ಕುಷ್ಟಗಿ:ನಿರಂತರ ಆದಾಯ ನೀಡುವ ಚೆಂಡು ಹೂವು- ಎಕರೆಗೆ ಒಂದು ಲಕ್ಷ ರೂ. ಆದಾಯ


Team Udayavani, May 23, 2023, 6:56 PM IST

ಕುಷ್ಟಗಿ:ನಿರಂತರ ಆದಾಯ ನೀಡುವ ಚೆಂಡು ಹೂವು- ಎಕರೆಗೆ ಒಂದು ಲಕ್ಷ ರೂ. ಆದಾಯ

ಕುಷ್ಟಗಿ: ಚೆಂಡು ಹೂವು ಎಲ್ಲ ಋತುಮಾನಗಳಲ್ಲಿ ಬೆಳೆಯುವ ಬೆಳೆ. ಬಹುತೇಕವಾಗಿ ದಸರಾ, ದೀಪಾವಳಿ ಹಬ್ಬದ ವೇಳೆಗೆ ಕಟಾವಿಗೆ ಬರುತ್ತದೆ. ತಾಲೂಕಿನ ವಣಗೇರಾ ಗ್ರಾಮದ ರೈತರೊಬ್ಬರೂ ಬೇಸಿಗೆಯ ಸಂದರ್ಭದಲ್ಲೂ ಈ ಬೆಳೆ ಬೆಳೆದು ಎಕರೆಗೆ 1 ಲಕ್ಷ ರೂ. ಆದಾಯಗಳಿಸಿದ್ದಾರೆ.

ಹೌದು ತಾಲೂಕಿನ ವಣಗೇರಾ ಗ್ರಾಮದ ರೈತ ಹನುಮಂತಪ್ಪ ಉಚ್ಚೆಳ್ಳಿ ಹಲವು ವರ್ಷಗಳಿಂದ ಸುಗಂ , ಚಂಡು ಹೂವು, ಗಲಾಟಿ ಹೂವುಗಳನ್ನು ನಿರಂತರ ಬೆಳೆಯುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ರೈತ ಹಾಗೂ ಮಾರಾಟಗಾರ ಮಧ್ಯೆ ಒಪ್ಪಂದದ ದರದಲ್ಲಿ ಹೂವುಗಳನ್ನು ಬೆಳೆಯುವ ರೈತ ಹನುಮಂತಪ್ಪ ಉಚ್ಚೆಳ್ಳಿ ಅವರು, ಚೆಂಡು ಹೂವು ಒಪ್ಪಂದದನ್ವಯ ಬೇಸಿಗೆಯಲ್ಲಿಯೂ ಬೆಳೆದಿದ್ದಾರೆ. ಇವರ ತೋಟದ ಚೆಂಡು ಹೂವು ಇನ್ನೂ 15 ದಿನಗಳಲ್ಲಿ ಕಟಾವು ಕೊನೆಗೊಳ್ಳುತ್ತಿದ್ದು, ಮುಂದಿನ ದಸರಾ, ದೀಪಾವಳಿ ಹಬ್ಬಕ್ಕಾಗಿ ಸುಗಂಧಿ , ಗಲಾಟಿ, ಚೆಂಡು ಹೂವಿನ ಬೆಳೆಯೊಂದಿಗೆ ಕುಂಬಳಕಾಯಿ ಬಳ್ಳಿ ನಾಟಿ ಮಾಡಿದ್ದಾರೆ.

ರೈತ ಹನುಮಂತಪ್ಪ ಉಚ್ಚೆಳ್ಳಿ ಅವರ ಪ್ರಕಾರಮಳೆಗಾಲದಲ್ಲಿ ಚೆಂಡು ಹೂವು ಗಿಡಗಳು ಎತ್ತರವಾಗಿ ಬೆಳೆದು ಹೂವುಗಳು ಹೆಚ್ಚು ಅರಳಿ ಇದರ ಪ್ರಮಾಣ ಎರಡ್ಮೂ ರು ಪಟ್ಟು ಅಧಿ ಕವಾಗಿರುತ್ತದೆ. ಆದರೆ ಬೇಸಿಗೆಯಲ್ಲಿ ಹಾಗಲ್ಲ ಇಳುವರಿ ಕಡಿಮೆ ಇದ್ದರೂ
ಮಾರುಕಟ್ಟೆಯಲ್ಲಿ ಎರಡ್ಮೂರು ಪಟ್ಟು ದರ ಇರುತ್ತಿದೆ. ಮಾರಿಗೋಲ್ಡ್‌ ಹೈಬ್ರಿàಡ್‌ ತಳಿಯ ಈ ಚೆಂಡು 1 ತೊಲೆ ಬೀಜ 1 ಸಾವಿರಕ್ಕೆ 2,250 ರೂ. ಇದನ್ನು ನರ್ಸರಿಯಲ್ಲಿ ಬೆಳೆಸಿಕೊಡಲು 1 ಟ್ರೇಗೆ (98 ಸಸಿ) 400 ರೂ. ವೆಚ್ಚವಾಗಿದೆ. ನಾಟಿ ಮಾಡಿದ ಒಂದು ತಿಂಗಳಿಗೆ ಇಳುವರಿ ಆರಂಭವಾಗುತ್ತಿದ್ದು, ದಿನವೂ ಕಟಾವು ಆಗುವ ಬೆಳೆ ಇದಾಗಿದೆ. ಎರಡೂವರೆ ತಿಂಗಳಿನವರೆಗೂ ಇಳುವರಿ ಸಿಗುತ್ತಿದೆ. ಆರಂಭದಲ್ಲಿ ಪ್ರತಿ ದಿನ 1 ಟನ್‌ ಸರಾಸರಿ ಇಳುವರಿ ಕೊನೆಯ ಹಂತದಲ್ಲಿ 30 ಕೆ.ಜಿ. ಸಿಗುತ್ತಿದೆ. ಇದರಿಂದ 1 ಲಕ್ಷ ರೂ. ಆದಾಯ ಬರುತ್ತಿದೆ.

ಬೀಜ, ಗೊಬ್ಬರ ನಿರ್ವಹಣೆ ಖರ್ಚು 25 ಸಾವಿರ ರೂ. ಆದರೆ ನಿವ್ವಳ ಲಾಭ 75 ಸಾವಿರ ರೂ. ಸಿಗಲಿದ್ದು ಇದೇ ಬೆಳೆ ಆಗಸ್ಟ್‌, ಸೆಪ್ಟೆಂಬರ್‌, ನವೆಂಬರ ತಿಂಗಳಲ್ಲಿ ಆಗಿದ್ದಲ್ಲಿ 1 ಕರೆಗೆ 3 ಟನ್‌ ನಷ್ಟು ಇಳುವರಿ ಸಿಗಲಿದೆ. ನಮಗೆ ಮಾರುಕಟ್ಟೆ ದರದ ಏರಿಳಿತ ಅನ್ವಯಿಸುವುದಿಲ್ಲ. ನಾವು ಹೂವು ಮಾರಾಟಗಾರರೊಂದಿಗೆ ನಿಗದಿತ ಒಂದು ದರ ಒಪ್ಪಂದ ಮಾಡಿಕೊಂಡಿರುತ್ತೇವೆ, ನಾವು ಈ ಬೆಳೆದ ಬೆಳೆಗೆ ನಷ್ಟವಿಲ್ಲ ನಿರಂತರ ಆದಾಯವಿದೆ ಎನ್ನುತ್ತಾರೆ ರೈತ ಹನುಮಂತಪ್ಪ ಉಚ್ಚೆಳ್ಳಿ.

ನಮಗೆ ಹೂವು ಬೆಳೆಯಿಂದ ನಷ್ಟವಿಲ್ಲ. ಹವಾಮಾನ ವೈಪರಿತ್ಯ ಹೊರತು ಪಡಿಸಿದರೆ ಸದಾ ಆದಾಯ ತರುವ ಬೆಳೆಯಾಗಿದೆ. ಕೊಳವೆಬಾವಿ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಈಗಾಗಲೇ ಹತ್ತಾರು ಕೊಳವೆಬಾವಿ ಹಾಕಿಸಿದ್ದೇನೆ. ಲಭಿಸುವ ನೀರಿನಲ್ಲಿ ಹೂವು ಬೆಳೆ ಬೆಳೆಯುತ್ತಿರುವೆ. ಕಳೆದ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಸಮೃದ್ಧ ಇಳುವರಿ ಇದ್ದಾಗ್ಯೂ ಮಾರಾಟವಾಗದೇ ಜಮೀನಿನಲ್ಲಿ ಹರಗಿದ್ದೇನೆ. ಈ ಹೂವು ಬೆಳೆ ನಷ್ಟಕ್ಕೆ ಸಂಬಂಧಿಸಿದ ಅ ಧಿಕಾರಿಗಳು ಬಂದು ಪರಿಶೀಲಿಸಿ ಹೋಗಿದ್ದರೂ 1 ರೂ. ಪರಿಹಾರ ಸಿಕ್ಕಿಲ್ಲ.
ಹನುಮಂತಪ್ಪ ಉಚ್ಚೆಳ್ಳಿ, ಹೂವು ಬೆಳೆಗಾರ, ವಣಗೇರಾ

ಹನುಮಂತಪ್ಪ ಉಚ್ಚೆಳ್ಳಿ ಪ್ರತಿ ವರ್ಷವೂ ಪರಿಶ್ರಮದಿಂದ ಹೂವು ಬೆಳೆಯುತ್ತಿದ್ದಾರೆ. ಅವರ ಜಮೀನಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಂತರ್ಜಲ ಕೊರತೆಯ ನಡುವೆಯೂ ಲಭಿಸಿದ ನೀರಲ್ಲಿ ಕಷ್ಟ ಪಟ್ಟು ಬೆಳೆ ತೆಗೆಯುತ್ತಿದ್ದಾರೆ. ಇಂತಹ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯ ಪ್ರೋತ್ಸಾಹ ಅಗತ್ಯವಾಗಿದೆ.
ಮುತ್ತಪ್ಪ ಬಾವಿಕಟ್ಟಿ, ವಣಗೇರಾ ಗ್ರಾಮಸ

ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.