉಳಿದ ಮೊತ್ತವನ್ನು ತಿತ್ಲಾಗಢ, ಸಂಭಾಲ್ಪುರ, ರಾಂಚಿಯಿಂದ ವಶಪಡಿಸಿಕೊಳ್ಳಲಾಗಿದೆ.
ತಲೆಮಾರಿನಿಂದ ತಲೆಮಾರಿಗೆ ಕಾಂಗ್ರೆಸ್
ಭ್ರಷ್ಟಾಚಾರವನ್ನು ಪೋಷಣೆ ಮಾಡಿಕೊಂಡು ಬರುತ್ತಿದೆ ಎನ್ನುವುದಕ್ಕೆ ಈ ದಾಳಿ ಸಾಕ್ಷಿ. ಭ್ರಷ್ಟರಿಂದ ವಶಪಡಿಸಿ ಕೊಳ್ಳಲಾಗಿ ರುವ ಅತ್ಯಂತ ದೊಡ್ಡ ಮೊತ್ತ ಇದು. ವ್ಯವಸ್ಥೆಯ ಲೋಪವನ್ನು ದುರ್ಬಳಕೆ ಮಾಡಿರುವುದಕ್ಕೆ ಇದು ಸಾಕ್ಷಿ -ಮೀನಾಕ್ಷಿ ಲೇಖೀ, ಕೇಂದ್ರ ಸಚಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್