ಕತಾರ್, ಕುವೈಟ್ನ ಕರಾವಳಿ ಜನರ ಏರ್ಲಿಫ್ಟ್ ಏಕಿಲ್ಲ?
Team Udayavani, May 9, 2020, 11:22 AM IST
ಮಂಗಳೂರು: ಕೋವಿಡ್ ನಿಂದಾಗಿ ದುಬಾೖ ಯಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಕರಾವಳಿ ಭಾಗದ ಜನರನ್ನು ಕರೆ ತರಲು ಮೊದಲ ವಿಮಾನವು ಮೇ 14ರಂದು ಮಂಗಳೂರಿಗೆ ಆಗಮಿಸಲಿದ್ದರೆ ಅತ್ತ ಕತಾರ್, ಕುವೈಟ್, ಒಮನ್, ಬಹ್ರೈನ್ನಲ್ಲಿರುವ ಕರಾವಳಿ ಭಾಗದ ಜನರು ಮಾತ್ರ ಕರ್ನಾಟಕಕ್ಕೆ ವಿಮಾನ ಸೇವೆ ಒದಗಿಸದಿರುವುದಕ್ಕೆ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕತಾರ್, ಕುವೈಟ್, ಒಮನ್, ಬಹ್ರೈನ್ ಭಾಗದಲ್ಲಿ ಕರಾವಳಿ ಭಾಗದ ಸಾವಿರಾರು ಜನರು ಉದ್ಯೋಗ ನಿಮಿತ್ತ,
ವಿಸಿಟಿಂಗ್ ವೀಸಾ ಮೂಲಕ ತೆರಳಿ ಸದ್ಯ ಕೋವಿಡ್ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇರಳ, ತಮಿಳು ನಾಡು, ಮುಂಬಯಿ ಸಹಿತ ವಿವಿಧ ಭಾಗಗಳ ಜನರನ್ನು ಕರೆತರಲು ಅಲ್ಲಿನ ಸರಕಾರ ವಿಮಾನ ಸೇವೆ ಮಾಡಿದ್ದರೂ ಕರ್ನಾಟಕದಿಂದ ವಿಮಾನ ಸೇವೆ ಮಾಡಿಲ್ಲವೇಕೆ? ಎಂದು ಅನಿವಾಸಿ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುವೈಟ್ನಲ್ಲಿರುವ 3,000ಕ್ಕೂ ಅಧಿಕ ಜನರು ಊರಿಗೆ ತೆರಳುವ ನಿರೀಕ್ಷೆಯಲ್ಲಿದ್ದಾರೆ. ವಿಸಿಟಿಂಗ್ ವೀಸಾದಲ್ಲಿ ಬಂದವರ
ವೀಸಾ ಅವಧಿ ಮುಗಿದಿದೆ. ಜತೆಗೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಕೂಡ ಕರ್ನಾಟಕಕ್ಕೆ ಬರಲು ಉತ್ಸುಕ ರಾಗಿದ್ದಾರೆ ಎಂದು ಅನಿವಾಸಿ ಭಾರತೀಯರಾದ ಮೋಹನ್ದಾಸ್ ಕಾಮತ್ “ಉದಯವಾಣಿ’ಗೆ ತಿಳಿಸಿದ್ದಾರೆ.
ವಿಮಾನಯಾನ ಸಚಿವರ ಜತೆಗೆ ಚರ್ಚೆ
ಮೇ 9ರಂದು ಕೇಂದ್ರ ವಿಮಾನಯಾನ ಸಚಿವರ ಜತೆಗೂ ಈ ಬಗ್ಗೆ ಚರ್ಚಿಸಿ ಕರ್ನಾಟಕಕ್ಕೆ ಬರುವವರನ್ನು ಕರೆತರುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ