ಪ್ರವಾಸಿ ತಾಣ ಅಂತರಗಂಗೆ ಬೆಟ್ಟದಲ್ಲಿ ಜಂಗಲ್ ಲಾಡ್ಜ್!
ಬಾವಿ, ಔಷಧ ಗಿಡ ಮರಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.
Team Udayavani, Jul 1, 2022, 6:03 PM IST
ಕೋಲಾರ: ಬೆಂಗಳೂರಿಗೆ ಸಮೀಪವಿರುವ ಕೋಲಾರದ ಶತಶೃಂಗ ಬೆಟ್ಟವೆಂದು ಕರೆಯಲ್ಪಡುವ ಅಂತರ ಗಂಗೆ ಬೆಟ್ಟವನ್ನು ಹೇಗಾದರೂ ಮಾಡಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂಬ ಪಣತೊಟ್ಟಿರುವ ಎಸ್ಪಿ ದೇವರಾಜ್ ಅವರು, ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಎಂಡಿ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನ ಜೊತೆಗೆ ಕರೆದುಕೊಂಡು ಬೆಟ್ಟ ಹತ್ತಿಸಿ ಪ್ರಕೃತಿ ಸ್ವರ್ಗದಂತಿರುವ ಸ್ಥಳಗಳನ್ನು ತೋರಿಸಿದರು.
ಇತ್ತೀಚಿಗೆ ಸುರಿದ ಮಳೆಯಿಂದಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಅಂತರಗಂಗೆ ಬೆಟ್ಟಕ್ಕೆ ಬೆಳ್ಳಂಬೆಳಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೆ ಕೆಲವು ಅಧಿಕಾರಿಗಳು ಟ್ರಕ್ಕಿಂಗ್ಗೆ ಬಂದಿದ್ದರು. ಇನ್ನು ಕೆಲವರು ಬೆಟ್ಟದ ಮೇಲೆ ಸಿಗುವ ಹಣ್ಣು ಕಾಯಿ ತಿನ್ನುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದರು.
ಬಹಳ ವರ್ಷದಿಂದ ನನೆಗುದಿಗೆ: ಕೋಲಾರದ ಶತಶೃಂಗ ಬೆಟ್ಟವೆಂದು ಕರೆಯುವ ಅಂತರಗಂಗೆ ಬೆಟ್ಟ ಪ್ರವಾಸಿ ತಾಣವಾಗದೆ, ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಅಂತರಗಂಗೆ ಬೆಟ್ಟದಲ್ಲಿ ಇತ್ತೀಚಿಗೆ ಸಂಸದ ಎಸ್ ಮುನಿಸ್ವಾಮಿ ನೇತೃತ್ವದಲ್ಲಿ ಸುಮಾರು 20 ಸಾವಿರ ಮಂದಿ ಭಾಗಿಯಾಗಿ ವಿಶ್ವ ಯೋಗ ದಿನಾಚರಣೆ ಆಚರಿಸಿದ ಬೆನ್ನಲ್ಲೇ ಈಗ ಜಿಲ್ಲೆಯವರೇ ಆದ ಎಸ್ಪಿ ಡಿ. ದೇವರಾಜ್ ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಎಂಡಿ ಮನೋಜ್ ಕುಮಾರ್ ರೆಡ್ಡಿ, ಅರಣ್ಯ ಇಲಾಖೆ ಸಿಸಿಎಫ್ ಲಿಂಗಾರಾಜು, ಡಿಎಫ್ಒ ಶಿವಶಂಕರ್ ಸೇರಿದಂತೆ ಇತರೆ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದರು.
ಬೆಳ್ಳಂಬೆಳಗ್ಗೆ ಅಂತರಗಂಗೆ ಬೆಟ್ಟವನ್ನು ಟ್ರೆಕ್ಕಿಂಗ್ ಮಾಡಿಸಿ, ಬೆಟ್ಟದಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯ ದರ್ಶಿಸಿ, ಬಸವನ ಬಾಯಲ್ಲಿ ನೀರು ಬರುವುದು, ಬೆಟ್ಟದಿಂದ ನೀರು ಹರಿದು ಧುಮುಕುವ ಫಾಲ್ಸ್, ಗುಹೆ, ಕೋಟೆ, ಬಾವಿ, ಔಷಧ ಗಿಡ ಮರಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.
ಸುಂದರವಾದ ಸ್ಥಳಗಳು: ಬೆಂಗಳೂರಿಗೆ ಬಹಳ ಹತ್ತಿರವಾದ ಅಂತರಗಂಗೆ ಬೆಟ್ಟದಲ್ಲಿ ಸುಂದರವಾದ ಸ್ಥಳಗಳು ಇವೆ. ಪರಿಸರ ಜೊತೆ ಬೆರೆಯುವುದಕ್ಕೆ ಜಂಗಲ್ ಲಾಡ್ಜ್ ಕಡೆಯಿಂದ ಏನಾದರೂ ಅಭಿವೃದ್ಧಿ ಮಾಡಬೇಕು ಎಂದು ಎಂಡಿ ಮನೋಜ್ ಕುಮಾರ್ ರೆಡ್ಡಿ ಅವರಲ್ಲಿ ಮನವಿ ಮಾಡಿದರು.
ಜಂಗಲ್ ಲಾಡ್ಜ್$ ಅಂಡ್ ರೆಸಾರ್ಟ್ಸ್ನ ಎಂಡಿ ಮನೋಜ್ ಕುಮಾರ್ ಮಾತನಾಡಿ, ಅಂತರಗಂಗೆ ಬೆಟ್ಟ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಬೆಂಗಳೂರಿನ ಯುವಕ, ಯುವತಿಯರು ಟ್ರಕ್ಕಿಂಗ್ಗೆ ಇಂತಹ ಜಾಗಗಳಿಗೆ ಬರುತ್ತಾರೆ. ಇನ್ನು ಅವರಿಗೆ ಮಾತ್ರವಲ್ಲದೆ ಜನಸಾಮಾನ್ಯರು ಬಂದು ಈ ಪರಿಸರ ವಾತಾವರಣದಲ್ಲಿ ಸಂತಸಪಟ್ಟು ಹೋಗುವ ದೃಷ್ಟಿ ಇಟ್ಟುಕೊಂಡು ಮೊದಲು ಜಂಗಲ್ ಕ್ಯಾಂಪ್ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಅಂತರಗಂಗೆ ಬೆಟ್ಟ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗ. ಯುವತಿಯರು ಟ್ರಕ್ಕಿಂಗ್ಗೆ ಬರುತ್ತಾರೆ. ಅಲ್ಲದೆ, ಸಾಮಾನ್ಯರು ಈ ಪರಿಸರ ವಾತಾವರಣದಲ್ಲಿ ಸಂತಸಪಟ್ಟು ಹೋಗುವ ದೃಷ್ಟಿಯಿಂದ ಜಂಗಲ್ ಕ್ಯಾಂಪ್ ಮಾಡುತ್ತೇವೆ.
●ಮನೋಜ್ ಕುಮಾರ್,
ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್ ಎಂಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ