ಕುಣಿಗಲ್: ಕತ್ತು ಕೊಯ್ದು ಅಪರಿಚಿತ ವ್ಯಕ್ತಿಯ ಕೊಲೆ
Team Udayavani, Jan 22, 2022, 11:58 AM IST
ಕುಣಿಗಲ್: ದುಷ್ಟಕರ್ಮಿಗಳು ವ್ಯಕ್ತಿಯೊಬ್ಬನ ಕತ್ತನ್ನು ಅರಿತವಾದ ಅಸ್ತ್ರದಿಂದ ಕೊಯ್ದು ಕೊಲೆ ಮಾಡಿ ಹುಲಿ ಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ದೀಪಾಬುಂದಿ ಕೆರೆಗೆ ಎಸೆದು ಘಟನೆ ಬೆಳಕಿಗೆ ಬಂದಿದೆ.
ಸುಮಾರು 55ರಿಂದ 60 ವರ್ಷದ ಅಪರಿಚಿತ ವ್ಯಕ್ತಿಯನ್ನು ಯಾರೋ ದುರಾತ್ಮರು ಅರಿತವಾದ ಆಯುದದಿಂದ ಕತ್ತಿನ ಕೆಳಭಾಗದಲ್ಲಿ ಕೊಯ್ದು ಕೊಲೆ ಮಾಡಿ ಎಸೆದು ಹೋಗಿದ್ದಾರೆ ಎಂದು ಸಿಪಿಐ ಗುರುಪ್ರಸಾದ್ ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಕೊಲುಮುಖ ದವನ್ನಾಗಿದ್ದು, ಸಾದರಣ ಮೈಕಟ್ಟು, ತಲೆಯಲ್ಲಿ ಕಪ್ಪು ಮತ್ತು ಬಳಿ ಮಿಶ್ರೀತ ಮೂರು ಇಂಚು ಕೂದಲಿದ್ದು, ಎಡಗೈ ಮೇಲೆ ಅಂಜನಮ್ಮ ಎಂದು ಅಚ್ಚೆಯಿದೆ. ಹೀಗಾಗಿ ಯಾರಾದರು ವಾರಸ್ಸುದಾರರು ಇದ್ದಲ್ಲಿ ಮಾಹಿತಿಗಾಗಿ 9480802936, 9480802964 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.